rtgh

7ನೇ ತರಗತಿ ಗೊಂಬೆ ಕಲಿಸುವ ನೀತಿ ಕನ್ನಡ ನೋಟ್ಸ್ | 7th Standard Gombe Kalisuva Neeti Kannada Notes‌ 2024

7ನೇ ತರಗತಿ ಕನ್ನಡ ಗೊಂಬೆ ಕಲಿಸುವ ಪೂರಕ ಪಾಠದ ನೋಟ್ಸ್ ಪ್ರಶ್ನೋತ್ತರಗಳು, 7th Standard Gombe Kalisuva Neeti Kannada Notes‌ Question Answer Summary Mcq Pdf Download in Kannada Medium Karnataka State Syllabus 2024, Kseeb Solutions For Class 7 Kannada Puraka Pata Gombe Kalisuva Neeti Notes, 7th Class Gombe Kalisuva Neeti in Kannada Notes Pdf

7th Gombe Kalisuva Neeti Notes in Kannada 2024

7th Gombe Kalisuva Neeti

ತರಗತಿ : 7ನೇ ತರಗತಿ

ವಿಷಯ : ಕನ್ನಡ

ಪಾಠದ ಹೆಸರು : ಗೊಂಬೆ ಕಲಿಸುವ ನೀತಿ

ಕವಿ ಪರಿಚಯ:

ಆರ್ . ಎನ್ . ಜಯಗೋಪಾಲ್‌ರವರು ಕನ್ನಡ ಚಿತ್ರರಂಗದ ಶ್ರೇಷ್ಠ ಗೀತರಚನಕಾರರು . ಇವರು ೧೯೩೫ ರ ಆಗಸ್ಟ್ ೧೭ ರಂದು ಜನಿಸಿದರು . ತಂದೆ ಕನ್ನಡ ಚಿತ್ರರಂಗದ ಭೀಷ್ಮರೆನಿಸಿದ್ದ ಆರ್ . ನಾಗೇಂದ್ರರಾಯರು . ಜಯಗೋಪಾಲರ ಓರ್ವ ಸೋದರ ಸುದರ್ಶನ್ ಪ್ರಸಿದ್ಧ ನಟ , ಇನ್ನೊಬ್ಬರು ಸೋದರರಾದ ಕೃಷ್ಣಪ್ರಸಾದ್ ಪ್ರಸಿದ್ಧ ಛಾಯಾಗ್ರಾಹಕರಾಗಿದ್ದರು . ಹೀಗೆ ಪ್ರತಿಭಾವಂತರ ಸಂಗದಲ್ಲಿ ಬೆಳೆದವರು ಜಯಗೋಪಾಲ್ . ಹಾಡೊಂದ ಹಾಡುವೆ ನೀ ಕೇಳು ಮಗುವೆ , ಗಗನವು ಎಲ್ಲೋ ಭೂಮಿಯು ಎಲ್ಲೋ , ಕರ್ಪೂರದಾ ಬೊಂಬೆ ನಾನು , ನೀರಿನಲ್ಲಿ ಅಲೆಯ ಉಂಗುರ , ಅಮ್ಮಾ ನಿನ್ನ ತೋಳಿನಲ್ಲಿ – ಮುಂತಾದವು ಇವರ ಪ್ರಸಿದ್ಧ ಚಿತ್ರಗೀತೆಗಳು . ರಾಗವಷ್ಟೇ ಅಲ್ಲದೆ ಹಾಡಿನ ಅರ್ಥಕ್ಕೆ ಜಯಗೋಪಾಲ್ ವಿಶೇಷ ಗಮನ ಕೊಡುತ್ತಿದ್ದರು . ತನ್ನ ವೃತ್ತಿಜೀವನದಲ್ಲಿ ಇವರು ೧೬೦೦ ಕ್ಕೂ ಹೆಚ್ಚು ಗೀತೆಗಳನ್ನು ಬರೆದಿದ್ದಾರೆ . “ ನಗುವ ನಯನ ಮಧುರ ಮೌನ ” ಇವರ ಗೀತೆಗಳ ಸಂಕಲನ . “ ಪಲ್ಲವಿ ಅನುಪಲ್ಲವಿ ” ಹಲವಾರು ರಾಜ್ಯ , ಅಂತರರಾಜ್ಯ ಪ್ರಶಸ್ತಿಗಳನ್ನು ಗಳಿಸಿದ್ದಾರೆ.

ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

೧. ಜೀವನದಲ್ಲಿ ಸೋತವರಿಗೆ ಗೊಂಬೆಯು ಕೊಡುವ ಧೈರ್ಯವೇನು?

ಜೀವನದಲ್ಲಿ ಎಷ್ಟೇ ಏಳು-ಬೀಳುಗಳು ಬಂದರೂ ಸೋಲದೆ, ತಲೆ ಬಾಗದೆ ನಗುನಗುತಾ ಇರಬೇಕು ಎಂದು ಗೊಂಬೆಯು ಜೀವನದಲ್ಲಿ ಸೋತವರಿಗೆ ಧೈರ್ಯ ಕೊಡುತ್ತದೆ.

೨. ಗೊಂಬೆಯು ಹೇಗೆ ತೂಗುತ್ತಿರುತ್ತದೆ?

ಕಷ್ಟವೇ ಇರಲಿ, ಸುಖವೇ ಇರಲಿ ಅಳುಕದೆ ಆಡಿ ತೂಗುತ್ತಿರುತ್ತದೆ.

೩.ಗೊಂಬೆಯು ಹೇಳುವ ನೀತಿಯ ಸಾರಾಂಶವೇನು?

ಜೀವನದಲ್ಲಿ ಎಷ್ಟೇ ಎಡರು-ತೊಡರುಗಳು, ಬಡತನ- ಸಿರಿತನ ಬಂದರೂ, ಅಳುಕದೆ ಅಂಜದೆ ತನ್ನ ಕಷ್ಟಗಳನ್ನು ನುಂಗಿ ಇತರರಿಗೆ ಒಳ್ಳೆಯದಾಗುವಂತೆ ಗೊಂಬೆ ತೋರಿಸಿಕೊಡುತ್ತದೆ.

೪. ಗೊಂಬೆಯು ನಿಶ್ಚಲವಾಗುವುದು ಯಾವಾಗ?

ಆಡಿಸುವಾತ ಅಂದರೆ ಜೀವ ತುಂಬಿದ ದೇವರ ಕೈ ಸೋತಾಗ ಗೊಂಬೆಯು ನಿಶ್ಚಲವಾಗುವುದು.

೫.ತಾವು ಕಷ್ಟಪಟ್ಟರೂ ಲೋಕಕ್ಕೆ ಉಪಕಾರ ಮಾಡುವ ಮೂರು ಸಂಗತಿಗಳು ಯಾವುವು?

ಮೈಯನು ಹಿಂಡಿ ಸಿಹಿ ಕೊಡುವ ಕಬ್ಬು, ತೇಯುತ್ತಿದ್ದರೂ ಪರಿಮಳ ನೀಡುವ ಗಂಧ ಮತ್ತು ತಾನೇ ಉರಿದು ಮನೆಗೆ ಬೆಳಕು ಕೊಡುವ ದೀಪ. ಇವು ತಾವು ಕಷ್ಟಪಟ್ಟರೂ ಲೋಕಕ್ಕೆ ಉಪಕಾರ ಮಾಡುತ್ತದೆ.

FAQ :

ಜೀವನದಲ್ಲಿ ಸೋತವರಿಗೆ ಗೊಂಬೆಯು ಕೊಡುವ ಧೈರ್ಯವೇನು?

ಜೀವನದಲ್ಲಿ ಎಷ್ಟೇ ಏಳು-ಬೀಳುಗಳು ಬಂದರೂ ಸೋಲದೆ, ತಲೆ ಬಾಗದೆ ನಗುನಗುತಾ ಇರಬೇಕು ಎಂದು ಗೊಂಬೆಯು ಜೀವನದಲ್ಲಿ ಸೋತವರಿಗೆ ಧೈರ್ಯ ಕೊಡುತ್ತದೆ.

ಗೊಂಬೆಯು ನಿಶ್ಚಲವಾಗುವುದು ಯಾವಾಗ?

ಆಡಿಸುವಾತ ಅಂದರೆ ಜೀವ ತುಂಬಿದ ದೇವರ ಕೈ ಸೋತಾಗ ಗೊಂಬೆಯು ನಿಶ್ಚಲವಾಗುವುದು.

ಗೊಂಬೆಯು ಹೇಗೆ ತೂಗುತ್ತಿರುತ್ತದೆ?

ಕಷ್ಟವೇ ಇರಲಿ, ಸುಖವೇ ಇರಲಿ ಅಳುಕದೆ ಆಡಿ ತೂಗುತ್ತಿರುತ್ತದೆ.

ಇತರೆ ವಿಷಯಗಳು :

7th Standard All Subject Notes

7ನೇ ತರಗತಿ ಕನ್ನಡ ಪುಸ್ತಕ Pdf

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ  7ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *