10th Kannada Medium Bhagat Singh Notes | 10ನೇ ತರಗತಿ ಭಗತ್‌ಸಿಂಗ್ ಕನ್ನಡ ನೋಟ್ಸ್ 

10ನೇ ತರಗತಿ ಕನ್ನಡ ಭಗತ್‌ಸಿಂಗ್ ಪೂರಕ ಪಾಠದ ನೋಟ್ಸ್ ಪ್ರಶ್ನೋತ್ತರಗಳು, 10th Standard Kannada Bhagat Singh Question Answer Mcq Pdf Download in Kannada Medium Karnataka State Syllabus 2023, Kseeb Solutions For Class 10 Kannada Puraka Pata Chapter 3 Bhagat Singh Notes Bhagat Singh Notes in Kannada Pdf

 

Bhagat Singh Kannada Lesson Notes Pdf

ಪಠ್ಯಪೂರಕ ಅಧ್ಯಯನ -3

ಭಗತ್‌ಸಿಂಗ್

10th Kannada Medium Bhagat Singh Question Answer

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ

1. ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಎಂದು ನಡೆಯಿತು ? 

ಉತ್ತರ : ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಏಪ್ರಿಲ್ ೧೩ , ೧೯೧೯ ರಂದು ನಡೆಯಿತು . 

2. ಭಗತ್ ಸಿಂಗ್ ತನ್ನ ಸಹೋದರಿಗೆ ಮಣ್ಣು ಯಾವುದರ ಪ್ರತೀಕ ಎಂದು ತೋರಿಸುತ್ತಾನೆ ? 

ಉತ್ತರ : ಭಗತ್‌ಸಿಂಗ್ ತನ್ನ ಸಹೋದರಿಗೆ ಮಣ್ಣು ‘ ತ್ಯಾಗದ ಪ್ರತೀಕ ‘ ಎಂದು ತೋರಿಸುತ್ತಾನೆ .

3. ಜಲಿಯನ್ ವಾಲಾಬಾಗ್ ನಲ್ಲಿರುವ ಒಕ್ಕಣೆ ಏನು ? 

ಉತ್ತರ : ಜಲಿಯನ್ ವಾಲಾಬಾಗ್‌ನಲ್ಲಿರುವ ಒಕ್ಕಣೆ ಹೀಗಿದೆ : “ ಏಪ್ರಿಲ್- ೧೩- ೧೯೧೯ ರಂದು ಬ್ರಿಟೀಷರ
ಗುಂಡುಗಳಿಗೆ ಆಹುತಿಯಾದ ಸುಮಾರು ೨೦೦೦ ಮುಗ್ಧ ಹಿಂದೂ , ಸಿಖ್ ಮತ್ತು ಮುಸಲ್ಮಾನರ ಸಮ್ಮಿಳಿತ
ರಕ್ತದಿಂದ ಈ ಪ್ರದೇಶ ಪಾವನವಾಗಿದೆ . ” 

4. ಭಗತ್‌ಸಿಂಗ್‌ನ ಸಹಚರರು ಯಾರು ? 

ಉತ್ತರ : ಭಗತ್‌ಸಿಂಗ್‌ನ ಸಹಚರರು ಸುಖ್‌ದೇವ್ , ರಾಜ್‌ಗುರು ಹಾಗು ಭಟುಕೇಶ್ವರ ದತ್ತ 

5. ಭಗತ್‌ಸಿಂಗ್ ಹುತಾತ್ಮನಾದದ್ದು ಯಾವಾಗ ? 

ಉತ್ತರ : ಭಗತ್‌ಸಿಂಗ್‌ ೨೩ ಮಾರ್ಚ್ ೧೯೩೧ ರಂದು ೨೩ ನೆಯ ವಯಸ್ಸಿನಲ್ಲಿ ಹುತಾತ್ಮನಾದನು . 

ಹೆಚ್ಚುವರಿ ಪ್ರಶ್ನೆಗಳು

10th Class Kannada Bhagat Singh Question and Answer

6. ಬಾಲಕ ಭಗತ್‌ ಸಿಂಗ್‌ ಮನಸ್ಸಿನಲ್ಲಿ ಸ್ವಾತಂತ್ರ ಹೋರಾಟದ ಕಿಚ್ಚನ್ನು ಹಚ್ಚಿದ ಘಟನೆ ಯಾವುದು ? 

ಉತ್ತರ : ಬಾಲಕ ಭಗತ್‌ಸಿಂಗ್ ಮನಸ್ಸಿನಲ್ಲಿ ಜಲಿಯನ್ ವಾಲಾಬಾಗ್ ಘಟನೆ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹಚ್ಚಿತು .

 7. ಜಲಿಯನ್ ವಾಲಾಬಾಗ್‌ನಲ್ಲಿ ಸಾವಿರಾರು ಜನರ ಪ್ರಾಣ ಹಾನಿಗೆ ಕಾರಣನಾದ ಬ್ರಿಟಿಷ್ ಅಧಿಕಾರಿ ಯಾರು ? 

ಉತ್ತರ : ಜಲಿಯನ್ ವಾಲಾಬಾಗ್‌ನಲ್ಲಿ ಸಾವಿರಾರು ಜನರ ಪ್ರಾಣಹಾನಿಗೆ ಕಾರಣನಾದ ಬ್ರಿಟಿಷ್ ಅಧಿಕಾರಿ ಜನರಲ್ ಡಯರ್ 

8. ಗುಂಡಿನ ಮಳೆಗರೆದು ಸಾವಿರಾರು ಜನರ ಪ್ರಾಣ ತೆಗೆದ ನಂತರ ಜನರಲ್ ಡಯರ್ ಏನೆಂದು ಹೇಳಿಕೊಂಡನು ? ಎಂದು ಹೇಳಿಕೊಂಡನು . 

ಉತ್ತರ : ಸಾವಿರಾರು ಜನರ ಪ್ರಾಣ ತೆಗೆದ ನಂತರ ಜನರಲ್ ಡಯರ್ ” ಒಂದೇ ಒಂದು ಗುಂಡು ಸಹ ದಂಡವಾಗಲಿಲ್ಲ ” . 

9. ಬಾಲಕ ಭಗತ್‌ಸಿಂಗ್‌ ಊಟಮಾಡದೆ ಉಪವಾಸವಿದ್ದುದಕ್ಕೆ ಕಾರಣವೇನು ? 

ಉತ್ತರ : ಏಪ್ರಿಲ್ ೧೩ , ೧೯೧೯ ರಂದು ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ಪ್ರಾಣ ಕಳೆದುಕೊಂಡಿದ್ದವರಿಗೆ
ನಮನ ಸಲ್ಲಿಸಲು ಬಾಲಕ ಭಗತ್‌ಸಿಂಗ್ ಹೋಗಿದ್ದನು . ಆಗ ಅಲ್ಲಿದ್ದ ಸ್ವಲ್ಪ ಮಣ್ಣನ್ನು ತೆಗೆದುಕೊಂಡು ಹಣೆಗಿಟ್ಟುಕೊಂಡ .
ಇನ್ನಷ್ಟನ್ನು ತನ್ನಲ್ಲಿದ್ದ ಡಬ್ಬಿಯಲ್ಲಿ ಶೇಖರಿಸಿಕೊಂಡು ಹಿಂತಿರುಗಿದ . ಜಲಿಯನ್ ವಾಲಾಬಾಗ್ ಘಟನೆ ಆತನ ಮನಸ್ಸಿನ ಮೇಲೆ
ತೀವ್ರವಾದ ಪರಿಣಾಮ ಬೀರಿತ್ತು . ಆದ್ದರಿಂದ ಅವನ ಸಹೋದರಿ ರಾತ್ರಿ ಎಂದಿನಂತೆ ಊಟಕ್ಕೆಬ್ಬಿಸಿದಾಗ ಅವನು ಒಲ್ಲೆನೆಂದು ಮುಖ ತಿರುಗಿಸಿದ .

 10. ಭಗತ್ ಸಿಂಗ್ ಮತ್ತು ಆತನ ಸಹಚರರಿಗೆ ಗಲ್ಲುಶಿಕ್ಷೆಯಾಗಲು ಕಾರಣವೇನು ? 

ಉತ್ತರ : ಜಲಿಯನ್ ವಾಲಾಬಾಗಿನ ರಕ್ತಸಿಕ್ತವಾಗಿದ್ದ ಮಣ್ಣನ್ನು ನಿಧಿಯಂತೆ ಕಾಪಾಡಿಕೊಂಡು ಬಂದಿದ್ದ
ಬಾಲಕ ಭಗತ್‌ಸಿಂಗ್ ಮುಂದೆ ತನ್ನ ಕ್ರಾಂತಿಕಾರಿ ಗುಂಪಿನ ಸಹಾಯದಿಂದ ಬ್ರಿಟಿಷ್ ಸರ್ಕಾರದ ವಿರುದ್ಧ ತನ್ನ
ಸೇಡನ್ನು ತೀರಿಸಿಕೊಳ್ಳುತ್ತಾನೆ . ಇದರ ಫಲವಾಗಿ ಮರಣ ದಂಡನೆಗೆ ಈಡಾದನು . 

FAQ :

1. ಜಲಿಯನ್ ವಾಲಾಬಾಗ್ ನಲ್ಲಿರುವ ಒಕ್ಕಣೆ ಏನು ? 

ಉತ್ತರ : ಜಲಿಯನ್ ವಾಲಾಬಾಗ್‌ನಲ್ಲಿರುವ ಒಕ್ಕಣೆ ಹೀಗಿದೆ : “ ಏಪ್ರಿಲ್- ೧೩- ೧೯೧೯ ರಂದು ಬ್ರಿಟೀಷರ
ಗುಂಡುಗಳಿಗೆ ಆಹುತಿಯಾದ ಸುಮಾರು ೨೦೦೦ ಮುಗ್ಧ ಹಿಂದೂ , ಸಿಖ್ ಮತ್ತು ಮುಸಲ್ಮಾನರ ಸಮ್ಮಿಳಿತ
ರಕ್ತದಿಂದ ಈ ಪ್ರದೇಶ ಪಾವನವಾಗಿದೆ . ” 

2. ಭಗತ್‌ಸಿಂಗ್‌ನ ಸಹಚರರು ಯಾರು ? 

ಉತ್ತರ : ಭಗತ್‌ಸಿಂಗ್‌ನ ಸಹಚರರು ಸುಖ್‌ದೇವ್ , ರಾಜ್‌ಗುರು ಹಾಗು ಭಟುಕೇಶ್ವರ ದತ್ತ 

3. ಜಲಿಯನ್ ವಾಲಾಬಾಗ್‌ನಲ್ಲಿ ಸಾವಿರಾರು ಜನರ ಪ್ರಾಣ ಹಾನಿಗೆ ಕಾರಣನಾದ ಬ್ರಿಟಿಷ್ ಅಧಿಕಾರಿ ಯಾರು ? 

ಉತ್ತರ : ಜಲಿಯನ್ ವಾಲಾಬಾಗ್‌ನಲ್ಲಿ ಸಾವಿರಾರು ಜನರ ಪ್ರಾಣಹಾನಿಗೆ ಕಾರಣನಾದ ಬ್ರಿಟಿಷ್ ಅಧಿಕಾರಿ ಜನರಲ್ ಡಯರ್ 

ಇತರೆ ವಿಷಯಗಳು :

10th Standard All Subject Notes

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Class Subjects Notes

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ 10ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *