ವಾಲ್ ಪರೈಃ ಅಭಿವೃದ್ಧಿ ತಂದ ದುರಂತ ಕನ್ನಡ ನೋಟ್ಸ್, 2nd Puc Kannada 2nd Lesson Notes Question Answer Valparai Abhivrudhi Tanda Durantha Pdf 2024
ತರಗತಿ : ದ್ವಿತೀಯ ಪಿ.ಯು.ಸಿ
ಪಾಠದ ಹೆಸರು : ವಾಲ್ ಪರೈಃ ಅಭಿವೃದ್ಧಿ ತಂದ ದುರಂತ
ಕೃತಿಕಾರರ ಹೆಸರು : ಕೃಪಾಕರ ಸೇನಾನಿ . ಕೆ. ಪುಟ್ಟಸ್ವಾಮಿ
2nd Puc Kannada 2nd Lesson Notes
ಕೃತಿಕಾರರ ಪರಿಚಯ :
ಕೃಪಾಕರ ( ೦೭೦೭೧೯೫೬ ) ಮತ್ತು ಸೇನಾನಿ ( ೦೧.೦೧ . ೧೯೬೦ ) ಇಬ್ಬರೂ ವನ್ಯಜೀವಿ ಛಾಯಾಗ್ರಹಣದಲ್ಲಿ ಖ್ಯಾತನಾಮರು , ಮೈಸೂರಿನವರು , ಏಷ್ಯಾದಲ್ಲಿಯೇ ಮೊಟ್ಟಮೊದಲ ಬಾರಿಗೆ ಕಾಡಿನಲ್ಲಿರುವ ಸೀಳುನಾಯಿಗಳನ್ನು ಕುರಿತ ಸಾಕ್ಷ್ಯ ಚಿತ್ರಕ್ಕಾಗಿ ಪ್ರತಿಷ್ಠಿತ ಗ್ರೀನ್ ಆಸ್ಕರ್ ಪುರಸ್ಕಾರಕ್ಕೆ ಪಾತ್ರರಾದವರು . ನಮ್ಮ ಸುತ್ತಮುತ್ತಲಿನ ಜೀವಜಾಲದ ಬಗ್ಗೆ ಅಪಾರ ಕಾಳಜಿಯುಳ್ಳವರು , ಕಾಡುಗಳ್ಳ ವೀರಪ್ಪನ್ ನಿಂದ ಅಪಹರಣಕ್ಕೊಳಗಾಗಿ , ತಮ್ಮ ಸಜ್ಜನಿಕೆಯ ವ್ಯಕ್ತಿತ್ವದಿಂದ ಪಾರಾಗಿ ಬಂದವರು . ಇವರಿಬ್ಬರೂ ಒಟ್ಟಾಗಿ ತೆಗೆದ ಛಾಯಾಚಿತ್ರಗಳು , ಸಾಕ್ಷ್ಯಚಿತ್ರಗಳು ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿವೆ . ಮೈಸೂರಿನಲ್ಲಿ ವಾಸವಿರುವ ಇವರು ಕಾಡಿನಲ್ಲಿರುವುದೇ ಹೆಚ್ಚು .
ಇವರಿಬ್ಬರೂ ಕೆ . ಪುಟ್ಟಸ್ವಾಮಿಯವರೊಂದಿಗೆ ಸೇರಿ ರಚಿಸಿರುವ ‘ ಜೀವಜಾಲ ‘ ಎಂಬ ಕೃತಿ ಅತ್ಯಂತ ಪ್ರಸಿದ್ಧವಾಗಿದೆ . ಡಾ . ಕೆ . ಪುಟ್ಟಸ್ವಾಮಿ ತಮ್ಮ ಸಿನಿಮಾಯಾನ ‘ ಕೃತಿಗಾಗಿ ರಾಷ್ಟ್ರಪತಿಗಳ ಸ್ವರ್ಣಕಮಲ ಪ್ರಶಸ್ತಿ ಪಡೆದ ಪ್ರತಿಭಾವಂತರು . ತಮ್ಮ ಪರಿಸರ ಮತ್ತು ವಿಜ್ಞಾನ ಸಂಬಂಧ ಬರಹಗಳಿಂದ ಪ್ರಸಿದ್ಧರಾಗಿದ್ದಾರೆ . ಮಾನವನ ಪ್ರವಾಸ ಮತ್ತು ಸಾಹಸ ಪ್ರವೃತ್ತಿಗಳು ಕಾಡನ್ನು ನಾಶಮಾಡುವ ಮೂಲಕ ಜೈವಿಕ ಜಗತ್ತಿನ ಏರುಪೇರುಗಳಿಗೆ ಕಾರಣವಾಗುವ ದುರಂತಗಳನ್ನು ಕುರಿತು ಪ್ರಸ್ತುತ ಲೇಖನವು ಗಮನ ಸೆಳೆದಿದೆ . ಮಿಲಿಯಾಂತರ ವರ್ಷಗಳಿಂದ ವಿಕಾಸಗೊಂಡು ಅರಳಿದ ಜೈವಿಕ ವೈವಿಧ್ಯ ನಾಶವನ್ನು ಮನುಷ್ಯನ ಸ್ವಾರ್ಥ ಮೂಲ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಸಿಕೊಂಡು ಬಂದಿರುವುದಕ್ಕೆ ‘ ವಾಲ್ ಪರೈ ‘ ನೆಪಮಾತ್ರವಾಗಿದೆ .
ಪಾಠದ ಆಶಯ :
ʼಮಾನವನ ಎಲ್ಲ ಅವಶ್ಯಕತೆಗಳನ್ನು ಪೂರೈಸುವ ಶಕ್ತಿ ಈ ಭೂಮಿಗೆ ಇದೆ . ಆದರೆ ಅವನ ದುರಾಸೆಗಳನ್ನಲ್ಲ ‘ ಎಂದು ಫ್ರಾನ್ಸಿಸ್ ಬೆಕನ್ ಎಂಬ ತತ್ತ್ವಜ್ಞಾನಿ ಹೇಳಿದ ಮಾತು ಮನುಷ್ಯನ ಅಂತರಾಳವನ್ನು ಹೊಕ್ಕಿಲ್ಲ . ಪ್ರಾಕೃತಿಕ ಅಸಮತೋಲನಕ್ಕೆ ಮಾನವನ ದುರಾಸೆಯೇ ಮೂಲ ಕಾರಣವಾಗಿದೆ . ಹಣದ ಬೆನ್ನು ಹತ್ತಿರುವ ಮಾನವ ಪ್ರಕೃತಿಯನ್ನು ನಾಶಗೈಯುತ್ತಾ ಅಟ್ಟಹಾಸ ಮೆರೆಯುತ್ತಿದ್ದಾನೆ . ಗಣಿಗಾರಿಕೆ , ಮರಳುದಂಧೆ , ನೀರಿನ ಮಾರಾಟ , ಅರಣ್ಯಲೂಟಿ , ಪ್ರಾಣಿ ಸಂಕುಲಗಳ ಬೇಟೆ – ಇವೆಲ್ಲವೂ ಪ್ರಕೃತಿ ಮತ್ತು ಜೀವಜಾಲಕ್ಕೆ ವಿನಾಶವನ್ನು ತಂದಿದೆ .
ಅರಣ್ಯನಾಶದಿಂದ ಪ್ರಾಣಿಸಂಕುಲ ನಾಶ , ಹವಾಮಾನ ವೈಪರೀತ್ಯ , ಬರಗಾಲ – ಜಲಮೂಲಗಳ ನಾಶ ಇದರಿಂದ ನಾನಾ ಖಾಯಿಲೆಗಳ ತವರಾಗಿ ಮಾನವ ಹಾಗೂ ಪ್ರಾಣಿ ಸಂಕುಲಗಳ ಬದುಕು ದುರ್ಬರವಾಗುತ್ತಿದೆ . ಪ್ರತಿಯೊಬ್ಬರಲ್ಲೂ ಪ್ರಕೃತಿಯನ್ನು ಪ್ರೀತಿಸುವ , ರಕ್ಷಿಸುವ , ಉಳಿಸಿ – ಬೆಳೆಸುವ ಮನೋಭಾವ ಮೂಡಿ ಕಾರ್ಯಪ್ರವೃತ್ತವಾಗಬೇಕಾಗಿದೆ . ಈ ಮೂಲಕ ಮುಂದಿನ ಪೀಳಿಗೆಗೆ ಹಿತವಾದ ಬದುಕಿನ ವಾತಾವರಣವನ್ನು ಉಳಿಸುವ ದಿಕ್ಕಿನಲ್ಲಿ ನಮ್ಮ ಪಯಣ ಸಾಗಬೇಕಾಗಿದೆ . ಪ್ರಸ್ತುತ ‘ ವಾಲ್ಪಠ್ಯ : ಅಭಿವೃದ್ಧಿ ತಂದ ದುರಂತ ‘ ಎಂಬ ಲೇಖನವು ನಮ್ಮ ಅನುಭವದ ವ್ಯಾಪ್ತಿಯಲ್ಲಿ ಜೀವಜಾಲದ ಸಂಕೀರ್ಣತೆಯನ್ನು ಅರಿಯುವ ನಿಟ್ಟಿನಲ್ಲಿ ನಡೆಸಿರುವ ಒಳನೋಟವುಳ್ಳ ಪ್ರಯತ್ನವಾಗಿದೆ .
ಶಬ್ದಾರ್ಥ :
ದುರಂತ – ಅಪಾಯ ; ಪರಾಕಾಷ್ಠೆ – ತುತ್ತತುದಿ : ವಿರಾಟ್ – ವಿಶ್ವರೂಪ ; ಪತನ – ಅವನತಿ ; ಸಂಕುಲ – ಗುಂಪು , ಸಮೂಹ ; ರೋಚಕ – ಸುಖಕರವಾದ , ಹಿತಕಾರಿ ; ಅಧಿಪತ್ಯ – ಯಜಮಾನಿಕೆ , ಒಡೆತನ ; ನಿಬಿಡ – ದಟ್ಟವಾದ , ಸಾಂದ್ರವಾದ ; ಸಾಂದ್ರತೆ – ದಟ್ಟಣೆ ; ಎಡೆ – ಸ್ಥಳ , ಜಾಗ ; ಬಿಡಾರ – ತಂಗುವ ಸ್ಥಳ : ನೀರವತೆ – ಮೌನ , ನಿಶಬ್ಧ ; ಕುಮ್ಮಕ್ಕು – ಸಹಾಯ , ಒತ್ತಾಸೆ ; ಏಕಸ್ವಾಮ್ಯತೆ – ಒಬ್ಬರ ಒಡೆತನದಲ್ಲಿರುವ ; ಕುರುಹು – ಗುರುತು ; ಕ್ಷೀಣಿಸು – ಸೊರಗು , ಕ್ಷಯಿಸು ; ಅನುರಣಿಸು – ಅನುಸರಿಸಿ ಮುಂದುವರಿದ ಧ್ವನಿ ; ಅವನತಿ – ಕೀಳುದೆಸೆ .
2nd Puc Kannada 2nd Lesson Notes Question Answer
I. ಒಂದು ವಾಕ್ಯದಲ್ಲಿ ಉತ್ತರಿಸಿ : ( ಒಂದು ಅಂಕದ ಪ್ರಶ್ನೆಗಳು )
ವಾಲ್ಪರೈಗೆ ಬಂದ ಬ್ರಿಟಿಷ್ ಪ್ರಜೆ ‘ ಕಾರ್ವೆರ್ ಮಾರ್ಷ್
ಮಾರ್ಷ್ ವಾಲ್ಪರೈಗೆ ಬಂದದ್ದು 1890 ರಲ್ಲಿ
ಬ್ರಿಟಿಷರಲ್ಲಿ ಹಾಯ್ದು ಬಂದಿರುವ ಅನುಷಂಗಿಕ ಗುಣವೆಂದರೆ ‘ ಅನ್ವೇಷಿಸುವ ಪ್ರವೃತ್ತಿ .
ಸಿಂಹಬಾಲದ ಕೋತಿಗಳು ಈಗ ಕೆಂಪು ಪಟ್ಟಿಗೆ ಸೇರಿದ ಪ್ರಾಣಿಗಳಾಗಿವೆ .
ಮಾರ್ಷ್ನ ಜೊತೆಗಾರನ ಹೆಸರು ಪೂಣಚ್ಚ
ವಾಲ್ಪರೈನ ದುರಂತದ ಬೀಜಗಳು ಚಹಾ ಗಿಡದ ರೂಪದಲ್ಲಿ ಬಂದವು .
ವಾಲ್ಪರೈ , ಈಗ ಚಹಾ ತೋಟಗಳಿಂದ ಕಂಗೊಳಿಸುತ್ತಾ , ಲಕ್ಷಾಂತರ ಜನ ವಾಸಸ್ಥಾನವಾಗಿದೆ .
II. ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ : ( ಎರಡು ಅಂಕದ ಪ್ರಶ್ನೆಗಳು )
2nd Puc Kannada 2nd Lesson Notes 2024
1 ) ಮಾರ್ಷ್ನನ್ನು ಕಂಡು ಆದಿವಾಸಿಗಳು ಹೇಗೆ ಪ್ರತಿಕ್ರಿಯಿಸಿದರು ?
ಮಾರ್ಷ್ನನ್ನು ಕಂಡು ಆದಿವಾಸಿಗಳು ಹೆದರಿದರು , ಏಕೆಂದರೆ ಅವರೆಂದೂ ಕುದುರೆಯಂತಹ ಪ್ರಾಣಿಗಳನ್ನು ಕಂಡಿರಲಿಲ್ಲ . ಮಾರ್ಷ್ನ ನಾಜೂರು ಪೋಷಾಕುಗಳನ್ನು ಕೂಡ ಅವರು ಕಂಡಿರಲಿಲ್ಲ . ಆದ್ದರಿಂದ ಕುದುರೆ ಹೆಜ್ಜೆಯ ಸಪ್ಪಳ ಕೇಳುತ್ತಿದ್ದಂತೆ ಕಾಡಿನೊಳಗೆ ಮಾಯವಾಗಿದ್ದರು .
2 ) ಸಿಂಹ ಬಾಲದ ಕೋತಿಗಳಿಗೆ ಒದಗಿದ ತೊಂದರೆ ಏನು ?
ಮರದ ಮೇಲೆ ವಾಸಮಾಡುತ್ತಿದ್ದ ಸಿಂಹ ಬಾಲದ ಕೋತಿಗಳಿಗೆ ವಾಸಸ್ಥಾನದ ಆಹಾರದ ಸಮಸ್ಯೆ ಉಂಟಾಯಿತು . ಮರದಿಂದ ಮರಕ್ಕೆ ಹಾರಬಲ್ಲ ಈ ಕೋತಿಗಳು ಈಗ ಮತ್ತೊಂದು ಮರ ಹತ್ತಬೇಕಾದರೆ ಮರದಿಂದ ಇಳಿದು ಡಾಂಬರ್ ರಸ್ತೆ ದಾಟಿ ಮತ್ತೊಂದು ಮರ ಹತ್ತಬೇಕಾಗಿತ್ತು . ವಾಹನಗಳ ಸಂಚಾರ ಹೆಚ್ಚಾದ ಕಾರಣ ಎಷ್ಟೋ ಕೋತಿಗಳು ಅಂಗವಿಕಲವಾದವು , ಇವು ಕೆಂಪು ಪಟ್ಟಿಯಿರುವ ಜೀವಿಗಳಾದವು . ಅರಣ್ಯ ಇಲಾಖೆಯವರು ವಿಜ್ಞಾನಿಗಳ ಅಸಹಾಯಕತೆಯಿಂದಾಗಿ ಇವು ಬದುಕುಳಿಯಲು ಊರಿನಂಗಳದ ಕಸದ ತೊಟ್ಟಿಗಳಲ್ಲಿ ಆಹಾರ ಹುಡುಕುತ್ತಾ ಬದುಕು ನೂಕುತ್ತಿವೆ .
3 ) ಕೈಗಾರಿಕೋದ್ಯಮಿಗಳಿಂದ ಕಾಡು ನಾಶವಾದುದು ಹೇಗೆ ?
ಮಾರ್ಷ್ನ ಚಹಾ ತೋಟದ ಯಶಸ್ಸಿನಿಂದಾಗಿ ಸ್ವಾತಂತ್ರೋತ್ತರದಲ್ಲಿ ಭಾರತದ ಅಗ್ರಗಣ್ಯ ಕೈಗಾರಿಕೋದ್ಯಮಿಗಳನ್ನು ಕೈಬೀಸಿ ಕರೆಯಿತು . ಗಗನ ಚುಂಬಿ ಮರಗಳು ನೆಲಕ್ಕೆ ಉರುಳಿದವು , ದಿಮ್ಮಿ ಕೊಳ್ಳಲು ಕಂಟ್ರಾಕ್ಟರುಗಳು ಬಂದರು . ಫಲವತ್ತಾದ ಭೂಮಿಯಲ್ಲಿ ರಸ್ತೆ ನಿರ್ಮಾಣವಾಯಿತು . ಹೊಗೆಯುಗುಳುವ , ಗಡಗಡ ಸದ್ದು ಮಾಡುವ ಲಾರಿ , ಟ್ರ್ಯಾಕ್ಟರ್ಗಳು ಬರತೊಡಗಿದವು . ಅರಣ್ಯದ ಮೇಲಿನ ಅತ್ಯಾಚಾರಕ್ಕೆ ಸರ್ಕಾರ ಉತ್ತೇಜನ ನೀಡಿತು , ಉದ್ಯಮಿಗಳಿಗೆ ಅನುಕೂಲವಾಗುವಂತೆ ವರ್ತಿಸಿದ ಕಾರಣದಿಂದಾಗಿ ನಿಭಿಡ ಅರಣ್ಯಗಳು ಚಹಾ ತೋಟಗಳಾಗಿ ಮಾರ್ಪಟಾದವು .
4 ) ಬ್ರಿಟಿಷರು ಬರುವ ಮೊದಲು ವಾಲ್ರೈ ಹೇಗಿತ್ತು ?
ಬ್ರಿಟಿಷರು ಬರುವ ಮೊದಲು ವಾಲ್ಪರೆ ದಟ್ಟ ಅರಣ್ಯ ಪ್ರದೇಶವಾಗಿತ್ತು . ಗಗನ ಚುಂಬಿ ಮರಗಳ ಮೇಲ್ಬಾವಣಿಯನ್ನು ಛೇದಿಸಿ ಭೂಸ್ವರ್ಶ ಮಾಡಲು ಸೂರ್ಯನ ಕಿರಣಗಳು ಸೆಣೆಸುತ್ತಿದ್ದ ದಟ್ಟವಾದ ಕಾಡುಗಳು ಇದಾಗಿದ್ದವು . “ ಕಗ್ಗತ್ತಲಖಂಡ ಆಫ್ರಿಕಾವನ್ನು ನೆನಪಿಸುವಂತಿತ್ತು . ಶೋಲಾ ಕಾಡುಗಳು ಪರ್ವತ ಶ್ರೇಣಿಗಳ ನಡುವೆ ಅಕ್ಷಾಂಶ – ರೇಖಾಂಶ ಬರೆದಂತೆ ಹರಿವ ಹಳ್ಳ – ಕೊಳ್ಳಗಳು ಅಲ್ಲಲ್ಲಿ ಕಂಡು ಬರುತ್ತಿದ್ದವು .
III . ಐದಾರು ವಾಕ್ಯಗಳಲ್ಲಿ ಉತ್ತರಿಸಿ : ( ನಾಲ್ಲು ಅಂಕದ ಪ್ರಶ್ನೆಗಳು )
1 ) ಅಭಿವೃದ್ಧಿ ತರುವ ಪ್ರಾಕೃತಿಕ ನಾಶದ ಸ್ವರೂಪವನ್ನು ಪಠ್ಯದ ಹಿನ್ನಲೆಯಲ್ಲಿ ಚರ್ಚಿಸಿ .
ಅಭಿವೃದ್ಧಿ ತರುವ ಪ್ರಾಕೃತಿಕ ನಾಶದ ಸ್ವರೂಪಕ್ಕೆ ವಾಲ್ಪರೈ ಸಾಕ್ಷಿಯಾಗಿದೆ , ಹಣದ ಬೆನ್ನು ಹತ್ತಿರುವ ಮಾನವ ಪ್ರಕೃತಿಯನ್ನು ನಾಶಗೈಯುತ್ತಾ ಅಟ್ಟಹಾಸ ಮೆರೆಯುತ್ತಿದ್ದಾನೆ . ಅರಣ್ಯ ಲೂಟಿ , ಪ್ರಾಣಿ ಸಂಕುಲಗಳ ಬೇಟೆ , ಇವೆಲ್ಲವೂ ಪ್ರಕೃತಿ ಮತ್ತು ಜೀವಜಾಲಕ್ಕೆ ವಿನಾಶವನ್ನು ತಂದಿದೆ . ಅರಣ್ಯನಾಶದಿಂದ ಪ್ರಾಣಿಸಂಕುಲ ನಾಶವಾಗಿದೆ . ಹವಾಮಾನ ವೈಪರಿತ್ಯ , ಬರಗಾಲ , ಜಲಮೂಲಗಳ ನಾಶ ಇದರಿಂದ ನಾನಾ ಕಾಯಿಲೆಗಳ ತವರಾಗಿ ಮಾನವ ಹಾಗೂ ಪ್ರಾಣಿ ಸಂಕುಲಗಳ ಬದುಕು ದುರ್ಬರವಾಗುತ್ತಿದೆ . ಇದಕ್ಕೆ ಉದಾಹರಣೆ ಎಂದರೆ ಸಿಂಹ ಬಾಲದ ಕೋತಿಗಳು ಹಾಗೂ ಹಾಡುಹಕ್ಕಿಗಳಾದ ವಿಷಲಿಂಗ್ ಕ್ಲಪ್ಗಳು ರುದ್ರ ರಮಣೀಯವಾದ ಗತಲಖಂಡ ಆಫ್ರಿಕಾವನ್ನು ನೆನಪಿಸುವ ಕಾಡು ಇಂದು ಬಯಲು ಪ್ರದೇಶಗಳಾಗಿ ಹಾ ತೋಟಗಳಾಗಿ ಮಾರ್ಪಟ್ಟಿವೆ .
2 ) ಅಂತಾರಾಷ್ಟ್ರೀಯ ವಿದ್ಯಾಮಾನಗಳಿಂದಾಗಿ ವಾಲ್ಪರೈಗೆ ಒದಗಿದ ಸಮಸ್ಯೆಗಳೇನು
ವಾಣಿಜ್ಯ ವ್ಯವಹಾರದ ದೃಷ್ಟಿಯಿಂದ ಶ್ರೀಮಂತ ಪ್ರದೇಶವೆಂದು ಗುರುತಿಸಿಕೊಂಡಿದ ವಾಲ್ಪರೆ ಈಗ ತತ್ತರಿಸುತ್ತಿದೆ . ಏಕೆಂದರೆ ಅಂತಾರಾಷ್ಟ್ರೀಯ ವಿದ್ಯಮಾನಗಳು ವಾಲ್ಪರೈನ ಆರ್ಥಿಕ ಸ್ಥಿತಿಗತಿಗೆ ಕುತ್ತು ತಂದಿವೆ , ವಿಶ್ವ ಮಾರುಕಟ್ಟೆಯಲ್ಲಿ ಚಹಾ ಬೇಡಿಕೆ ಕುಸಿದಿದೆ . ರಫ್ತು ಇಳಿಮುಖಗೊಂಡು ಚಹಾ ತೋಟಗಳು ನಷ್ಟವನ್ನು ಅನುಭವಿಸುತ್ತಿವೆ . ಬದುಕುಳಿಯಲು ತೋಟದ ಮಾಲೀಕರು ಉತ್ಪಾದನಾ ಮ ಕಡಿತಗೊಳಿಸುವ ಅನಿವಾರ್ಯತೆಯಲ್ಲಿದ್ದಾರೆ , ಜನರು ನಿರ್ವಹಿಸುತ್ತಿದ್ದ ಕೆಲಸಗಳನ್ನು ಯಾಂತ್ರೀಕರಣ ಮಾಡಲು ಮುಂದಾಗಿದ್ದಾರೆ . ಕಂಗಾಲಾದ ಕಾರ್ಮಿಕರು ಕಂಡು ಬಾವುಟ ಹಿಡಿದು ಹೋರಾಟಕ್ಕೆ ಸಜ್ಜಾಗಿದ್ದಾರೆ . ಸರ್ಕಾರಕ್ಕೆ ಮನವಿ ಸಲ್ಲಿಸಿದರು ಬದುಕು ಹಸನುಗೊಳ್ಳುವ ಯಾವ ಭರವಸೆಯೂ ಕಾಣುತ್ತಿಲ್ಲ .
3 ) ವಾಲ್ಪರೈಗೆ ಬಂದ ಮಾರ್ಷ್ ಅಲ್ಲಿ ಹೇಗೆ ನೆಲೆಯೂರಿದ ? ವಿವರಿಸಿ .
ವಾಲ್ಪರೈಗೆ ಬಂದ ಮಾರ್ಷ್ ಪೂಣಚ್ಚಿ ಎಂಬ ಆದಿವಾಸಿಯ ನೆರವಿನಿಂದ ಇಡೀ ಅರಣ್ಯವನ್ನೆಲ್ಲ ಅನ್ವೇಷಿಸಿದ . ಪ್ರಕೃತಿಯನ್ನು ಆಸ್ವಾದಿಸುತ್ತಾ ತಾನೂ ಇಲ್ಲಿಯೇ ನೆಲಸಬೇಕೆಂದು ತೀರ್ಮಾನಿಸಿದ ಪೂಣಚ್ಚಿಯ ಸಹಕಾರದಿಂದ ಸ್ಥಳೀಯರ ವಿಶ್ವಾಸ ಸಂಪಾದಿಸಿ ಇಡೀ ಪ್ರದೇಶದ ನಕ್ಷೆ ತಯಾರಿಸಿ ಜೊತೆಗೆ ಭಾರತಕ್ಕೆ ಆಗಷ್ಟೆ ಪ್ರವೇಶಿಸಿದ್ದ ಚಹಾಗಿಡಗಳನ್ನು ತಂದು ನೆಟ್ಟನು , ಮಾರ್ಷ್ ನಿಧಾನವಾಗಿ ಕಾಡು ಕಡಿಯುತ್ತಾ ಚಹಾಗಿಡಗಳನ್ನು ಪುಳಕಿಸುತ್ತ ತೋಟವನ್ನು ವಿಸ್ತರಿಸುತ್ತಾ ಆನಂದಿಸುತ್ತಿದ್ದ .
4 ) ಸಿಂಹಬಾಲದ ಕೋತಿಗಳು ಮತ್ತು ಹಾಡು ಹಕ್ಕಿಗಳಿಗಾದ ಅನಾನುಕೂಲಗಳಾವುವು ? ವಿವರಿಸಿ.
ಪ್ರಾಣಿ ಸಂಕುಲದ ಅಪರೂಪದ ಜೀವಿಗಳೆನಿಸಿದ್ದ ಸಿಂಹಬಾಲದ ಕೋತಿಗಳು ಮರದ ಮೇಲೆ ವಾಸ ಮಾಡುತ್ತಾ ಸ್ವಚ್ಚಂದವಾಗಿದ್ದವು . ಮರಗಳು ಧರೆಗುರಿಳಿದ ಮೇಲೆ ಇವುಗಳ ವಾಸಕ್ಕೆ ಮಾತ್ರವಲ್ಲ , ಆಹಾರಕ್ಕೂ ತೊಂದರೆಯಾಯಿತು . ಮರದಿಂದ ಮರಕ್ಕೆ ಹಾರಲು ಈಗ ಸಾಧ್ಯವಾಗುತ್ತಿರಲಿಲ್ಲ . ಮರದಿಂದ ಇಳಿದು ಡಾಂಬರ್ ರ ಎಷ್ಟೋ ದಾಟಿ ಮತ್ತೊಂದು ಮರ ಹತ್ತಬೇಕಾಗುತ್ತಿತ್ತು . ವಾಹನಗಳ ಸಂಚಾರದಿಂದಾಗಿ ಕೋತಿಗಳು ಅಂಗವಿಕಲವಾದವುಗಳಾಗಿ ಕೆಂಪು ಪಟ್ಟಿಗೆ ಸೇರಿದ್ದು , ಈಗ ಆಹಾರಕ್ಕೆ ತೊಂದರೆಯಾಗಿ ಊರಿನ ಕಸದ ತೊಟ್ಟಿಗಳಲ್ಲಿ ಆಹಾರ ಹುಡುಕಿಕೊಂಡು ಬದುಕುತ್ತಿವೆ . ಇನ್ನು ಹಾಡುವ ಹಕ್ಕಿಗಳಾದ ವಿಷಲಿಂಗ್ಡ್ರಷ್ಗಳ ಬದುಕು ಕೂಡ ಇದೇ ರೀತಿಯಾಗಿದೆ . ಹಸಿರುಬೆಟ್ಟಗುಡ್ಡಗಳ ಝರಿಗಳ ಸ್ವಲ್ಪ ತಿಳಿ ನೀರಿನಲ್ಲಿ ವಾಸಿಸುತ್ತಿದ್ದ ಇವು ಇಂದು ಕೊಳಚೆ ಚರಂಡಿಗಳಲ್ಲಿ ಹಾಡುತ್ತ ಬದುಕು ಸಾಗಿಸುತ್ತವೆ .
IV. ಸಂದರ್ಭ ಸೂಚಿಸಿ , ಸ್ವಾರಸ್ಯವನ್ನು ವಿವರಿಸಿ :
1 ) “ ಅದು ಅವರು ಆವರೆಗೂ ನೋಡಿರದ ಪ್ರಾಣಿ .”
ಶ್ರೀಯುತ ಕೃಪಾಕರ ಸೇನಾನಿ ಅವರು ಬರೆದಿರುವ ‘ ಜೀವಜಾಲ ‘ ಕೃತಿ ಯಿಂದಾಯ್ದ ‘ ವಾಲ್ಪರೆ : ಅಭಿವೃದ್ಧಿ ತಂದ ದುರಂತ ‘ ಎಂಬ ಲೇಖನದಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ . ವಾಲ್ಪರೈನ ಕಗ್ಗತ್ತಲ ಅರಣ್ಯ ಪ್ರದೇಶಕ್ಕೆ ಮೊತ್ತಮೊದಲ ಬಾರಿಗೆ ಸಾಹಸಿ ಬ್ರಿಟಿಷ್ ಪ್ರಜೆಯಾದ ಕಾರ್ವೆಲ್ ಮಾರ್ಷ್ ಕುದುರೆಯ ಮೇಲೆ ಕುಳಿತು ಬಂದಾಗ ಅವನಿಗೆ ನಾಲ್ಕಾರು ಪುಟ್ಟ ಗುಡಿಸಲುಗಳಿದ್ದ ಹಾಡಿ ಕಾಣಿಸಿತು . ಅಲ್ಲಿದ್ದ ಹತ್ತಾರು ಆದಿವಾಸಿಗಳು ಮಾರ್ಷ್ನ ಕುದುರೆಯ ಖುರಪುಟದ ಸದ್ದಿಗೆ ದಿಗಿಲುಗೊಳ್ಳುತ್ತಾರೆ . ಏಕೆಂದರೆ ಅವರೆಂದು ಕುದುರೆಯನ್ನು ಕಂಡಿರಲಿಲ್ಲ . ಕಾಡಿನ ಪ್ರಾಣಿಗಳನ್ನು ಮಾತ್ರ ಕಂಡಿದ್ದ ಅವರಿಗೆ ಕುದುರೆ ಮತ್ತು ವಿಚಿತ್ರ ಪೋಷಾಕಿನ ಮಾರ್ಷ್ನನ್ನು ನೋಡಿ ಭಯವುಂಟಾಗಿ ಮಿಂಚಿನಂತೆ ಅಲ್ಲಿಂದ ಮಾಯವಾದರೆಂಬುದನ್ನು ವಿವರಿಸುವ ಸಂದರ್ಭದಲ್ಲಿ ಲೇಖಕರು ಈ ಮೇಲಿನ ವಾಕ್ಯವನ್ನು ರಚಿಸಿದ್ದಾರೆ .
2 ) “ ದುರಂತದ ಮೂಲ ಬೀಜಗಳು ಚಹಾ ಗಿಡದ ರೂಪದಲ್ಲಿ ಬಂದವು .”
ಶ್ರೀಯುತ ಕೃಪಾಕರ ಸೇನಾನಿ ಅವರು ಬರೆದಿರುವ ‘ ಜೀವಜಾಲ ‘ ಎಂಬ ಕೃತಿ “ ಯಿಂದಾಯ್ದ ‘ ವಾಲ್ಪರೆ : ಅಭಿವೃದ್ಧಿ ತಂದ ದುರಂತ ‘ ಎಂಬ ಲೇಖನದಲ್ಲಿ ಈ ಮೇಲಿನ ವಾಕ್ಯವಿದೆ . ಪೂಣಚ್ಚಿ ಎಂಬ ಆದಿವಾಸಿ ಒಡನಾಡಿಯ ಸಹಾಯದಿಂದ ಕಾಡನ್ನು ಸುತ್ತಿ ಬಂದ ಮಾರ್ಷ್ ಅಲ್ಲಿನ ಪ್ರಕೃತಿಯನ್ನು ಆಸ್ವಾದಿಸಿ ತಾನು ಅಲ್ಲಿಯೇ ನೆಲೆಸಬೇಕೆಂದು ತೀರ್ಮಾನಿಸಿದ . ಸ್ಥಳೀಯರ ವಿಶ್ವಾಸ ಸಂಪಾದಿಸಿ ಇಡೀ ಪ್ರದೇಶದ ನಕ್ಷೆ ತಯಾರಿಸಿದ . ಇದರ ಜೊತೆಗೆ ಆಗಷ್ಟೆ ಭಾರತ ಪ್ರವೇಶ ಮಾಡಿದ್ದ ಚಹಾ ಗಿಡಗಳನ್ನು ತಂದು ಆ ಪ್ರದೇಶದಲ್ಲಿ ನೆಟ್ಟು ಬೆಳೆಸಿದ . ಈ ಸಂದರ್ಭವನ್ನು ವಿವರಿಸುತ್ತಾ ಲೇಖಕರು “ ವಾಲ್ಪರ ಕಾಡಿನ ಮುಂದಿನ ದಿನಗಳ ದುರಂತದ ಮೂಲ ಬೀಜಗಳು ಚಹಾ ಗಿಡದ ರೂಪದಲ್ಲಿ ಬಂದಿದ್ದವು ” ಎಂದು ಹೇಳಿದ್ದಾರೆ .
3 ) “ ಈ ಪ್ರದೇಶಕ್ಕೆ ಆಗ ಹೆಸರೇ ಇರಲಿಲ್ಲ . ”
ಶ್ರೀಯುತ ಕೃಪಾಕರ ಸೇನಾನಿ ಅವರು ಬರೆದಿರುವ ‘ ವಾಲ್ಪರೆ : ಅಭಿವೃದ್ಧಿ ತಂದ ದುರಂತ ‘ ಎಂಬ ಲೇಖನದ ಆರಂಭದಲ್ಲಿ ಈ ಮೇಲಿನ ವಾಕ್ಯವನ್ನು ಗಮನಿಸ ಬಹುದು . ‘ ವಾಲ್ಪರೆ ‘ ಎಂದು ಹೆಸರಾಗುವ ಮೊದಲು ಅನನ್ಯ ಜೀವ ಸಂಕುಲಗಳಿಂದ ಸಮೃದ್ಧವಾಗಿದ್ದ ಪಶ್ಚಿಮಘಟ್ಟ ಶ್ರೇಣಿಯ ಈ ದಟ್ಟ ಅರಣ್ಯ ಪ್ರವೇಶಕ್ಕೆ ಆಗ ಯಾವ ಹೆಸರೂ ಇಲ್ಲದಿದ್ದರೂ ಗಗನಚುಂಬಿ ಮರಗಳ ಮೇಲ್ಮಾವಣಿಯನ್ನು ಭೇದಿಸಿ ಭೂಸ್ಪರ್ಶ ಮಾಡಲು ಸೂರ್ಯ ಕಿರಣಗಳು ಸೆಣಸುತ್ತಿದ್ದ ದಟ್ಟವಾದ ಕಾಡಿದ್ದ ಪ್ರದೇಶವಿದಾಗಿತ್ತೆಂದು ಲೇಖಕರು ವಾಲ್ಪರೆ ಭೂಪ್ರದೇಶವನ್ನು ವರ್ಣಿಸಿದ್ದಾರೆ . ಅವರು ನೀಡಿದ ಚಿತ್ರ ಹದಿನೆಂಟನೇ ಶತಮಾನದ ಅಂತ್ಯಭಾಗದ್ದಾಗಿದ್ದು ನಿಧಾನವಾಗಿ ಅಲ್ಲಿನ ಕಾಡು ಕಣ್ಮರೆಯಾದ ಬಗೆಗೆ ಲೇಖಕರು ಗಮನ ಸೆಳೆದಿರುವರು . ಆ ಪ್ರದೇಶಕ್ಕೆ ಹೆಸರಿಲ್ಲದಿರುವುದು ಅಲ್ಲಿ ಜನ ಪ್ರವೇಶಿಸಿರಲಿಲ್ಲವೆಂಬುದಕ್ಕೆ ಸಾಕ್ಷಿಯನ್ನೂ , ಹೆಸರು ಬಂದ ನಂತರ ಆ ಪ್ರದೇಶ ಹೊಂದಿದ ಅವನತಿಯನ್ನೂ ಈ ಮೇಲಿನ ವಾಕ್ಯವು ಧ್ವನಿಸಿದೆ .
4 ) “ ಹಾಡುವುದು ಅವುಗಳಿಗೆ ಅನಿವಾರ್ಯ ; ಅವುಗಳ ಕರ್ಮ ! ”
ಕೃಪಾಕರ ಸೇನಾನಿ ಅವರು ರಚಿಸಿರುವ ‘ ವಾಲ್ಪರೆ : ಅಭಿವೃದ್ಧಿ ತಂದ ದುರಂತ ‘ ಎಂಬ ಲೇಖನದಲ್ಲಿ ಈ ಮೇಲಿನ ವಾಕ್ಯವನ್ನು ಗಮನಿಸಬಹುದು .ಅಭಿವೃದ್ಧಿ ತಂದ ದುರಂತದ ಫಲವಾಗಿ ವಾಲ್ಪರೈನ ಎಷ್ಟೋ ಜೀವವೈವಿಧ್ಯಗಳು ನೆಲೆ ಕಳೆದುಕೊಳ್ಳುವಂತಾಯಿತು . ಅವುಗಳಲ್ಲಿ ವಿಷಲಿಂಗ್ ಭ್ರಷ್ಗಳೆಂಬ ಹಾಡುಹಕ್ಕಿಗಳೂ ಸೇರಿವೆ . ಕಾಡು ಕಣ್ಮರೆಯಾದ ಕಾರಣ ಅವೀಗ ಬದುಕುಳಿಯಲು ಕೊಳಚೆ ನೀರಿನ ಚರಂಡಿಗಳಲ್ಲಿ ವಾಸಿಸಬೇಕಾದ ಪರಿಸ್ಥಿತಿಯನ್ನು ವಿವರಿಸುತ್ತಾ ಲೇಖಕರು ನೆಲೆ ಕಳೆದು ಕೊಂಡ ನೋವಿನಲ್ಲೂ ಮುಂಜಾನೆ ಬೇಗನೆ ಎದ್ದು ರಾಗವಾಗಿ ಹಾಡುವುದನ್ನು ಬಿಡದ ಹಾಡುಹಕ್ಕಿಗಳ ಬಗ್ಗೆ ವಿವರಿಸುತ್ತಾ “ ಹಾಡುವುದು ಅವುಗಳಿಗೆ ಅನಿವಾರ್ಯ ; ಅವುಗಳ ಕರ್ಮ ” ಎಂದಿದ್ದಾರೆ .
5 ) “ ಕಾರ್ಮಿಕರು ಕೆಂಪು ಬಾವುಟ ಹಿಡಿದು ಹೋರಾಟಕ್ಕೆ ಸಜ್ಜಾಗಿದ್ದಾರೆ . ”
ಶ್ರೀಯುತ ಕೃಪಾಕರ ಸೇನಾನಿ ಅವರು ಬರೆದಿರುವ ‘ ವಾಲ್ರೈ : ಅಭಿವೃದ್ಧಿ ತಂದ ದುರಂತ ‘ ಎಂಬ ಲೇಖನದಿಂದ ಆಯ್ದುಕೊಳ್ಳಲಾಗಿರುವ ವಾಕ್ಯವಿದು . ವಾಣಿಜ್ಯ ವ್ಯವಹಾರದ ದೃಷ್ಟಿಯಿಂದ ಶ್ರೀಮಂತ ಪ್ರದೇಶವಾಗಿದ್ದ ವಾಲ್ರೈ ಅಂತಾರಾಷ್ಟ್ರೀಯ ವಿದ್ಯಮಾನಗಳ ಕಾರಣದಿಂದ ಆರ್ಥಿಕವಾಗಿ ಕುಸಿಯಿತು . ಇದಕ್ಕೆ ಮುಖ್ಯ ಕಾರಣ ವಿಶ್ವ ಮಾರುಕಟ್ಟೆಯಲ್ಲಿ ಚಹಾದ ಬೇಡಿಕೆ ಇಳಿಮುಖವಾಗಿದ್ದು , ಈ ಸಂದರ್ಭದಲ್ಲಿ ತೋಟದ ಮಾಲೀಕರು ಬದುಕುಳಿಯಲು ಉತ್ಪಾದನಾ ವೆಚ್ಚ ಕಡಿಮೆ ಮಾಡಲು ಜನರ ಬದಲಿಗೆ ಯಂತ್ರಗಳನ್ನು ಬಳಸಲಾರಂಭಿಸಿದರು . ನಿರುದ್ಯೋಗಿಗಳಾದ ಕಾರ್ಮಿಕರು ಪ್ರತಿಭಟನೆಗೆ ತೊಡಗಿ , ಕೆಂಪು ಬಾವುಟಗಳನ್ನು ಹಿಡಿದುಕೊಂಡು ಹೋರಾಟದಲ್ಲಿ ತೊಡಗಿದ್ದರು . ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಅವರ ಬದುಕು ಹಸನಾಗುವ ಭರವಸೆಗಳಿಲ್ಲ ಎಂಬುದನ್ನು ವಿವರಿಸುವ ಸಂದರ್ಭದಲ್ಲಿ ಲೇಖಕರು ಈ ಮೇಲಿನಂತೆ ಹೇಳಿರುವರು .
2nd Puc Kannada 2nd Lesson Notes Question Answer Valparai Abhivrudhi Tanda Durantha Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿ ಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.
ಇತರ ವಿಷಯಗಳು:
1 PUC Notes ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Kannada Deevige App ಹಿಂದಕ್ಕೆ
ಕನ್ನಡ ದೀವಿಗೆ.in ಜಾಲತಾಣದಲ್ಲಿ 2PUC ಪಠ್ಯಪುಸ್ತಕಗಳು ನೋಟ್ಸ್ , ಪ್ರೆಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.
Superhit Kannada notes is 2nd PUC in notes full LP thank you