rtgh

Kannada Deevige 10th Halagali Bedaru Notes | 10ನೇ ತರಗತಿ ಹಲಗಲಿ ಬೇಡರು (ಜನಪದ ಲಾವಣಿ) ಕನ್ನಡ ನೋಟ್ಸ್ 

10ನೇ ತರಗತಿ ಹಲಗಲಿ ಬೇಡರು ಕನ್ನಡ ನೋಟ್ಸ್ ಪ್ರಶ್ನೆ ಉತ್ತರಗಳು, 10th Standard Halagali Bedaru Kannada Notes Question Answer Summary Mcq Pdf Download in Kannada Medium Karnataka State Syllabus 2023 Kseeb Solutions for Class 10 Kannada Poem 3 Notes, 10th Class Kannada 3rd Poem Notes Kannada Halagali Bedaru Notes Halagali Bedaru Kannada Question Answer Halagali Bedaru Notes Kannada Deevige halagali bedaru 10th Class Notes Guide Text Book Solutions Sslc Kannada 3rd Poem Notes

 

Halagali Bedaru Notes Pdf 2023

Contents hide

Halagali Bedaru Kannada question answer

ಬಹು ಆಯ್ಕೆ ಪ್ರಶ್ನೆಗಳು

೧. ನಾಮಪದಕ್ಕೆ ಉದಾಹರಣೆ .

ಅ] ವಸಂತ ಆ] ಕುರುಡ ಇ] ಕುಂಟ ಈ] ವಿಜ್ಞಾನಿ

೨. ‘ಪಥ’ ಪದದ ಅರ್ಥ

ಅ] ರಥ ಆ] ಶಪಥ ಇ] ದಾರಿ ಈ] ಪಂಥ.

೩. ‘ವಸಂತ’ ಪದದ ಅರ್ಥ

ಅ] ಸಮೃದ್ಧಿ ಆ] ಹೊಸದು ಇ] ಸಂತ ಇ] ಮತ.

೪. ‘ಕತ್ತಲೆಯೊಳಗೆ ಬಿಡಿಸಿ ಬರೆಯಿರಿ.

ಅ] ಕತ್ತಲೆ+ಒಳಗೆ ಆ] ಕತ್ತಲೆಯ+ಒಳಗೆ ಇ] ರಾತ್ರಿ+ಒಳಗೆ ಈ] ಕತ್ತಲೆಯಿಂದ+ಒಳಗೆ

೫. ‘ಸೇತುವೆ+ಆಗೋಣ’ ಇಲ್ಲಿರುವ ಸಂಧಿ

ಅ] ಆಗಮ  ಆ] ಆದೇಶ ಇ] ಸವರ್ಣಧೀರ್ಘ ಈ] ಗುಣ.

೬. ‘ಕಾಡುಮೇಡು’ ಈ ವ್ಯಾಕರಣಾ೦ಶಕ್ಕೆ ಉದಾಹರಣೆ.

ಅ] ದ್ವರುಕ್ತಿ ಆ] ಜೋಡುನುಡಿ ಇ] ನುಡಿಗಟ್ಟು ಈ] ಅನುಕರಣಾವ್ಯಯ.

೭. ‘ಹಚ್ಚುವುದು’ ಇಲ್ಲಿರುವ ಧಾತು

ಅ] ಹಚ್ಚಿ ಆ] ಅಚ್ಚಿ ಇ] ಹಚ್ಚು ಈ] ಅವುದು.

೮. ಇಲ್ಲಿರುವ ಕ್ರಿಯಾಪದ ಯಾವುದು.

ಅ] ಕಟ್ಟುವುದು ಆ] ಬಿರುಗಾಳಿ ಇ] ಭಾವಗೀತೆ ಈ] ಭರವಸೆ .

೯. ‘ಭರವಸೆಗಳ ’ ಇದು ಈ ವಿಭಕ್ತಿಯಾಗಿದೆ

ಅ] ಪ್ರಥಮಾ ಆ] ತೃತೀಯಾ ಇ] ಷಷ್ಠೀ ಈ] ಸಪ್ತ ಮೀ.

೧೦. ‘ಬಿರುಗಾಳಿಗೆ’ ಇದು ಈ ವಿಭಕ್ತಿ  ಪ್ರತ್ಯಯ.

ಅ] ಪ್ರಥಮಾ ಆ] ತೃತೀಯಾ ಇ] ಷಷ್ಠೀ ಈ] ಚತುರ್ಥೀ

೧೧. ‘ಅಲ್ಲಿ’ ಇಲ್ಲಿರುವ ಪ್ರತ್ಯಯ

ಅ] ಪ್ರಥಮಾ ಆ] ಚತುರ್ಥಿ ಇ]ಸಪ್ತ ಮೀ. ಈ] ಪಂಚಮೀ.

೧೨. ದ್ವಿತೀಯಾ ವಿಭಕ್ತಿಯ ಕಾರಕಾರ್ಥ

ಅ] ಕಾರಣಾರ್ಥ ಆ] ಸಂಪ್ರದಾನ ಇ] ಕಮಾರ್ಥ ಈ] ಅಧಿಕರಣ.

೧೩. ‘ಮಾಡಲಿ’ ಇಲ್ಲಿರುವ ಕ್ರಿಯಾಪದ

ಅ] ವಿಧ್ಯರ್ಥಕ ಆ] ನಿಷೇಧಾರ್ಥಕ ಇ] ಸಂಭವನಾರ್ಥಕ ಈ] ಧಾತು

೧೪) ಮಾಡುತ್ತಾನೆ ಪದದ  ನಿಷೇಧಾರ್ಥಕ ರೂಪ.

ಎ) ಮಾಡಲಿ ಬಿ) ಮಾಡನು

ಸಿ) ಮಾಡು

ಡಿ) ಮಾಡುವಳು

೧೫) ಅವರು ಬೆಂಗಳೂರಿಗೆ ಹೋದರು, ಇಲ್ಲಿ ಗೆರೆ ಎಳೆದಿರುವ ಪದದ ವಿದ್ಯರ್ಥಕ ರೂಪ.

ಎ) ಹೋಗಲಿ ಬಿ) ಹೋಗಿದ್ದರು ಸಿ) ಹೋಗಲಿದ್ದಾರೆ ಡಿ) ಹೋದಾನು

೧೬) ಮಕ್ಕಳು  ಶಾಲೆಗೆ ಹೋದಾರು ಇಲ್ಲಿ ಗೆರೆ ಎಳೆದಿರುವ ಪದ ವರ್ತಮಾನ ಕಾಲಕ್ಕೆ ಪರಿವರ್ತಿಸಿದಾಗ ಆಗುವ ಶಬ್ಧ .

ಎ) ಹೋಗವರು  ಬಿ) ಹೋಗಬಹುದು ಸಿ) ಹೋಗಲಿ ಡಿ) ಹೋಗುತ್ತಿದ್ದಾರೆ

೧೭) ‘ತಿನ್ನಳು’ ಈ ಪದದ  ರೂಪ ಯಾವುದು.

ಎ) ನಿಷೇದಾರ್ಥಕ ಬಿ) ಸಂಭಾವನಾರ್ಥಕ ಸಿ) ವಿಶೇಷಾರ್ಥಕ ಡಿ) ವಿದ್ಯರ್ಥಕ

೧೮) ಪರೀಕ್ಷೆಯಲ್ಲಿ ಪ್ರಶ್ನೆ ಸುಲಭವಾಗಿ ಬಂದಿದೆ. ಈ ವಾಕ್ಯದಲ್ಲಿ ಬಂದೀತು ಎ೦ಬುದು ಯಾವ ವಿಧದ ಕ್ರಿಯಾರೂಪ.

ಎ) ಸಂಭಾವನಾರ್ಥಕ ಬಿ) ವಿದ್ಯರ್ಥಕ ಸಿ) ನಿಷೇಧಾರ್ಥಕ ಡಿ) ಭಾವಾತ್ಮಕ

೧೯) ‘ತಿಂದಾಳು’ ಎಂಬುದು ಯಾವ ಕ್ರೀಯಾ ರೂಪ ಪದ.

ಎ) ವಿದ್ಯರ್ಥಕ ಬಿ) ಸಂಭಾವನಾರ್ಥಕ ಸಿ) ನಿಷೇಧಾರ್ಥಕ ಡಿ) ಧಾತು ರೂಪ

೨೦) ‘ತಿನ್ನು’ ಪದದ  ವಿದ್ಯರ್ಥಕ ರೂಪ.

ಎ) ತಿನ್ನಲಿ ಬಿ) ತಿಂದಾನು ಸಿ) ತಿನ್ನುತ್ತಾನೆ ಡಿ) ತಿಂದನು

೨೧) ‘ಮಾಡು’ ಈ ಪದದ ನಿಷೇಧಾರ್ಥಕ ರೂಪ.

ಎ) ಮಾಡನು

ಬಿ) ಮಾಡುವುದು

ಸಿ) ಮಾಡುವೆ

ಡಿ) ಮಾಡಿದರು

೨೨) ‘ಓದರು’ ಪದದ  ಕ್ರಿಯಾಪದದ ಈ ರೂಪದಲ್ಲಿದೆ.

ಎ) ನಿಷೇದಾರ್ಥಕ ಬಿ) ವಿದ್ಯರ್ಥಕ ಸಿ) ಸಂಭಾವನಾರ್ಥಕ ಡಿ) ಧಾತು

೨೩) ಕ್ರಿಯಾಪಗಳ  ಮೂಲ ರೂಪ.

ಎ) ಧಾತು ಬಿ) ಸಾಧಿತ ಧಾತು ಸಿ) ಸಂಭಾವನಾರ್ಥಕ ಡಿ) ನಿಷೇಧಾರ್ಥಕ

೨೪) ‘ಓದು’ ಈ ಪದದ  ವಿದ್ಯಾರ್ಥಕ.

ಎ) ಓದಲಿ ಬಿ) ಓದು ಸಿ) ಓದಾನು ಡಿ) ಓದಿಯಾನು

೨೫) ‘ಓದಿಯಾರು’ ಈ ಕ್ರಿಯಾಪದ ಈ ರೂಪದಲ್ಲಿದೆ.

ಎ) ನಿಷೇಧಾರ್ಥಕ ಬಿ) ಸಂಭಾವನಾರ್ಥಕ ಸಿ) ವಿದ್ಯರ್ಥಕ ಡಿ) ಆತ್ಮಾರ್ಥಕ

೨೬) ‘ನೋಡು’ ಧಾತುವಿನ ಸಂಭಾವನಾರ್ಥಕ ರೂಪವಿದು.

ಎ) ನೋಡಲಿ ಬಿ) ನೋಡಿಯಾನು ಸಿ) ನೋಡನು  ಡಿ) ನೋಡುವುನು

೨೭)“ತಜ್ಞರು ಬಹಳಷ್ಟು  ಪುಸ್ತಕಗಳನ್ನೂ  ಓದಲಿ” ಈ ವಾಕ್ಯದಲ್ಲಿರುವ ಕ್ರಿಯಾ ಪದದ  ಈ ರೂಪದಲ್ಲಿದೆ .

ಎ) ಸಂಭಾವನಾರ್ಥಕ ಬಿ) ವಿದ್ಯರ್ಥಕ ಸಿ) ನಿಷೇಧಾರ್ಥಕ ಡಿ) ಆತ್ಮಾರ್ಥಕ

೨೮)“ನನ್ನ ಬಳಿ ಅವನ ಆಟ ನಡೆಯದು” ಈ ವಾಕ್ಯದಲ್ಲಿ ಗೆರೆ ಎಳೆದ ಪದದ ಸಂಭಾವನಾರ್ಥಕ ರೂಪ.

ಎ) ನಡೆದೀತು ಬಿ) ನಡೆಯಲಿ ಸಿ) ನಡೆದಾನು ಡಿ) ನಡೇಯಲಿಲ್ಲ

೨೯) “ಅವನು ತಪ್ಪು  ಮಾಡಿಯಾನು” ಈ ವಾಕ್ಯದಲ್ಲಿರುವ ಕ್ರಿಯಾ ರೂಪವು 

ಎ) ಸಂಭಾವನಾರ್ಥಕ ಬಿ) ನಿಷೇಧಾರ್ಥಕ ಸಿ) ವಿದ್ಯರ್ಥಕ ಡಿ) ಆತ್ಮಾರ್ಥಕ

ಉತ್ತರಗಳು:

೧]ಅ  ೨]ಇ  ೩]ಅ  ೪]ಆ  ೫]ಅ  ೬]ಆ  ೭]ಇ  ೮]ಅ  ೯]ಇ  ೧೦]ಈ  ೧೧]ಇ  ೧೨]ಇ  ೧೩]ಅ

೧೪].ಬಿ,  ೧೫].ಎ,  ೧೬].ಡಿ,  ೧೭].ಎ,  ೧೮].ಎ,  ೧೯.]ಬಿ,  ೨೦].ಎ,

೨೧]ಎ ,   ೨೨].ಎ,  ೨೩].ಎ,  ೨೪].ಎ,  ೨೫].ಬಿ,  ೨೬].ಬಿ,  ೨೭.]ಬಿ,

೨೮].ಎ,  ೨೯.]ಎ,

ವಿಶೇಷ ಬಹು ಆಯ್ಕೆ ಪ್ರಶ್ನೆಗಳು

Halagali Bedaru Padya Option questions

೧) ಇವುಗಳಲ್ಲಿ ಕರ್ಮಕಾರಕ ಯಾವುದು?

ಎ) ಪ್ರಥಮ  ಬಿ) ದ್ವಿತೀಯ ವಿಭಕ್ತ್ತಿ  ಸಿ) ತೃತೀಯ ವಿಭಕ್ತಿ  ಡಿ) ಚತುರ್ಥಿ

೨) ಹಳೆಗನ್ನಡದಲ್ಲಿ ಸಪ್ತಮಿ ವಿಭಕ್ತಿ ಯಾವುದು?

ಎ)ಅಂ  ಬಿ) ಅತ್ತಣಿಂ

ಸಿ) ಒಳ್  ಡಿ) ಇಂ

೩) ಷಷ್ಠಿ ವಿಭಕ್ತಿಯ ಕಾರಕರ್ಥ .

ಎ) ಕರ್ತೃ            ಬಿ) ಕರ್ಮ

ಸಿ) ಅಧಿಕರಣ      ಡಿ) ಸಂಬ೦ಧ

೪) ಹಳೆಗನ್ನಡ ದ್ವಿತೀಯ ವಿಭಕ್ತಿ ಪ್ರತ್ಯಯ.

ಎ) ಇಂ ಬಿ) ಅಂ ಸಿ) ಮ್ ಡಿ) ಅತ್ತಣಂ

೫) ಹಳೆಗನ್ನಡದ ತೃತೀಯ ವಿಭಕ್ತಿ.

ಎ) ಮ್      ಬಿ) ಒಳ್

ಸಿ) ಇಂದೆ   ಡಿ) ಅತ್ತಣಿಂ / ಅತ್ತಣಿಂದು

೬) ‘ಬಿದ್ದುದನ್ನು  ಈ ಪದದಲ್ಲಿರುವ ವಿಭಕ್ತಿ ಪ್ರತ್ಯಯ.

ಎ) ದ್ವಿತೀಯ ಬಿ) ತೃತೀಯ ಸಿ) ಪಂಚಮಿ ಡಿ) ಸಪ್ತಮಿ

೭) ‘ದೆಸೆಯಿಂದ’ ಈ ಪದದಲ್ಲಿರುವ ವಿಭಕ್ತಿ ಪ್ರತ್ಯಯ.

ಎ) ಪಂಚಮಿ ಬಿ) ತೃತೀಯ ಸಿ) ಸಪ್ತಮಿ ಡಿ) ಚತು ರ್ಥಿ

೮) ಹಳೆಗನ್ನಡದಲ್ಲಿ ಸಪ್ತಮಿ ವಿಭಕ್ತಿ ಪ್ರತ್ಯಯ ಯಾವುದು.

ಎ) ಅಂ ಬಿ) ಮ್ ಸಿ) ಒಳ್ ಡಿ) ಅತ್ತಣಿಂ

೯) ‘ಬಿರುಗಾಳಿಗೆ ಹೊಯ್ದಾಡುವ ಹಡಗನು’. ಈ ವಾಕ್ಯದಲ್ಲಿರುವ ಚತುರ್ಥೀ ವಿಭಕ್ತಿ ಪ್ರತ್ಯಯ.

ಎ) ಬಿರುಗಾಳಿಗೆ ಬಿ) ಹಡಗು ಸಿ) ಹಡಗನು  ಡಿ) ಹೊಯ್ದಾಡು

೧೦) ಹಳೆಗನ್ನಡದಲ್ಲಿರುವ ವಿಭಕ್ತಿ ಪ್ರತ್ಯಯ ಯಾವುದು?.

ಎ) ಅಂ ಬಿ) ಮ್ ಸಿ) ಬಳ್ ಡಿ) ಅತ್ತಣಂ

೧೧) ‘ಜಲಕ್ಕೆ’ ಈ ಪದದಲ್ಲಿರುವ ವಿಭಕ್ತಿ ಪ್ರತ್ಯಯ.

ಎ) ಪ್ರಥಮ

ಬಿ) ದ್ವಿತೀಯ

ಸಿ) ಚತುರ್ಥಿ

ಡಿ) ಪಂಚಮಿ

೧೨) ಹಳೆಗನ್ನಡದಲ್ಲಿ ಪಂಚಮಿ ವಿಭಕ್ತಿ ಪ್ರತ್ಯಯ.

ಎ) ಅತ್ತಣಿಂ

ಬಿ) ಇಂದ೦

ಸಿ) ಅಂ

ಡಿ) ಒಳ್

೧೩) ‘ಮಹಾಶಯನಿಗೆ’ ಈ ಪದಲ್ಲಿರುವ  ವಿಭಕ್ತಿ ಪ್ರತ್ಯಯ.

ಎ) ಪ್ರಥಮ

ಬಿ) ಚತುರ್ಥಿ

ಸಿ) ಷಷ್ಠಿ

ಡಿ) ಸಪ್ತಮಿ

೧೪) ಹಳೆಗನ್ನಡದ ದ್ವಿತೀಯ ವಿಭಕ್ತಿ ಪ್ರತ್ಯಯ.

ಎ) ಮ್

ಬಿ) ಅ

ಸಿ) ಇಂದ೦

ಡಿ) ಅಂ

೧೫) ‘ಹಳ್ಳದಲಿ’ ಈ ಪದದಲ್ಲಿರುವ ವಿಭಕ್ತಿ  .

ಎ) ಸಪ್ತಮಿ ಬಿ) ಷಷ್ಟಿ

ಸಿ) ದ್ವಿತೀತಯ ಡಿ) ಪ್ರಥಮ  .

ಸೂಚನೆ: ಈ ವಿಧವಾಗಿ ಪ್ರಶ್ನೆಗಳು ಬರುತ್ತವೆ. ಪ್ರತಿಯೋಂದು ಪದವನ್ನು ವಿಭಿನ್ನವಾಗಿ ಯೋಚಿಸಿ

ಉತ್ತರಗಳು :

೧.]ಬಿ,  ೨.]ಸಿ ,  ೩.]ಡಿ,  ೪.]ಬಿ,  ೫.]ಸಿ, ೬.]ಡಿ ,  ೭.]ಎ,  ೮.]ಸಿ,

೯.]ಎ,  ೧೦.]ಡಿ,  ೧೧.]ಸಿ,  ೧೨.]ಎ,  ೧೩.]ಬಿ,  ೧೪.]ಡಿ,  ೧೫.]ಎ

halagali bedaru notes in kannada pdf

ಮೊದಲೆರೆಡು ಪದಗಳಿಗಿರುವ ಸಂಬದಂತೆ ಮೂರನೆಯ ಪದಕ್ಕೆ ಸಂಬ೦ಧಿಸಿದ ಪದ ಬರೆಯಿರಿ

. ಸೇತುವೆಯಾಗೋಣ : ಸೇತುವೆ+ಆಗೋಣ :: ವಸಂತವಾಗುತ್ತಾ : ________

. ಕತ್ತಲೆಯೊಳಗೆ : ಆಗಮ :: ಸೇತುವೆಯಾಗೋಣ : _________

. ಬಿರುಗಾಳಿ : ಆದೇಶ ಸಂಧಿ :: ವಸಂತವಾಗುತ : __________

. ನಿಲ್ಲಿಸು : ನಿಲ್ಲು :: ನಡೆಸು  : _________

. ಮುಟ್ಟೋಣ : ಮಟ್ಟು :: ಕಟ್ಟು : _______

. ಬಿದ್ದುದನ್ನು : ದ್ವಿತೀಯಾ :: ಜಲಕ್ಕೆ : ________

. ಪ್ರಥಮಾ : ಕರ್ತ್ರರ್ಥ :: ಷಷ್ಠೀ : ___________

. ಅಪಾದಾನ : ಪಂಚಮೀ :: ಕರಣಾರ್ಥ : __________

. ವಿಧ್ಯರ್ಥಕ : ತಿನ್ನಲಿ :: ನಿಷೇಧಾರ್ಥಕ : _________

೧೦. ನಿಲ್ಲಿಸು : ನಿಲ್ಲು :: ನಡೆಸು  : ………………………………………

೧೧. ಮುಟ್ಟೋಣ : ಮುಟ್ಟು :: ಕಟ್ಟುವುದು : ……………………………

ಉತ್ತರಗಳು :

೧]. ವಸಂತ+ಆಗುತಾ     ೨. ]ಆಗಮ   ೩]. ಆಗಮ    ೪]. ನಡೆ    ೫]. ಕಟ್ಟುವುದು   ೬]. ಚತುರ್ಥಿ   ೭]. ಸಂಬ೦ಧ   ೮]. ತೃತೀಯಾ   ೯]. ತಿನ್ನಲು  ೧೦]. ನಡೆ   ೧೧]. ಕಟ್ಟು

ಪದ್ಯದ ಆಶಯ ಭಾವ

ಕನ್ನಡ ನಾಡಿನ ಮೇಲೆ ಪರಗಡಿಗಳಿಂದ ದಾಳಿ-ದದಂಗೆ ನಡೆಯುತ್ತಿದ್ದವು. ವೀರರು ಅವುಗಳನ್ನು ತಡೆದು  ಕನ್ನಡಿಗರ ಗೌರವವನ್ನು ಉಳಿಸಿದ್ದಾರೆ.ತ್ಯಾಗ, ಬಲಿದಾನಗಳಿಂದ ಅಮರರಾಗಿದ್ದಾರೆ. ಇಂತವೀರ ಕಲಿಗಳ ವೀರಸಾಹಸ , ಉಜ್ವಲ ಜೀವನವನ್ನು  ವರ್ಣಿಸುವ ಕಥನಾತ್ಮಕ ಕಾವ್ಯಗಳೇಲಾವಣಿಗಳು .ಜನತೆಯನ್ನು ಹುರಿದುಂಬಿಸಲು ಗೀತೆಗಳನ್ನು  ಕಟ್ಟಿಹಾಡಿದ್ದಾರೆ. ಊರುಗಳನ್ನೇ ಅವರಿಗೆ ಅಂಕಿತಗೊ ಳಿಸಿದ್ದಾರೆ.ಹಲಗಲಿಯ ಬೇಡರಲಾವಣಿ ಅದಕ್ಕೊಂದು ನೈಜ ನಿದರ್ಶನ.

ಹಲಗಲಿಯು ಬೇಡರ ಊರು. ಮುಧೋಳ ಸಂಸ್ಥಾನದಲ್ಲಿದ್ದು, ಇಂದಿನ ಬಾಗಲಕೋಟೆ ಜಿಲ್ಲೆಗೆ ಸೇರಿದೆ. ಅಂದು ಕಲಾದಗಿಯು ಜಿಲ್ಲೆಯ ಸ್ಥಾನಹೊಂದಿತ್ತು. ಇಲ್ಲಿಂದ ಉತ್ತರಕ್ಕೆ ಐದಾರು ಕಿಲೋಮೀಟರ್ ದೂರದಲ್ಲಿ ಹಲಗಲಿ ಇದೆ. ‘ಹಲಗಲಿಯ ಬಂಟರ ಹತಾರ ಕದನ’ ಎಂಬ ವೀರರಸಯುಕ್ತವಾದ ಹಾಡುಗಳೇ  ಹಲಗಲಿ ಬೇಡರ ಲಾವಣಿಗಳು  .

ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಬ್ರಿಟಿಷರು  ಆಡಳಿತ ಸೂತ್ರ ಹಿಡಿದರು. ೧೮೫೭ ರ ಪ್ರಥಮ  ಸ್ವಾತಂತ್ರ್ಯ  ಸಂಗ್ರಾಮದ ಅನಂತರ ಭಾರತೀಯರ ಮೇಲೆ ನಿಶ್ಶಸ್ತ್ರೀಕರಣದ ಹುಕುಮನ್ನು ಹೊರಡಿಸಿದರು. ಈ ಶಾಸನದ ಪ್ರಕಾರ ಸರ್ಕಾರದ ಅನುಮತಿಯಿರದೆ ಭಾರತೀಯರು ಶಸ್ತ್ರಾಸ್ತಗಳನ್ನು ಹೊಂದದುವ೦ತಿಲ್ಲ ಮತ್ತು ತಮ್ಮಲ್ಲಿರುವ  ಆಯುಧಗಳನ್ನು ಸರ್ಕಾರಕ್ಕೆ ಒಪ್ಪಿಸಬೇಕು  ಎಂಬುದಾಗಿತ್ತು. ಈ ಹುಕುಮನ್ನು ವಿರೋಧಿಸಿ ಅಲ್ಲಲ್ಲಿದಂಗೆಗಳಾದವು  . ಹಲಗಲಿಯ ರಾಮ, ಬಾಲ, ಹನುಮ, ಜಡಗ ಮೊದಲಾದ ವೀರರು ತಮ್ಮಲ್ಲಿರುವ ಆಯುಧಗಳನ್ನು  ಕೊಡಲೊಪ್ಪದೆ ದಂಗೆ ಎಬ್ಬಿಸಿ ಹೆಬಲಕ್ ಎಂಬಬ ಅಧಿಕಾರಿಯನ್ನು ಕೊಲೆಗೈದು . ಇದರಿಂದ ಕ್ರೋಧಗೊಂಡ ಕಾರಸಾಹೇಬ ಕಲಾದಗಿಯಿಂದ ದಂಡು ಕಳುಹಿಸಿ ಹಲಗಲಿಯನ್ನು ಮುತ್ತಿ ದಂಗೆ ಎದ್ದವರನ್ನು ಬಗ್ಗುಬಡಿದನು. ಕಂಪನಿ ಸರ್ಕಾರದ ದೌರ್ಜನ್ಯವನ್ನು  ವಿರೋಧಿಸಿದ ಕಥಾನಕವೇ  ಈ ಲಾವಣಿ.

ಆ ಸಂದರ್ಭದಲ್ಲಿ ಅನಕ್ಷರಸ್ಥ ಸಮುದಾಯದಲ್ಲಿಲ್ಲಿದ್ದ ಸ್ವಾತಂತ್ರ್ಯಪ್ರೇಮವನ್ನು ಪರಿಚಯಿಸುವುದು ಮತ್ತು ದೇಶ ಪ್ರೇಮವನ್ನು ವಿದ್ಯಾರ್ಥಿಗಳಲ್ಲಿ  ಬೆಳೆಸುವುದು ಇಲ್ಲಿನ ಆಶಯ.

ಈಲಾವಣಿಯನ್ನು ಡಾ|| ಬಿ.ಎಸ್. ಗದ್ದಗಿಮಠ ಅವರು ಸಂಪಾದಿಸಿರುವ ಕನ್ನಡ ಜನಪದ ಗೀತೆಗಳು ಕೃತಿಯಿಂದ ಆಯ್ದು ಸಂಪಾದಿಸಿ ನೀಡಲಾಗಿದೆ.

Halagali Bedaru Notes Summary in Kannada

ಪದ್ಯದ ಸಾರಾಂಶ ವಿವರಣೆ

ಹೊತ್ತು ಬಂದಿತು ಮತ್ತ ನೋಡಿರಿ ಕತ್ತಿ ಹಿಡಿಯುವ ಜನಕ

ಸಿಟ್ಟಿನ ಮಂದಿ ಹಲಗಲಿ ಬಂಟರು ಮುಟ್ಟಲಿಲ್ಲೊ ದಡಕ || ಪ ||

ಸಾರಾಂಶ ;ಕತ್ತಿ ಹಿಡಿದು ಹೋರಾಡುವ ಸಿಟ್ಟಿನ ಜನ ಹಲಗಲಿಯ ಬೇಡರಿಗೆ ಹೋರಾಡುವ ಸಮಯ ಬಂದಿತು. ಇಂತಹ ಹಲಗಲಿಯ ವೀರರು

ಹೋರಾಡಿದರೂ ಅವರು ತಮ್ಮ ಗುರಿಯನ್ನು ಮುಟ್ಟಲು ಸಾಧ್ಯವಾಗಲಿಲ್ಲ.

ವಿಲಾತಿಯಿಂದ ಹುಕುಮ ಕಳಿಸಿತು ಕುಂಪಣಿ ಸರಕಾರ

ಎಲ್ಲ ಜನರಿಗೆ ಜೋರ ಮಾಡಿ ಕಸಿದು ಕೊಳ್ಳಿರಿ ಹತಾರ

ಹಲಗರಹಳ್ಳಿ ಮುಧೋಳ ಹತ್ತರ ಮೆರೆಯಿತೊ ಸುತ್ತಮುತ್ತ

ಪೂಜೇರಿ ಹನುಮಾ ಬ್ಯಾಡರ ಬಾಲ ಜಡಗ ರಾಮ  ಮಸಲತ್ತ

ಕೈಯಾನ ಹತಾರ ಕೊಡಬಾರದೊ, ನಾವು ನಾಲ್ಕು ಮಂದಿ ಜತ್ತ

ಹತಾರ ಹೋದಿಂದ ಬಾರದು ಜೀವ ಸತ್ತು ಹೋಗುವುದು ಗೊತ್ತ

ಹೊಡಿರಿ ಜಗಳ ಕೂಡಿ ತೀರ್ತೇವು ಕುಮಕಿ ನಮ್ಮದ್ಯಾವತ್ತ

ಒಳಗಿಂದೊಳಗ ವಚನ ಕೊಟ್ಟರೊ ಬ್ಯಾಡರೆಲ್ಲ ಕಲ್ತ.

ಕಾರಕೂನನ ಕಪಾಳಕ ಬಡಿದರ ಸಿಪಾಯಿ ನೆಲಕಬಿತ್ತ

ಆಗಿಂದಾಗ ದು:ಖದ ಸುದ್ದಿ ಸಾಹೇಬಗ ಹೋಯ್ತ || ೧ ||

10th Halagali Bedaru Padya Saramsha in Kannada

ಸಾರಾಂಶ : ಬ್ರಿಟೀಷ್ ಸರ್ಕಾರ (ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿ) ವಿಲಾಯಿತಿಯಿಂದ (ವಿದೇಶ) ಎಲ್ಲಾ ಜನರಿಗೆ ಜೋರ(ದಬ್ಬಾಳಿಕೆ)ಮಾಡಿ

ಆಯುಧಗಳನ್ನೆಲ್ಲ ಕಸಿದು ಕೊಳ್ಳಿರಿ ಎಂದು ಆದೇಶವನ್ನು ಕಳಿಸಿತು. ಮುಧೋಳದ ಹತ್ತಿರ ಇರುವ ಹಲಗರಹಳ್ಳಿ

{ಹಲಗಲಿ}ಜನ ಇದರ ವಿರುದ್ಧಹೋರಾಡಿ ಸುತ್ತ-ಮುತ್ತ ಪ್ರಸಿದ್ಧ್ಧಿಯಾಗುವಂತೆ ಮೆರೆಯಿತು. ಹಲಗಲಿಯ ಪ್ರಮುಖರಾದ ಪೂಜಾರಿ ಹನುಮಾ, ಬ್ಯಾಡರ ಬಾಲ, ಜಡಗ, ರಾಮ

ಎಂಬ ನಾಲ್ಕು ಮಂದಿ ಕೂಡಿಕೊಂಡು ನಾವು ನಮ್ಮ ಬಳಿಯಿರುವ ಆಯಧಗಳನ್ನು  ಸತಾಯಿಸಿದರೂ ಕೊಡಬಾರದು . ಆಯುಧಗಳು  ಹೋದರೆ

(ನಮ್ಮ ಅನ್ನಕ್ಕೆ ಸಂಚಕಾರ ಬಂದು) ನಮ್ಮ ಜೀವವ ಸತ್ತು  ಹೋಗುತ್ತದೆ ಎಂದು ಪಿತೂರಿ ಮಾಡಿದರು  . ನಾವು ಯಾವಾಗಲೂ ನಿಮ್ಮ ಸಹಾಯಕ್ಕೆಕೂಡಿಕೊಂಡು ಇರುತ್ತೇವೆ ಅವರ ಜೊತೆ(ಆಯುಧಗಳನ್ನು ಕಸಿದುಕೊಳ್ಳಲು ಬಂದವರ  ಜೊತೆ) ಜಗಳ ತೆಗೆಯಿರಿ ಎಂದು ಹಲಗಲಿಯ ಬೇಡರೆಲ್ಲ ಒಂದೆಡೆ ಸೇರಿಕೊಂಡು ಒಳಗಿಂದೊಳಗೆ ಮಾತು ಕೊಟ್ಟರು. ಆಯುಧಗಳನ್ನು ಕಸಿದುಕೊಳ್ಳಲು ಬಂದ ಗುಮಾಸ್ತನ ಕಪಾಳಕ್ಕೆ ಹೊಡೆದರು .ಇದಕ್ಕೆ  ಪ್ರತಿರೋಧ ತೋರಿದ ಸಿಪಾಯಿಯನ್ನು ಸಾಯಿಸಿನೆಲಕ್ಕೆ ಬೀಳುವಂತೆ ಮಾಡಿದರು  . ಈ ದುಃಖದ ಸುದ್ದಿ ತಕ್ಷಣ ಸಾಹೇಬನಿಗೆ( ಜೆ.ಬಿ.ಸೆಟೆನ್ಕರ್)ಮುಟ್ಟಿತು.

ಸಿಟ್ಟೆಲಿ ಮುಂಗೈ ಕಟ್ಟನೆ ಕಡಕೊಂಡ, ಹುಕುಮ ಕೊಟ್ಟ  ಸಾಹೇಬಾಗ

ಕುದರಿ ಮಂದಿ ಕೂಡಿ ಮುಟ್ಟಿತೊ ಹಲಗಲಿ ತಳದ ಮ್ಯಾಗ

ಒಳಗಿನ ಮಂದಿ ಗುಂಡು ಹೊಡಿದರೊ ಮುಂಗಾರಿ ಸಿಡಿಲ ಸಿಡಿದ್ಹಾಂಗ

ಹೊರಗಿನ ಮಂದಿ ಗುಂಡ ಹತ್ತಿ ಸರಿದು ನಿಂತರೊ ಹಿಡಿದು ದಂಗ

ಕಾಗದ ಬರೆದು ಕಳುವ್ಯಾರೆ ಬೇಗ, ದಂಡು ಬರಲೆಂತ ಹೀಂಗ

ದ೦ಡ ಬಂದಿತೊ ತಯಾರಾಗಿ ಜಲದ ಮಾಡಿ  ಹಲಗಲಿಗಿ ||೨||

ಸಾರಾಂಶ : ಈ ವಿಷಯವನ್ನು ತಿಳಿದು ಸಾಹೇಬ ಸಿಟ್ಟಿನಲ್ಲಿ ಕೈಗಳನ್ನು ಕಿವುಚಿಗೊಂಡು ಸೈನಿಕರಿಗೆ ಆದೇಶವನ್ನು ನೀಡಿದನು. ಆಗ ಆಶ್ವದಳ,

ಕಾಲ್ದಳ ಸೇರಿಕೊಂಡು ಹಲಗಲಿಯ ನೆಲ(ಸ್ಥಳ)ವನ್ನು ಮಟ್ಟಿತು. ಇದನ್ನು ನೋಡಿದ ಹಲಗಲಿಯ ಜನ ಮುಂಗಾರಿನ ಸಿಡಿಲು ಸಿಡಿಯುವ ಹಾಗೆ

ಊರ ಒಳಗಿನಿಂದ ಗುಂಡುಗಳನ್ನು ಹೊಡೆದರು . ಇದರಿಂದ ಹೊರಗಿನ ಜನರಿಗೆ(ಬ್ರಿಟೀಷ್ ಸೈನಿಕರು)ಗುಂಡುಗಳು ಬಿದ್ದಾಗ ದಂಗು(ಹೆದರಿ)ಹಿಡಿದು

ಹಿ೦ದೆ ಸರಿದು ನಿಂತರು. ಆಗ ಇನ್ನು ಹೆಚ್ಚಿನ ಸೈನ್ಯ ಬರಲಿ ಎಂದು ಸಾಹೇಬ (ಜೆ.ಬಿ.ಸೆಟೆನ್ಕರ್) ಪತ್ರ  ಬರೆದು  ತನ್ನ ಮೇಲಿನ ಅಧಿಕಾರಿಗೆ(ಹೆನ್ರಿ

ಹ್ಯಾವ್‌ಲಾಕ್)) ಕಳಿಸಿದನು. ಸೈನ್ಯ ತಯಾರಾಗಿ ತೀವ್ರವಾಗಿ(ವೇಗವಾಗಿ) ಹಲಗಲಿಗೆ ಬಂದಿತು.

ಬೆನ್ನಬೆನ್ಹತ್ತಿ ತಿರಿತಿರ್ವಿ ಕಡಿದರೊ ಏನು ಉಳಿಯದ್ಹಂಗ

ನಡುವೆ ಹಾಕ್ಕೊಂಡು ಹೊಡದರೊ ಗುಂಡ ಕರುಣ ಇಲ್ಲದ್ಹಂಗ

ಚಟೆಕಾರರು ಚೌಕಿ ಮಾಡುತ, ನಡಿದರೊ ಹೇಳದೆ ಗುಡದಾಗ

ಅಗಸಿಗೆ ಬಂದು ‘ಹೆಬಲಕ’ ಸಾಬ ಹೇಳತಾನ

ನ ಬುದ್ಧಿಮಾತ

ಕೊಡುತಿವಿ ಕಬುಲ ಕೇಳರಿ ಮಾತ, ಹೋಗಬ್ಯಾಡರಿ ಸತ್ತ

ಅನುವ ಮಾತಿಗೆ ನಂಬಿಗೆ ಸಾಲದೆ ‘ಹನುಮ’ ಬಂದನೊ ಮುಂದಿತ್ತ ||೩||

ಸಾರಾಂಶ : ಅಲ್ಲಿಗೆ ಬಂದ ದಂಡು ಬೇಡರನ್ನು  ಹಿಂದೆ ಹಿಂದೆ ಹೋಗಿ ತಿರುತಿರುವಿ ಹಾಕಿ ಏನು ಉಳಿಯದ ಹಾಗೆ ಕಡಿದು ಹಾಕಿದರು.ಬೇಡರನ್ನು

ಮಧ್ಯಕ್ಕೆ ಹಾಕಿಕೊಂಡು ಕರುಣೆ ಇಲ್ಲದಹಾಗೆ(ಕರುಣೆ ತೋರದೆ)ಗುಂಡನ್ನು ಹೊಡೆದರು  ಚಟೆಕಾರರು  (ಆಂಗ್ಲೋಇ೦ಡಿಯನ್ಸ್/ಭಾರತೀಯ ಬ್ರಿಟೀಷರು  ) ಬೇಡರನ್ನು  ಕಾವಲು ಕಾಯುತ್ತ ಇರುವಾಗ ಬೇಡರು  ಗುಡ್ಡದ ಕಡೆ ಹೋದರು  . ಆಗಸಾಹೇಬ( ಹೆನ್ರಿ ಹ್ಯಾವ್‌ಲಾಕ್)) ಊರಿನ ಹೆಬ್ಬಾಗಿಲಿಗೆ ಬಂದು ಬುದ್ಧಿ ಮಾತನ್ನು ಹೇಳುತ್ತಾರೆ  ಶುರುವಾಗಲು  ಒಪ್ಪಿಗೆ ನೀಡುತ್ತೇವೆ ಸತ್ತು  ಹೋಗಬೇಡಿರಿ  ಎನ್ನುವ ಮಾತಿನ ಮೇಲೆ ನಂಬಿಗೆ ಸಾಲದೆ ಹನುಮ ಮುಂದೆ ಬಂದು ನಿಂತನು  .

ಜಡಗ ಹೇಳುತಾನೊ ಹೊಡೆಯಿರಿ ಇವರ ಪೂರ ಘಾತಕರಾ

ಇಸವಾಸಘಾತಕ ಮಾಡಿದರಿವರ, ನಂಬಿಗಿಲ್ಲ ನಮಗ ಪಿತೂರಾ

ಮೋಸ ಮಾಡಿ ನಮದೇಶ ಗೆದಿತಾರೊ ಮುಂದ ನಮಗ ಘೋರಾ

ಅಂದು ಹೊಡೆದಾನೊ ಒಂದು ಗುಂಡಿಗೆ ಆದ ಸಾಹೇಬನ ಟಾರಾ

‘ಕಾರ’ ಸಾಹೇಬ ಬೆಂಕಿ ಚೂರಾದ ಲೂಟಿ ಮಾಡಂತನೊ ಊರಾ

ಸಿಟ್ಟಿಲೆ ಹೊಡೆದರು ಸಿಡಿಲಸಿಡಿದ್ಹಾಂಗ ಗುಂಡು ಸುರಿದಾವ ಭರ್‌ಪೂರ

ಹನುಮ ಹೇಳತಾನ ಗುಂಡು ಹೊಡೆದಕೆರ ಕೆಡವುನಷ್ಟು ಬಾರ

ಮುನ್ನೂರ ಮಂದಿ ಮೈಮ್ಯಾಗ ಬಂದರ ಆಗ ನೋಡೊ ಜೋರಾ

ಭೀಮನು ಇದುರಿಗೆ ನಿಂತಾ ಐನೂರ್ಮಂದಿಗೆ ಮತ್ತಾ

ಬಾಲನು ಮಾಡಿದ ಕಸರತ್ತಾ. ಕುದುರಿಯ ಕಡಿದು ಹತ್ತಿಪ್ಪತ್ತಾ

ರಾಮನ ಕಡಿತ ವಿಪರೀತಾ. ಕಾಲುವೆ ಹರಿತೊ ರಕ್ತಾ

ಸಾವಿರ ಆಳಿಗೆ ಒಬ್ಬ ಕೂಗತಾನೊ, ಕಡಿಕಡಿರಿ ಅಂತ ಮತ್ತಾ

ನಾಲ್ಕು ಮಂದಿ ಹಿಂಗ ಕಡಿದು ಸತ್ತರೊ ಹಲಗಲಿ ಬಂಟರಣ್ಣ ಜನಕ ||೪||

Halagali Bedaru Padya Question Answer

ಸಾರಾಂಶ : ಜಡಗ ಹೇಳುತ್ತಾನೆ ಇವರನ್ನು  ಹೊಡಿಯಿರಿ , ಇವರು ಸಂಪೂರ್ಣವಾಗಿ ಮೋಸಗಾರರು  , ವಿಶ್ವಾಸವಂಚಕರು  ಇವರ ಮೇಲೆ ನಂಬಿಗೆಇಲ್ಲ. ಒಳಸಂಚಿನಿ೦ದ ಮೋಸಮಾಡಿ ನಮ್ಮ ದೇಶ ಗೆಲ್ಲುತ್ತಾರೆ. ಮುಂದೆ ನಮಗೆ ಆಪತ್ತು ಕಾದಿದೆ ಎಂದು ಗುಂಡು ಹೊಡೆಯುತ್ತಾನೆ. ಆಗ ಹೆನ್ರಿ ಹ್ಯಾವ್‌ಲಾಕ್ ಸಾಹೇಬ ನಾಶವಾಗುತ್ತಾನೆ  (ಗುಂಡಿನ ದಾಳಿಗೆ ಸತ್ತು ಹೋಗುತ್ತಾನೆ) ಇದರಿಂದ ಕಾರ ಸಾಹೇಬ ((ಅಲೆಗ್ಜಾಂಡರ್ ವಿಲಿಯಂ ಕರ‍್ರೆ

ಎಂಬ ಬ್ರಿಟಿಷ್ ಅಧಿಕಾರಿ) ಸಿಟ್ಟಿಗೆದ್ದು ಊರನ್ನೆಲ್ಲಾ ಲೂಟಿ ಮಾಡಿರಿ ಎಂದು ಹೇಳುತ್ತಾನೆ  ಆಗ ಸೈನಿಕರು ಸಿಟ್ಟಿನಲ್ಲಿ  ಸಿಡಿಲು ಸಿಡಿದ ಹಾಗೆ ಗುಂಡುಗಳನ್ನು ಹೊಡೆದರು , ಗುಂಡುಗಳು ಯತೇಚ್ಚವಾಗಿ (ಪ್ರವಾಹದ ರೀತಿಯಲ್ಲಿ) ಸುರಿದವು. ಆಗ ಹನುಮ ಹೇಳುತ್ತಾನೆ ಗುಂಡು ಹೊಡೆದಕೇಸಿ  ಅಷ್ಟರನ್ನು(ಎಲ್ಲರನ್ನು) ಕೆಡವಿಹಾಕೋಣ ಬನ್ನಿರಿ ಎಂದು ಹೇಳಿದಾಗ ತಕ್ಷಣ ಮೂರುನೂರು ಜನ ಸೈನಿಕರು ಹನುಮನ ಮೈಮೇಲೆ ಎರಗಿದರು.

ಆಗ ಕದನ ಜೋರಾಯ್ತು. ಭೀಮನು ಎದುರಿಗೆ ನಿಂತ ಐದು ನೂರು ಮಂದಿಯನ್ನು, ಬಾಲನು ಚಮತ್ಕಾರ ಮಾಡಿ ಹತ್ತಿಪ್ಪತ್ತು ಕುದುರೆಗಳನ್ನು

ಕಡಿದು  ಹಾಕಿದರು.ರಾಮನ ವಿಪರೀತ ಕಡಿತದಿಂದ ರಕ್ತದ ಕಾಲುವೆಯೇ ಹರಿಯಿತು. ಸಾವಿರ ಜನರಿಗೆ(ಹಲಗಲಿಯ ಜನರಿಗೆ) ಒಬ್ಬ ಕೂಗಿ

ಹೇಳುತ್ತಾನೆ ಮತ್ತೆ ಮತ್ತೆ ಕಡಿದು ಹಾಕಿರೋ ಎಂದು. ಹೀಗೆ ನಾಲ್ಕು ಮಂದಿ ಕಡಿದು ( ಬ್ರಿಟೀಷ್ ಸೈನ್ಯವನ್ನು  ನಾಶಮಾಡಿ) ಸತ್ತು  ಹೋದರು. ಇವರು  ಹಲಗಲಿಯ ಜನಕ್ಕೆ ವೀರರು  .

ಕೊಡಲಿ ಕೋರೆ ಕುಡ ಕಬ್ಬಿಣ ಮೊಸರು ಬೆಣ್ಣಿ ಹಾಲಾ

ಉಪ್ಪು ಎಣ್ಣಿ ಅರಿಸಿಣ ಜೀರಗಿ ಅಕ್ಕಿಸಕ್ಕಾರಿ ಬೆಲ್ಲಾ

ಗಂಗಳ ಚೆರಗಿ ಮಂಗಳ ಸೂತ್ರ ಹೋದವು ಬೀಸುಕಲ್ಲಾ

ಹಾಳಾಗಿ ಹೋಯಿತು ಅತ್ತು ವರ್ಣಿಸಿ ಹೇಳಲಿ ನಾನೆಷ್ಟಾ

ಸಿಕ್ಕದ್ದು ತಗೊಂಡು ಸರದ ನಿಂತರೊ ಊರಿಗೆ ಕೊಳ್ಳಿ ಕೊಟ್ಟಾ

ಬೂದಿ ಮಾಡ್ಯಾರೊ ಹಲಗಲಿ ಸುಟ್ಟು ಗುರ್ತುಳಿಯಲಿಲ್ಲೇಳ್ಳಷ್ಟು  

ಕಾಣದೆ ಹೋಯಿತೊ ಕೆಟ್ಟು ವರ್ಣಿಸಿ ಹೇಳಿದೆ ಕಂಡಷ್ಟು

ಕುರ್ತಕೋಟಿ ಕಲ್ಮೇಶನ ದಯದಿಂದ ಹಾಡಿದೆನಣ್ಣಾ ಜನಕಾ ||೫||

ಸಾರಾಂಶ : ಕೊಡಲಿ, ಕುಡಗೋಲು, ಕುಡ, ಕಬ್ಬಿಣ, ಮೊಸರು  ,ಬೆಣ್ಣೆ  ಹಾಲು, ಉಪ್ಪು ,ಎಣ್ಣೆ ,ಅರಿಸಿಣ, ಜೀರಗಿ , ಅಕ್ಕಿ, ಸಕ್ಕರೆ, ಬೆಲ್ಲ, ಗಂಗಳ,

ತ೦ಬಿಗೆ, ಮಂಗಳಸೂತ್ರ, ಬೀಸುವಕಲ್ಲು –ಹೀಗೆಹೀಗೆ ಎಲ್ಲವನ್ನು  ತೆಗೆದುಕೊಂಡು ಹೋಗಿದ್ದರಿಂದ ಹಾಳಾಗಿ ಹೋಯಿತು. ಇದನ್ನು ದುಃಖದಿಂದ

ನಾನೆಷ್ಟು ವರ್ಣಿಸಿ ಹೇಳಲಿ, ಸಿಕ್ಕದೆಲ್ಲಾ  ತಗೊಂಡು ಊರಿಗೆ ಬೆಂಕಿ ಇಟ್ಟು ಸುಟ್ಟು ದೂರ ನಿಂತರು. ಬೂದಿ ಮಾಡಿದರು  . ಹಲಗಲಿಯ

ಎಳ್ಳಷ್ಟು(ಎಳ್ಳಕಾಳೊಷ್ಟು) ಗುರುತು ಉಳಿಯದೆ ಕಾಣದೆ ಹಾಳಾಗಿ ಹೋಯಿತು. ಇದನ್ನು  ನಾನು ಕಂಡೊಷ್ಟು ವರ್ಣಿಸಿ ಹೇಳಿದೆ. ಕುರ್ತುಕೋಟಿಯ

ಕಲ್ಮೇಶನ ದಯದಿಂದ ಹಾಡಿದೆನೋ ಅಣ್ಣಾ ಜನಕ್ಕೆ  ತಿಳಿಸಲು ಹಾಡಿದೆನು  .

Halagali Bedaru Padya Prashn Uttar

ಅಭ್ಯಾಸ ಪ್ರಶ್ನೋತ್ತರಗಳು

ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊ೦ದು ವಾಕ್ಯಗಳಲ್ಲಿ ಉತ್ತರಿಸಿ.

೧. ಕುಂಪಣಿ ಸರಕಾರ ಹೊರಡಿಸಿದ ಆದೇಶ ಏನು ?

ಕುಂಪಣಿ ಸರಕಾರ ನಿಶ್ಯಸ್ತ್ರೀಕರಣ ಕಾಯ್ದೆಯಡಿ ಎಲ್ಲ ಜನರಿಗೆ ಜೋರ ಮಾಡಿ ಕಸಿದು ಕೊಳ್ಳಿರಿ ಹತಾರ ಎಂಬ ಆದೇಶ ಹೊರಡಿಸಿತು.

೨. ಹಲಗಲಿಯ ನಾಲ್ವರು ಪ್ರಮುಖರು ಯಾರು ?

ಹಲಗಲಿಯ ನಾಲ್ವರು ಪ್ರಮುಖರುಪೂಜೇರಿ ಹನುಮಾ , ಬ್ಯಾಡರ ಬಾಲ , ಜಡಗ , ರಾಮ.

೩. ಹಲಗಲಿ ಗುರುತು ಉಳಿಯದಂತಾದುದು ಏಕೆ ?

ಕುಂಪಣಿ ಸರ್ಕಾರದ ದಂಡು ಹಲಗಲಿಗೆ ಬೆಂಕಿ ಹಚ್ಚಿ ಸುಟ್ಟು ಬೂದಿ ಮಾಡಿದ್ದರಿಂದ ಗುರುತು ಉಳಿಯದಂತಾಯಿತು.

೪. ಯಾವ ಘಟನೆ ಹಲಗಲಿ ಲಾವಣಿಗೆ ಕಾರಣವಾಗಿದೆ ?

ಹಲಗಲಿಯ ಬಂಟರ ಹತಾರ ಕದನದ ಘಟನೆ ಹಲಗಲಿ ಲಾವಣಿಗೆ ಕಾರಣವಾಗಿದೆ.

೫. ಹಲಗಲಿ ಗ್ರಾಮ ಎಲ್ಲಿದೆ ?

ಹಲಗಲಿ ಗ್ರಾಮ ಮುಧೋಳ ಸಂಸ್ಥಾನದಲ್ಲಿದ್ದು, ಇಂದಿನ ಬಾಗಲಕೋಟೆ ಜಿಲ್ಲೆಗೆ ಸೇರಿದೆ.

ಹೆಚ್ಚುವರಿ ಪ್ರಶ್ನೋತ್ತರಗಳು

೬. ಒಳಗಿನ ಮಂದಿ ಗುಂಡನ್ನು  ಹೇಗೆ ಹೊಡೆದರು ?

ಒಳಗಿನ ಮಂದಿ ಮುಂಗಾರು ಸಿಡಿಲು ಸಿಡಿಯುವ ಹಾಗೆ ಗುಂಡನ್ನು ಹೊಡೆದರು.

೭. ಅಗಸಿಗೆ ಬಂದು ಹಲಗಲಿ ಬೇಡರಿಗೆ ಬುದ್ಧಿ ಮಾತು ಹೇಳಿದವರು  ಯಾರು ?

ಅಗಸಿಗೆ ಬಂದು ಹಲಗಲಿ ಬೇಡರಿಗೆ ಬುದ್ಧಿ ಮಾತು ಹೇಳಿದವರು ಹೆಬಲಕ ಸಾಬ.

೮. ಲಾವಣಿಕಾರ ಯಾರ ದಯದಿಂದ ಲಾವಣಿ ಹಾಡಿದೆನೆಂದು ಹೇಳಿದ್ದಾನೆ ?

ಲಾವಣಿಕಾರ ಕುರ್ತುಕೋಟಿ ಕಲ್ಮೇಶನ ದಯದಿಂದ ಲಾವಣಿ ಹಾಡಿದೆನೆಂದು ಹೇಳಿದ್ದಾರೇ .

೯. ಕಂಪನಿ ಸರ್ಕಾರದ ದೌರ್ಜನ್ಯವನ್ನು ವಿರೋಧಿಸಿದ ಕಥೆಯನ್ನೊಳಗೊಂಡ ಲಾವಣಿ ಯಾವುದು ?

ಕಂಪನಿ ಸರ್ಕಾರದ ದೌರ್ಜನ್ಯವನ್ನು ವಿರೋಧಿಸಿದ ಕಥೆಯನ್ನೊಳಗೊಂಡ ಲಾವಣಿ ಹಲಗಲಿ ಬೇಡರ ಲಾವಣಿ.

ಆ) ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.

೧. ಹಲಗಲಿಯ ಬೇಡರು ದಂಗೆ ಏಳಲು ಕಾರಣವೇನು ?

ಕ್ರಿ.ಶ. ೧೮೫೭ರ ಪ್ರಥಮ ಸ್ವಾತಂತ್ರ್ಯ  ಸಂಗ್ರಾಮದ ನಂತರ ಕುಂಪಣಿ ಸರಕಾರ ನಿಶ್ಶಸ್ತ್ರೀಕರಣಕಾಯ್ದೆಯಡಿ ಎಲ್ಲ ಜನರಿಗೆ ಜೋರ ಮಾಡಿ ಕಸಿದು ಕೊಳ್ಳಿರಿ ಹತಾರ ಎಂಬ ಆದೇಶ ಹೊರಡಿಸಿತು.ಈ ಆದೇಶದ ಪ್ರಕಾರ ಕುಂಪಣಿ ಸರ್ಕಾರದ ಅಧಿಕಾರಿಗಳು ಹಲಗಲಿಗೆ ಬಂದು ಜೋರ ಮಾಡಿ

ಬೇಡರ ಆಯುಧಗಳನ್ನು  ಕಸಿದುಕೊಳ್ಳಲು ಹೋದರು  . ಇದನ್ನು ವಿರೋಧಿಸಿ ರಾಮ, ಬಾಲ, ಹನುಮ, ಜಡಗ ಮೊದಲಾದ ಹಲಗಲಿ ಬೇಡರು ತಮ್ಮಲ್ಲಿರುವ ಆಯುಧಗಳನ್ನು  ಕೊಡಲೊಪ್ಪದೆ ದಂಗೆ ಎದ್ದರು.

೨. ಹಲಗಲಿಗೆ ದಂಡು ಬರಲು ಕಾರಣವೇನು ?

ಹಲಗಲಿಯ ಬೇಡರು ಕುಂಪಣಿ ಸರ್ಕಾರ ಹೊರಡಿಸಿದ್ದ ನಿಶ್ಶಸ್ತ್ರೀಕರಣದ ಆದೇಶವನ್ನು ವಿರೋಧಿಸಿ ತಮ್ಮಲ್ಲಿರುವ ಆಯುಧಗಳನ್ನು  ಕೊಡಲು ಒಪ್ಪದೆದಂಗೆ ಎದ್ದು ಮುಂಗಾರಿನ ಸಿಡಿಲು ಸಿಡಿಯುವ ಹಾಗೆ ಗುಂಡು ಹೊಡೆರು  ಇದರಿಂದ ಬ್ರಿಟೀಷ್ ಸೈನಿಕರು  ದಂಗು ಹಿಡಿದು ದೂರ ಸರಿದು ನಿಂತರು. ಆಗ ಇನ್ನು ಹೆಚ್ಚಿನ ದಂಡು ಬರಲಿ ಎಂದು ಸಾಹೇಬ (ಜೆ..ಬಿ.ಸೆಬಿ.ಸೆಟೆನ್ಕರ್) ಪತ್ರ ಬರೆದು ತನ್ನ ಮೇಲಿನ ಅಧಿಕಾರಿಗೆ ಕಳಿಸಿದನು. ಆಗ ದಂಡು ತಯಾರಾಗಿ ಹಲಗಲಿಗೆ ಬಂದಿತು.

೩. ದಂಡು ಹಲಗಲಿಯ ಮೇಲೆ ಹೇಗೆ ದಾಳಿ ನಡೆಸಿತು ?

ಕುಂಪಣಿ ಸರ್ಕಾರ ಹೊರಡಿಸಿದ್ದ ನಿಶ್ಶಸ್ತ್ರೀಕರಣದ  ಆದೇಶವನ್ನು  ವಿರೋಧಿಸಿ ತಮ್ಮಲ್ಲಿರುವ ಆಯುಧಗಳನ್ನು ಕೊಡಲು ಒಒಪ್ಪದೆ ದಂಗೆ ಎದ್ದ ಹಲಗಲಿಯ ಬೇಡರನ್ನು ಬಗ್ಗುಬಡಿಯಲು ಬ್ರಿಟಿಷ್‌ರ ದಂಡು ಹಲಗಲಿಗೆ ಬಂದಿತು. ಬ್ರಿಟಿಷ್ ದಂಡಿನ ಸಿಪಾಯಿಗಳು ಹಲಗಲಿಯ ಬೇಡರನ್ನು ಬೆನ್ನು ಬೆನ್ನು ಹತ್ತಿ ತಿರುತಿರವಿ ಹಾಕಿ ಕೊಂದರು . ಬೇಡರನ್ನು  ದಂಡಿನ ಮಧ್ಯೆ ಹಾಕಿಕೊಂಡು ಕರುಣೆ ಇಲ್ಲದೆ ಹಾಗೆ ಗುಂಡು ಹೊಡೆದು  ಸಾಯಿಸಿದರು . ಸಿಕ್ಕದ್ದನ್ನೆಲ್ಲ ತೆಗೆದುಕೊಂಡು ಊರಿಗೆ ಕೊಳ್ಳಿ ಇಟ್ಟು ಗುರುತು ಉಳಿಯದಂತೆ ಸುಟ್ಟು ಬೂದಿ ಮಾಡಿ ಹೋದರು.

೪. ಲಾವಣಿಗಳನ್ನು ಏಕೆ ವೀರಗೀತೆಗಳು ಎನ್ನಲಾಗಿದೆ ?

ಲಾವಣಿಗಳನ್ನು ಜನಪದ ಸಾಹಿತ್ಯದ ಒಂದು ವಿಶಿಷ್ಟ ಪ್ರಕಾರ. ವೀರ ಕಲಿಗಳ ವೀರಸಾಹಸ, ವೀರರ ಉಜ್ವಲ ಜೀವನದ ಘಟನೆಗಳನ್ನಾ ಧರಿಸಿದಕಥನಾತ್ಮಕ ಕಾವ್ಯಗಳಾಗಿದ್ದು ಸಾಮಾನ್ಯವಾಗಿ ವೀರತನ ಹಾಗೂ ಸಾಹಸವನ್ನು ವರ್ಣಿಸುವುದರಿಂದ ಅವುಗಳನ್ನು ವೀರಗೀತೆಗಳು  ಎನ್ನಲಾಗಿದೆ.

ಹೆಚ್ಚುವರಿ ಪ್ರಶ್ನೆಗಳು

೫. ಹಲಗಲಿ ಏಕೆ ಹಾಳಾಗಿ ಹೋಯಿತು ?

ಬ್ರಿಟೀಷರ ದಂಡು ಹಲಗಲಿಗೆ ಮುತ್ತಿಗೆ ಹಾಕಿ ಬೇಡರನ್ನು  ಬಗ್ಗು ಬಡಿದು ಕೊಡಲಿ, ಕುಡಗೋಲು , ಕುಡ, ಕಬ್ಬಿಣ, ಮೊಸರು  ,ಬೆಣ್ಣಿ, ಹಾಲು, ಉಪ್ಪು,ಎಣ್ಣೆ ,ಅರಿಸಿಣ, ಜೀರಗಿ , ಅಕ್ಕಿ, ಸಕ್ಕರೆ  ಬೆಲ್ಲ, ಗಂಗಳ, ತಂಬಿಗೆ, ಮಂಗಳಸೂತ್ರ , ಬೀಸುವಕಲ್ಲು –ಹೀಗೆಹೀಗೆ ಸಿಕ್ಕಿದ್ದೆಲ್ಲಾ ತೆಗೆದುಕೊಂಡು, ಊರಿಗೆಕೊಳ್ಳಿ ಇಟ್ಟು ಸುಟ್ಟು ಬೂದಿ ಮಾಡಿ ಗುರುತು ಉಳಿಯದಂತೆ ಮಾಡಿ ಹೋಗಿದ್ದರಿಂದ ಹಾಳಾಗಿ ಹೋಯಿತು.

೬.ಬ್ರಿಟೀಷರು ಹೊರಡಿಸಿದ ನಿಶ್ಯಸ್ತಿçÃಕರಣದ ಆದೇಶ ವಿವರಣೆ ಏನು ?

ಬ್ರಿಟೀಷರು  ಹೊರಡಿಸಿದ ನಿಶ್ಯಸ್ತ್ರೀಕರಣದ ಆದೇಶ ವಿವರಣೆ   ಏನೆಂದರೆ ಬ್ರಿಟೀಷ್ ಸರ್ಕಾರದ ಅನುಮತಿಯಿರದೆ ಭಾರತೀಯರು ಶಸ್ತ್ರಾಸ್ತಗಳು ಹೊಂದುವ೦ತಿಲ್ಲ ಮತ್ತು ತಮ್ಮಲ್ಲಿರುವ ಆಯುಧಗಳನ್ನು ಸರ್ಕಾರಕ್ಕೆ ಒಪ್ಪಿಸಬೇಕು ಎಂಬುದಾಗಿತ್ತು.

೭. ಹೆಬಲಕ ಸಾಹೇಬನ ಬುದ್ಧಿಮಾತಿಗೆ ವಿರೋಧವಾಗಿ ಜಡಗ ಏನು ಹೇಳುತ್ತಾನೆ ?

ಹೆಬಲಕ ಸಾಹೇಬನ ಬುದ್ಧಿಮಾತಿಗೆ ವಿರೋಧವಾಗಿ ಜಡಗ ಇವರನ್ನು ಹೊಡಿಯಿರಿ , ಇವರು  ಸಂಪೂರ್ಣವಾಗಿ ಮೋಸಗಾರರು  ,ವಿಶ್ವಾಸವಚಕರು  ಇವರ ಮೇಲೆ ನಂಬಿಗೆ ಇಲ್ಲ. ಒಳಸಂಚಿನಿ೦ದ ಮೋಸಮಾಡಿ ನಮ್ಮ ದೇಶ ಗೆಲ್ಲುತ್ತಾರೆ. ಮುಂದೆ ನಮಗೆ ಆಪತ್ತು ಕಾದಿದೆ ಎಂದು ಹೇಳುತ್ತಾನೆ.

ಇ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕವಾಕ್ಯಗಳಲ್ಲಿ ಉತ್ತರಿಸಿ.

೧. ಹಲಗಲಿ ದಂಗೆಗೆ ಕಾರಣವೇನು? ಸರಕಾರ ಅದನ್ನು ಹೇಗೆ ನಿಯಂತ್ರಿಸಿತು?

ಕ್ರಿ.ಶ. ೧೮೫೭ರ ಪ್ರಥಮ  ಸ್ವಾತಂತ್ರ್ಯ  ಸಂಗ್ರಾಮದ ನಂತರ ಕುಂಪಣಿ ಸರಕಾರ ನಿಶ್ಶಸ್ತ್ರೀಕರಣಕಾಯ್ದೆಯಡಿ ಎಲ್ಲ ಜನರಿಗೆ ಜೋರ ಮಾಡಿ ಕಸಿದು ಕೊಳ್ಳಿರಿ ಹತಾರ ಎಂಬ ಆದೇಶ ಹೊರಡಿಸಿತು.ಈ ಆದೇಶದ ಪ್ರಕಾರ ಕುಂಪಣಿ ಸರ್ಕಾರದ ಅಧಿಕಾರಿಗಳು ಹಲಗಲಿಗೆ ಬಂದು ಜೋರ ಮಾಡಿ ಬೇಡರ ಆಯುಧಗಳನ್ನು  ಕಸಿದುಕೊಳ್ಳಲು ಹೋದರು  . ಇದನ್ನು ವಿರೋಧಿಸಿ ರಾಮ, ಬಾಲ, ಹನುಮ, ಜಡಗ ಮೊದಲಾದ ಹಲಗಲಿ ಬೇಡರು ತಮ್ಮಲ್ಲಿರುವ ಆಯುಧಗಳನ್ನು  ಕೊಡಲೊಪ್ಪದೆ ದಂಗೆ ಎದ್ದು ಒಳಗಿನಿಂದ ಮುಂಗಾರಿನ ಸಿಡಿಲು ಸಿಡಿಯುವ ಹಾಗೆ ಗುಂಡು ಹೊಡೆರು .ಇದರಿಂದ ಬ್ರಿಟೀಷ್ ಸೈನಿಕರು ದಂಗು ಹಿಡಿದು ದೂರ ಸರಿದು ನಿಂತರು. ಆಗ ಇನ್ನು ಹೆಚ್ಚಿನ ದಂಡು ಬರಲಿ ಎಂದು ಸಾಹೇಬ (ಜೆ.ಬಿ.ಸೆಟೆನ್ಕರ್) ಪತ್ರ  ಬರೆದು  ತನ್ನ ಮೇಲಿನ ಅಧಿಕಾರಿಗೆ ಕಳಿಸಿದನು. ಆಗ ಬ್ರಿಟೀಷ್ ಸರ್ಕಾರದ ದಂಡು ತಯಾರಾಗಿ ಹಲಗಲಿಗೆ ಬಂದಿತು.

ಬ್ರಿಟಿಷ್ ದಂಡಿನಸಿಪಾಯಿಗಳು ಹಲಗಲಿಯ ಬೇಡರನ್ನು  ಬೆನ್ನು ಬೆನ್ನು ಹತ್ತಿ ತಿರುತಿರವಿ ಹಾಕಿ ಕೊಂದರು  . ಬೇಡರನ್ನು  ದಂಡಿನ ಮಧ್ಯೆ ಹಾಕಿಕೊಂಡು ಕರುಣೆ ಇಲ್ಲದೆ ಹಾಗೆ ಗುಂಡು ಹೊಡೆದು ಸಾಯಿಸಿದರು. ಸಿಡಿಲು ಸಿಡಿಯುವ ಹಾಗೆ ಸಿಟ್ಟಿಲೆ ¨ ಭರಪೂರವಾಗಿ ಗುಂಡನ್ನು ¸ಸುರಿಸಿದರು. ಇದರಿಂದ ಹಲಗಲಿಬಂಟರು ಹೋರಾಡಿ ವೀರ ಮರಣವನ್ನಪಿದ  . ಸಿಕ್ಕದ್ದನ್ನೆಲ್ಲ  ತೆಗೆದುಕೊಂಡು ಊರಿಗೆ ಕೊಳ್ಳಿ ಇಟ್ಟು ಗುರುತು ಉಳಿಯದಂತೆ ಸುಟ್ಟು ಬೂದಿಮಾಡಿ ಹಲಗಲಿಯ ದಂಗೆಯನ್ನು ನಿಯಂತ್ರಿಸಿದರು.

೨. ಹಲಗಲಿ ದಂಗೆಯ ಪರಿಣಾಮವೇನು ?

ಕುಂಪಣಿ ಸರ್ಕಾರ ಹೊರಡಿಸಿದ್ದ ನಿಶ್ಶಸ್ತ್ರೀಕರಣದ  ಆದೇಶವನ್ನು ವಿರೋಧಿಸಿ ತಮ್ಮಲ್ಲಿರುವ ಆಯುಧಗಳನ್ನು ಕೊಡಲು ಒಪ್ಪದೆ ದಂಗೆ ಎದ್ದ ಹಲಗಲಿಯ ಬೇಡರನ್ನು  ಬಗ್ಗು ಬಡಿಯಲು ಬ್ರಿಟೀಷ್ ಸರ್ಕಾರದ ದಂಡು ತಯಾರಾಗಿ ಹಲಗಲಿಗೆ ಬಂದಿತು. ಬ್ರಿಟಿಷ್ ದಂಡಿನ ಸಿಪಾಯಿಗಳು ಹಲಗಲಿಯ ಬೇಡರನ್ನು  ಬೆನ್ನು ಬೆನ್ನು ಹತ್ತಿ ತಿರುತಿರತಿರವಿ ಹಾಕಿ ಕೊಂದರು. ಬೇಡರನ್ನು  ದಂಡಿನ ಮಧ್ಯೆ ಹಾಕಿಕೊಂಡು ಕರುಣೆ ಇಲ್ಲದೆ ಹಾಗೆ ಗುಂಡು ಹೊಡೆದು  ಸಾಯಿಸಿದರು. ಕೆಲವು ಬೇಡರು  ತಪ್ಪಿಸಿಕೊಂಡು ಗುಡ್ಡದ ಕಡೆ ಓಡಿದರು. ಅಗಸಿಗೆ ಬಂದು ಬುದ್ಧಿ ಮಾತನ್ನು ಹೇಳುತ್ತಿದ್ದ ಹೆಬಲಕ ಸಾಹೇಬನ್ನು ಜಡಗ ಗುಂಡು ಹೊಡೆದು  ಕೊಂದು ಹಾಕಿದನು. ಇದರಿಂದ ಸಿಟ್ಟಿಗೆದ್ದ ಕಾರಸಾಹೇಬ ಊರನ್ನು  ಲೂಟಿ ಮಾಡಲು ಆದೇಶಿಸಿದನು.

ಬ್ರಿಟೀಷ್ ಸೈನಿಕರು ಸಿಡಿಲು ಸಿಡಿಯುವ ಹಾಗೆ ಸಿಟ್ಟಿಲೆ ¨ಭರಪೂರವಾಗಿ ಗುಂಡನ್ನು ಸುರಿಸಿದನು  . ಬಾಲನು ಕಸರತ್ತಿನಿಂದ ಹತ್ತಿಪ್ಪತ್ತು ಕುದುರೆಗಳನ್ನು ಕಡಿದು ಹಾಕಿದನು  . ರಾಮನ ವಿಪರೀತ ಕಡಿತದಿಂದ ರಕ್ತದ ಕಾಲುವೆ ಹರಿಯಿತ . ಹೀಗೆ ಹಲಗಲಿ ಬಂಟರಾದ ಪೂಜೇರಿ ಹನುಮಾ, ಬ್ಯಾಡರ ಬಾಲ, ಜಡಗ, ರಾಮ, ಭೀಮ ಮೊದಲಾದ ಹೋರಾಡಿ ವೀರ ಮರಣವನ್ನಪ್ಪಿದ  . ಹಲಗಲಿಗೆ ಮುತ್ತಿಗೆ ಹಾಕಿ ಬೇಡರನ್ನು ಬಗ್ಗು ಬಡಿದ ಬ್ರಿಟೀಷ್ ದಂಡು ಕೊಡಲಿ, ಕುಡಗೋಲು, ಕುಡ, ಕಬ್ಬಿಣ, ಮೊಸರು ,ಬೆಣ್ಣಿ, ಹಾಲು, ಉಪ್ಪು ,ಎಣ್ಣೆ ,ಅರಿಸಿಣ, ಜೀರಗಿ , ಅಕ್ಕಿ, ಸಕ್ಕರೆ, ಬೆಲ್ಲ, ಗಂಗಳ, ತಂಬಿಗೆ, ಮಂಗಳಸೂತ್ರ, ಬೀಸುವಕಲ್ಲು  –ಹೀಗೆ  ಸಿಕ್ಕಿದ್ದೆಲ್ಲಾ ತೆಗೆದುಕೊಂಡು, ಊರಿಗೆ ಕೊಳ್ಳಿ ಇಟ್ಟು ಸುಟ್ಟು ಬೂದಿ ಮಾಡಿ ಗುರುತು ಉಳಿಯದಂತೆ ಮಾಡಿ ಹೋಗಿದ್ದರಿಂದ ಹಾಳಾಗಿ ಹೋಯಿತು.

ಈ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.

೧. “ಎಲ್ಲಎಲ್ಲ ಜನರಿಗೆ ಜೋರ ಮಾಡಿ ಕಸಿದು ಕೊಳ್ಳಿರಿ ಹತಾರ ”

ಆಯ್ಕೆ :- ಈ ವಾಕ್ಯವನ್ನು ಡಾ. ಬಿ. ಎಸ್. ಗದ್ದಗಿಮಠ ಅವರು ಸಂಪಾದಿಸಿರುವ ‘ಕನ್ನಡ ಜನಪದ ಗೀತೆಗಳು’ಕೃತಿಯಿಂದ ಆಯ್ದ ನೀಡಿರುವ ‘ಹಲಗಲಿ

ಬೇಡರು’ಎಂಬ ಪದ್ಯದಿಂದ ಆರಿಸಲಾಗಿದೆ.

ಸಂದರ್ಭ:- ಇದು ಕುಂಪಣಿ ಸರ್ಕಾರ ಹೊರಡಿಸಿದ ಆದೇಶದ ವಾಕ್ಯವಾಗಿದೆ. ಕ್ರಿ.ಶ. ೧೮೫೭ರ ಪ್ರಥಮ  ಸ್ವಾತಂತ್ರ್ಯ  ಸಂಗ್ರಾಮದ ನಂತರ ವಿದೇಶದಿ೦ದ ಕುಂಪಣಿ ಸರಕಾರ ನಿಶ್ಶಸ್ತ್ರೀಕರಣಕಾಯ್ದೆಯಡಿ ಎಲ್ಲ ಜನರಿಗೆ ಜೋರ ಮಾಡಿ ಕಸಿದು ಕೊಳ್ಳಿರಿ ಹತಾರ ಎಂಬ ಆದೇಶ ಹೊರಡಿಸಿತು.

ಇದನ್ನು ವಿರೋಧಿಸಿ ಹಲಗರ ಹಳ್ಳಿ ಸುತ್ತಾ ಮುತ್ತಾ ಮೆರೆಯಿತು ಎಂದ ಲಾವಣಿಕಾರ ಹೇಳುವ ಸಂದರ್ಭದಲ್ಲಿ ಈ ಮಾತು ಬಂದಿದೆ.

ಸ್ವಾರಸ್ಯ:- ಭಾರತೀಯರನ್ನು ನಿಶ್ಯಸ್ತ್ರೀಕರಣಗೊಳಿಸಬೇಕೆಂಬ ಕುಂಪಣಿ ಸರ್ಕಾರದ ದರ್ಪ ಈ ವಾಕ್ಯದಲ್ಲಿ ಸ್ವಾರಸ್ಯ  ಪೂರ್ಣವಾಗಿ ಅಭಿವ್ಯಕ್ತಗೊಂಡಿದೆ.

೨. “ಜೀವ ಸತ್ತು ಹೋಗುವುದು ಗೊತ್ತ ”

ಆಯ್ಕೆ :-ಈ ವಾಕ್ಯವನ್ನು ಡಾ. ಬಿ. ಎಸ್. ಗದ್ದಗಿಮಠ ಅವರು ಸಂಪಾದಿಸಿರುವ ‘ಕನ್ನಡ ಜನಪದ ಗೀತೆಗಳು’ ಕೃತಿಯಿಂದ ಆಯ್ದ ನೀಡಿರುವ ‘ಹಲಗಲಿ ಬೇಡರು’ಎಂಬ ಪದ್ಯದಿಂದ ಆರಿಸಲಾಗಿದೆ.

ಸಂದರ್ಭ:- ಇದು ಹಲಗಲಿ ಬೇಡರು  ಹೇಳಿದ ಮಾತಾಗಿದೆ. ಕುಂಪಣಿ ಸರಕಾರ ನಿಶ್ಶಸ್ತ್ರೀಕರಣ ಕಾಯ್ದೆಯಡಿ ಎಲ್ಲ ಜನರಿಗೆ ಜೋರ ಮಾಡಿ ಕಸಿದು ಕೊಳ್ಳಿರಿ ಹತಾರ ಎಂಬ ಆದೇಶ ಹೊರಡಿಸಿದಾಗ, ಹಲಗಲಿಯ ಪ್ರಮುಖರಾದ ಪೂಜಾರಿ ಹನುಮಾ, ಬ್ಯಾಡರ ಬಾಲ, ಜಡಗ  ರಾಮ ಎಂಬ ನಾಲ್ಕು ಮಂದಿ ಕೂಡಿಕೊಂಡು ನಾವು ನಮ್ಮ ಬಳಿಯಿರುವ ಆಯಧಳನ್ನು ಸತಾಯಿಸಿದರೂ  ಕೊಡಬಾರದು  . ಆಯುಧಗಳು  ಹೋದರೆ ನಮ್ಮ ಜೀವ ಸತ್ತು ಹೋಗುತ್ತದೆ ಎಂದು ಪಿತೂರಿ ಮಾಡಿದ ಸಂದರ್ಭದಲ್ಲಿ ಈ ಮಾತು ಬಂದಿದೆ.

ಸ್ವಾರಸ್ಯ:- ಆಯುಧಗಳು  ತಮ್ಮ  ಪ್ರಾಣಕ್ಕಿಂತ ಮಿಗಿಲಾದವು  , ಅವು ಹೋದರೆ ನಮ್ಮ ಪ್ರಾಣಕ್ಕೆ ಸಂಚಕಾರ ಎಂಬ ಭಾವನೆ ಹಲಗಲಿಯ ಬೇಡರ ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ಅಭಿವ್ಯಕ್ತಗೊಂಡ೦ತೆ ಇದೆ.

೩. “ಹೊಡೆದರೊ ಗುಂಡ ಕರುಣ ಇಲ್ಲದ್ಹಂಗ ”

ಆಯ್ಕೆ :-ಈ ವಾಕ್ಯವನ್ನು ಡಾ. ಬಿ. ಎಸ್. ಗದ್ದಗಿಮಠ ಅವರು ಸಂಪಾದಿಸಿರುವ ‘ಕನ್ನಡ ಜನಪದ ಗೀತೆಗಳು’ಕೃತಿಯಿಂದ ಆಯ್ದ ನೀಡಿರುವ ‘ಹಲಗಲಿ ಬೇಡರು’ಎಂಬ ಪದ್ಯದಿಂದ ಆರಿಸಲಾಗಿದೆ.

ಸಂದರ್ಭ:- ಕುಂಪಣಿ ಸರ್ಕಾರ ಹೊರಡಿಸಿದ್ದ ನಿಶ್ಶಸ್ತ್ರೀಕರಣದ ಆದೆ ಆದೇಶವನ್ನು ವಿರೋಧಿಸಿ ತಮ್ಮಲ್ಲಿರುವ ಆಯುಧಗಳನ್ನು ಕೊಡಲು ಒಪ್ಪದೆ ದಂಗೆ ಎದ್ದ ಹಲಗಲಿಯ ಬೇಡರನ್ನು  ಬಗ್ಗುಬಡಿಯಲು ಬ್ರಿಟಿಷ್‌ರ ದಂಡು ಹಲಗಲಿಗೆ ಬಂದಿತು. ಬ್ರಿಟಿಷ್ ದಂಡಿನ ಸಿಪಾಯಿಗಳು ಹಲಗಲಿಯ ಬೇಡರನ್ನು  ಬೆನ್ನು ಬೆನ್ನು ಹತ್ತಿ ತಿರುತಿರವಿ ಹಾಕಿ ಕೊಂದರು  . ಬೇಡರನ್ನು  ದಂಡಿನ ಮಧ್ಯೆ ಹಾಕಿಕೊಂಡು ಕರುಣೆ ಇಲ್ಲದೆ ಹಾಗೆ ಗುಂಡು ಹೊಡೆದು ಸಾಯಿಸಿದರು  ಎಂದು ಲಾವಣಿಕಾರ ಹೇಳಿದ ಸಂದರ್ಭವಾಗಿದೆ.

ಸ್ವಾರಸ್ಯ:- ಹಲಗಲಿಯ ಬೇಡರ ಮೇಲೆ ಗುಂಡು ಹಾರಿಸಿ ಕೊಲ್ಲುವ ಬ್ರಿಟಿಷ್ ಸೈನಿಕರ ನಿಷ್ಕಕರುಣಾ ಭಾವ ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ವರ್ಣಿತವಾಗಿದೆ.

೪. “ಕೆಟ್ಟು ವರ್ಣಿಸಿ ಹೇಳಿದೆ ಕಂಡಷ್ಟು ”

ಆಯ್ಕೆ :-ಈ ವಾಕ್ಯವನ್ನು ಡಾ. ಬಿ. ಎಸ್. ಗದ್ದಗಿಮಠ ಅವರು ಸಂಪಾದಿಸಿರುವ ‘ಕನ್ನಡ ಜನಪದ ಗೀತೆಗಳು’ಕೃತಿಯಿಂದ ಆಯ್ದ ನೀಡಿರುವ ‘ಹಲಗಲಿ ಬೇಡರು’ಎಂಬ ಪದ್ಯದಿಂದ ಆರಿಸಲಾಗಿದೆ.

ಸಂದರ್ಭ:- ಬ್ರಿಟಿಷ್‌ರ ಸೈನಿಕರು  ಹಲಗಲಿಯನ್ನು ಲೂಟಿಮಾಡಿ ಊರಿಗೆ ಬೆಂಕಿ ಇಟ್ಟು ಸುಟ್ಟು ಬೂದಿ ಮಾಡಿದ್ದರಿಂದ ಹಲಗಲಿಯು ಎಳ್ಳಷ್ಟು ಗುರುತು ಉಳಿಯದೆ ಕಾಣದೆ ಹಾಳಾಗಿ ಹೋಯಿತು. ಇದನ್ನು ಕುರ್ತುಕೋಟಿಯ ಕಲ್ಮೇಶನ ದಯದಿಂದ ನಾನು ಕಂಡೊಷ್ಟು ವರ್ಣಿಸಿ ಹೇಳಿದೆ ಎಂದು ಲಾವಣಿಕಾರ ಹಾಡಿದ ಸಂದರವಾಗಿದೆ.

ಸ್ವಾರಸ್ಯ:- ಹಲಗಲಿ ಬೇಡರು  ಹೋರಾಡಿ ಕೆಟ್ಟು ಹೋದ ವಿಚಾರವನ್ನು ಕಂಡಷ್ಟು  ವರ್ಣಿಸಿದ್ದೇನೆ ಎಂದು ಹೇಳಿರುವುದು ಸ್ವಾರಸ್ಯಪೂರ್ಣವಾಗಿದೆ.

ಉ) ಬಿಟ್ಟ ಜಾಗಗಳನ್ನು ಸೂಕ್ತ ಪದಗಳಿಂದ ತುಂಬಿರಿ.

೧. ಹಲಗಲಿ ಬಂಟರ ಕದನ  ವೀರರಸ ಪ್ರಧಾನವಾದ ಲಾವಣಿ

(ಕತೆ  ಗಾದೆ, ಒಗಟು, ಲಾವಣಿ)

೨. ಹಲಗಲಿಯು ಈಗ ಈ ಜಿಲ್ಲೆಗೆ ಸೇರಿದೆ ಬಾಗಲಕೋಟೆ

(ಬಾಗಲಕೋಟೆ, ಕಲಾದಗಿ, ಮುಧೋಳ, ಹೆಬಲಕ)

೩. ಕುಂಪಣಿ ಸರ್ಕಾರ ಜಾರಿಗೆ ತಂದ ಶಾಸನ ನಿಶ್ಶಸ್ತ್ರೀಕರಣ

(ಯುದ್ಧಶಾಸನ, ನಿಶ್ಶಸ್ತ್ರೀಕರಣ, ಕಬುಲಶಾಸನ, ಕುರ್ತಕೋಟಿಶಾಸನ)

೪. ಲಾವಣಿಕಾರ ಅಂಕಿತಗೊಳಿಸಿರುವ ದೈವ ಕಲ್ಮೇಶ

(ಕಲ್ಮೇಶ, ಹನುಮ, ರಾಮ, ಲಕ್ಷ್ಮೀಶ)

೫. ‘ವಿಲಾತಿ’ ಪದದ ಸರಿಯಾದ ರೂಪ ವಿಲಾಯಿತಿ

(ಆಯುಧ, ವಿಹಾರ, ವಿಲಂತಿ, ವಿಲಾಯಿತಿ)

ಭಾಷಾ ಚಟುವಟಿಕೆ

೧. ಕೊಟ್ಟಿರುವ ಪದಗಳನ್ನು ವಿಗ್ರಹಿಸಿ ಸಮಾಸವನ್ನು ಹೆಸರಿಸಿ.

ಮುಂಗೈ              =ಕೈಯ              +ಮುಂದು                                -ಅಂಶಿಸಮಾಸ

ನಡುರಾತ್ರಿ          =ರಾತ್ರಿಯ        +ನಡು                                        – ಅ೦ಶಿಸಮಾಸ

ಹನುಮಭೀಮರಾಮ  =ಹನುಮನೂ+ಭೀಮನೂ    +ರಾಮನೂ    -ದ್ವ೦ದ್ವಸಮಾಸ

ಮೋಸಮಾಡು   =ಮೋಸರನ್ನು  +ಮಾಡು                                 -ಕ್ರಿಯಾಸಮಾಸ

೨. ಕೊಟ್ಟಿರುವ ಗ್ರಾಮ್ಯ ಪದಗಳಿಗೆ ಗ್ರಾಂಥಿಕ ರೂಪ ಬರೆಯಿರಿ.

ಹೀಂಗ, ಮ್ಯಾಗ, ಕಳುವ್ಯಾರೆ, ಇಲ್ಲದ್ಹಂಗ, ಇಸವಾಸ, ಸಕ್ಕಾರಿ.

➢ಹೀಂಗ ಹೀಗೆ
➢ಮ್ಯಾಗ✓ ಮೇಲೆ
➢ಕಳುವ್ಯಾರೆ✓ ಕಳುಹಿಸಿದ್ದಾರೆ
➢ಇಲ್ಲದ್ಹ೦ಗ✓ ಇಲ್ಲದಹಾಗೆ
➢ಇಸವಾಸ✓ ವಿಶ್ವಾಸ
➢ಸಕ್ಕಾರಿ✓ ಸಕ್ಕರೆ

೩. ಅಲಂಕಾರವನ್ನು ಹೆಸರಿಸಿ ಸಮನ್ವಯಿಸಿ.

ಅ) ಒಳಗಿನ ಮಂದಿ ಗುಂಡು ಹೊಡಿದರೊ ಮುಂಗಾರಿ ಸಿಡಿಲ ಸಿಡಿದ್ಹಾಂಗ

ಅಲ೦ಕಾರ: ಉಪಮಾಲಂಕಾರ ( ಧರ್ಮಲುಪ್ತೋ ಪಮಾಲಂಕಾರ )

ಉಪಮೇಯ: ಒಳಗಿನ ಮಂದಿ ಗುಂಡು ಹೊಡೆಯುವುದು

ಉಪಮಾನ: ಮುಂಗಾರಿನ ಸಿಡಿಲು ಸಿಡಿಯುವುದು

ಉಪಮಾ ವಾಚಕ: ಹಾಂಗ

ಸಮಾನ ಧರ್ಮ: ಸ್ಪಷ್ಟವಾಗಿಲ್ಲ (ಸಿಡಿಯುವುದು)

ಸಮನ್ವಯ: ಇಲ್ಲಿ ಉಪಮೇಯವಾದ ಒಳಗಿನ ಮಂದಿ ಗುಂಡು ಹೊಡೆಯುವುದನ್ನು  ಉಪಮಾನವಾದ

ಮುಂಗಾರಿನ ಸಿಡಿಲು ಸಿಡಿಯುವುದಕ್ಕೆ ಪರಸ್ಪರ  ಹೋಲಿಸಿ ವರ್ಣಿಸಲಾಗಿದೆ.

ಲಕ್ಷಣಎರಡು ವಸ್ತುಗಳಿಗಿರುವ ಸಾದೃಶ್ಯಸಂಪತ್ತನ್ನು  ಹೋಲಿಸಿ ವರ್ಣಿಸಿದರೆ ಅದು ‘

ಉಪಮಾಲಂಕಾರ

ಆ) ಸಿಡಿಲು ಸಿಡಿದ್ಹಾಂಗ ಗುಂಡು ಸುರಿದಾವ

ಅಲಂಕಾರ: ಉಪಮಾಲಂಕಾರ ( ಧರ್ಮಲುಪ್ತೋ ಪಮಾಲಂಕಾರ )

ಉಪಮೇಯ: ಗುಂಡು ಸುರಿಯುವುದು

ಉಪಮಾನ: ಸಿಡಿಲು ಸಿಡಿಯುವುದು

ಉಪಮಾ ವಾಚಕ: ಹಾಂಗ

ಸಮಾನ ಧರ್ಮ: ಸ್ಪಷ್ಟವಾಗಿಲ್ಲ (ಸುರಿಯುವುದು, ತೀವ್ರತೆ)

ಸಮನ್ವಯ:ಇಲ್ಲಿ ಉಪಮೇಯವಾದ ಗುಂಡು ಸುರಿಯುವುದನ್ನು  ಉಪಮಾನವಾದ ಸಿಡಿಲು

ಸಿಡಿಯುವುದಕ್ಕೆ ಪರಸ್ಪರ ಹೋಲಿಸಿವರ್ಣಿಸಲಾಗಿದೆ.

 ಲಕ್ಷಣ: ಎರಡು ವಸ್ತುಗಳಿಗಿರುವ ಸಾದೃಶ್ಯಸಂಪತ್ತನ್ನು  ಹೋಲಿಸಿ ವರ್ಣಿಸಿದರೆ ಅದು ‘

ಉಪಮಾಲಂಕಾರ

೪. ಸ್ವಂತ ವಾಕ್ಯದಲ್ಲಿ ಬಳಸಿ.

ಒಳಗಿಂದೊಳಗೆ, ಸುದ್ದಿ, ಮಂದಿ, ಕಸರತ್ತು.

ಒಳಗಿಂದೊಳಗೆ: ಹಲಗಲಿಯ ಬೇಡರೆಲ್ಲ ಒಂದೆಡೆ ಸೇರಿಕೊಂಡು ಒಳಗಿಂದೊಳಗೆ ಮಾತು ಕೊಟ್ಟರು  .
ಸುದ್ದಿ: ಕಾರಕೂನನ ಕಪಾಳ ಹೊಡೆದು, ಸಿಪಾಯಿಯನ್ನು ಸಾಯಿಸಿ ನೆಲಕ್ಕೆ ಬೀಳುವಂತೆ ಮಾಡಿದ ದುಃಖದ ಸುದ್ದಿಸಾಹೇಬನಿಗೆ ಮುಟ್ಟಿತು.
ಮಂದಿ:ಒಳಗಿನ ಮಂದಿ ಮುಂಗಾರಿ ಸಿಡಿಲ ಸಿಡಿದ್ಹಾಂಗ ಗುಂಡು ಹೊಡಿದರು.
ಕಸರತ್ತು: ಬಾಲನು ಕಸರತ್ತು ಮಾಡಿ ಹತ್ತಿಪ್ಪತ್ತು ಕುದುರೆಗಳನ್ನು ಕಡಿದು ಹಾಕಿದರು.

೫. ದೇಶ್ಯ-ಅನ್ಯದೇಶ್ಯ ಪದಗಳನ್ನು ಆರಿಸಿ ಬರೆಯಿರಿ.

ಹೊತ್ತು, ಹತಾರ, ಮಸಲತ್ತ, ಬಂಟರು, ಹುಕುಮ, ಮುಂಗೈ, ಸಾಹೇಬ, ಕಾರಕೂನ, ಸಿಪಾಯಿ, ಮುಂಗಾರು, ಕಬುಲ.

ದೇಶಿಯ ಪದಗಳುಹೊತ್ತು ,ಬಂಟರು , ಮುಂಗೈ , ಮುಂಗಾರು.
ಅನ್ಯದೇಶಿಯ ಪದಗಳುಹತಾರ , ಮಸಲತ್ತ , ಹುಕುಮ , ಸಾಹೇಬ , ಕಾರಕೂನ , ಸಿಪಾಯಿ , ಕಬುಲ.

ಚಟುವಟಿಕೆ

೧. ಕೊಟ್ಟಿರುವ ಪದ್ಯಭಾಗವನ್ನು ಪೂರ್ಣಗೊಳಿಸಿ, ಕಂಠಪಾಠ ಮಾಡಿರಿ.

ಕೊಡಲಿ ಕೋರೆ ಕುಡ ಕಬ್ಬಿಣ ಮೊಸರು ಬೆಣ್ಣಿ ಹಾಲಾಉಪ್ಪು ಎಣ್ಣಿ ಅರಿಸಿಣ ಜೀರಗಿ ಅಕ್ಕಿಸಕ್ಕಾರಿ ಬೆಲ್ಲಾಗಂಗಳ ಚೆರಗಿ ಮಂಗಳ ಸೂತ್ರ ಹೋದವು ಬೀಸುಕಲ್ಲಾಹಾಳಾಗಿ ಹೋಯಿತು ಅತ್ತು ವರ್ಣಿಸಿ ಹೇಳಲಿ ನಾನೆಷ್ಟಾಸಿಕ್ಕದ್ದು  ತಗೊಂಡು ಸರದ ನಿಂತರೊ ಊರಿಗೆ ಕೊಳ್ಳಿ ಕೊಟ್ಟಾಬೂದಿ ಮಾಡ್ಯಾರೊ ಹಲಗಲಿ ಸುಟ್ಟು ಗುರ್ತುಳಿಯಲಿಲ್ಲೆಳ್ಳಷ್ಟೂ ಕಾಣದೆ ಹೋಯಿತೊ ಕೆಟ್ಟು ವರ್ಣಿಸಿ ಹೇಳಿದೆ ಕಂಡಷ್ಟುಕುರ್ತಕೋಟಿ ಕಲ್ಮೇಶನ ದಯದಿಂದ ಹಾಡಿದೆನಣ್ಣಾ ಜನಕಾ

FAQ :

1. ಹಲಗಲಿ ಗುರುತು ಉಳಿಯದಂತಾದುದು ಏಕೆ ?

ಕುಂಪಣಿ ಸರ್ಕಾರದ ದಂಡು ಹಲಗಲಿಗೆ ಬೆಂಕಿ ಹಚ್ಚಿ ಸುಟ್ಟು ಬೂದಿ ಮಾಡಿದ್ದರಿಂದ ಗುರುತು ಉಳಿಯದಂತಾಯಿತು.

2. ಯಾವ ಘಟನೆ ಹಲಗಲಿ ಲಾವಣಿಗೆ ಕಾರಣವಾಗಿದೆ ?

ಹಲಗಲಿಯ ಬಂಟರ ಹತಾರ ಕದನದ ಘಟನೆ ಹಲಗಲಿ ಲಾವಣಿಗೆ ಕಾರಣವಾಗಿದೆ.

3. ಹಲಗಲಿ ಗ್ರಾಮ ಎಲ್ಲಿದೆ ?

ಹಲಗಲಿ ಗ್ರಾಮ ಮುಧೋಳ ಸಂಸ್ಥಾನದಲ್ಲಿದ್ದು, ಇಂದಿನ ಬಾಗಲಕೋಟೆ ಜಿಲ್ಲೆಗೆ ಸೇರಿದೆ.

ಇತರೆ ವಿಷಯಗಳು :

10th Standard All Subject Notes

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Class Subjects Notes

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ 10ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *