rtgh

1st Puc Political Science Chapter 2 Notes | ಪ್ರಥಮ ಪಿ.ಯು.ಸಿ ರಾಜ್ಯಶಾಸ್ತ್ರ ರಾಜ್ಯ ಪಾಠ ನೋಟ್ಸ್‌ ಪ್ರಶ್ನೋತ್ತರಗಳು

ಪ್ರಥಮ ಪಿ.ಯು.ಸಿ ರಾಜ್ಯಶಾಸ್ತ್ರ ರಾಜ್ಯ ನೋಟ್ಸ್‌ ಪ್ರಶ್ನೋತ್ತರಗಳು, 1st Puc Political Science Chapter 2 Notes Question answer in Kannada Medium 2023 1st Puc Rajya Notes in Kannada Kseeb Solution For Class 11 Political Science Chapter 2 Notes Pdf download

 
1st Puc Political Science Chapter 2 Notes

I. ಒಂದು ಅಂಕದ ಪ್ರಶ್ನೆಗಳು :

1 ) ರಾಜ್ಯ ಎಂದರೇನು ?

ಒಂದು ನಿರ್ದಿಷ್ಟ ಭೂಪ್ರದೇಶದಲ್ಲಿ ಸರ್ಕಾರದ ಆಶ್ರಯದಲ್ಲಿ ಪರರ ನಿಯಂತ್ರಣಕ್ಕೆ ಒಳಪಡದ ಜನಸಮುದಾಯವೇ ರಾಜ್ಯ

2 ) ನಗರ – ರಾಜ್ಯಕ್ಕೆ ಒಂದು ಉದಾಹರಣೆ ಕೊಡಿ .

ನಗರ – ರಾಜ್ಯಕ್ಕೆ ಒಂದು ಉದಾಹರಣೆ ಅಥೆನ್ಸ್ ಮತ್ತು ಸ್ಟಾರ್ಟ್ .

3 ) ರಾಜ್ಯವನ್ನು ‘ ಸಿವಿಟಾಸ್ ‘ ಎಂದು ಯಾರು ಕರೆಯುತ್ತಿದ್ದರು ?

ಪ್ರಾಚೀನ ರೋಮನ್ನರು ರಾಜ್ಯವನ್ನು ‘ ಸಿವಿಟಾಸ್ ‘ ಎಂದು ಕರೆಯುತ್ತಿದ್ದರು .

4 ) ಮಾನವನ ಅತ್ಯಗತ್ಯವಾದ ಸಂಸ್ಥೆ ಯಾವುದು ?

ರಾಜ್ಯವು ಮಾನವನ ಅತ್ಯಗತ್ಯವಾದ ಸಂಸ್ಥೆಯಾಗಿದೆ .

5 ) ರಾಜ್ಯದ ಮುಖ್ಯ ಉದ್ದೇಶ ಯಾವುದು ?

ಜನತೆಯ ನಡವಳಿಕೆಯನ್ನು ನಿಯಂತ್ರಿಸಿ ಸಮಾಜದಲ್ಲಿ ಶಾಂತಿ ಕಾಪಾಡುವ ಉದ್ದೇಶವನ್ನು ರಾಜ್ಯ ಹೊಂದಿದೆ .

6 ) ಮಾನವ ಸಾಮಾಜಿಕ ಮತ್ತು ರಾಜಕೀಯ ಜೀವಿ ಎಂದು ಯಾರು ಹೇಳಿದರು ?

ಮಾನವ ಸಾಮಾಜಿಕ ಮತ್ತು ರಾಜಕೀಯ ಜೀವಿ ಎಂದು ಹೇಳಿದವರು ಅರಿಸ್ಟಾಟಲ್ .

7 ) ರಾಜ್ಯದ ಮೂಲ ಪದ ಯಾವುದು ?

ಗ್ರೀಕ್ ಭಾಷೆಯ ‘ ಪಾಲಿಸ್ ರಾಜ್ಯದ ಮೂಲಪದ .

8 ) ‘ ರಾಜ್ಯ ‘ ಎಂಬ ಪದವನ್ನು ಮೊದಲು ಯಾರು ಬಳಸಿದರು ?

ಇಟಲಿಯ ನಿಕೊಲೋ ಮೆಕೆವೆಲ್ಲಿ ರಾಜ್ಯ ಎಂಬ ಪದವನ್ನು ಮೊದಲು ಬಳಸಿದರು .

9 ) ‘ ದಿ ಪ್ರಿನ್ಸ್ ‘ ಕೃತಿಯನ್ನು ಯಾರು ಬರೆದರು ?

ಇಟಲಿಯ ಮೆಕೆವೆಲ್ಲಿ ‘ ದಿ ಪ್ರಿನ್ಸ್’ನ ಕರ್ತೃ .

10 ) ಎಲ್ಲ ಸಂಘ ಸಂಸ್ಥೆಗಳಲ್ಲಿಯೂ ಶ್ರೇಷ್ಠ ಸಂಸ್ಥೆ ಯಾವುದು ?

‘ ರಾಜ್ಯ ‘ ಎಲ್ಲಾ ಸಂಘ ಸಂಸ್ಥೆಗಳಲ್ಲಿ ಶ್ರೇಷ್ಠ .

11) ಪ್ರಜೆಗಳಿಗೆ ಹುಟ್ಟಿನಿಂದ ಸಾಯುವವರೆಗೂ ಸೇವೆ ಸಲ್ಲಿಸುವ ಸಂಸ್ಥೆ ಯಾವುದು ?

ರಾಜ್ಯ

12) ಸಪ್ತಾಂಗ ಸಿದ್ಧಾಂತವನ್ನು ಯಾರು ಪ್ರತಿಪಾದಿಸಿದರು ?

ಸಪ್ತಾಂಗ ಸಿದ್ಧಾಂತದ ಪ್ರತಿಪಾದಕ ಕೌಟಿಲ್ಯ

13 ) .ಪ್ಲೇಟೋರವರ ಪ್ರಕಾರ ರಾಜ್ಯದ ಜನಸಂಖ್ಯೆ ಎಷ್ಟು ?

ಪ್ಲೇಟೋರವರ ಪ್ರಕಾರ ಆದರ್ಶ ರಾಜ್ಯದ ಜನಸಂಖ್ಯೆ 5040 ಇರಬೇಕು .

14 ) ‘ ಅರ್ಥಶಾಸ್ತ್ರ ‘ ಕೃತಿಯನ್ನು ಯಾರು ರಚಿಸಿದರು ?

ಕೌಟಿಲ್ಯ ‘ ಅರ್ಥಶಾಸ್ತ್ರ ‘ ಕೃತಿಯನ್ನು ರಚಿಸಿದ್ದಾನೆ .

15 ) ರಾಜ್ಯದ ಜನಸಂಖ್ಯೆಯು 10000 ಇರಬೇಕು ಎಂದು ಯಾರು ಹೇಳಿದರು ?

ರೂಸೋ

16) ವಿಶ್ವದಲ್ಲಿಯೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಯಾವುದು ?

ವಿಶ್ವದಲ್ಲಿಯೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಚೀನಾ ( 145 ಕೋಟಿ )

17) ವಿಶ್ವದಲ್ಲಿಯೇ ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ದೇಶ ಯಾವುದು ?

ವಿಶ್ವದಲ್ಲಿಯೇ ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ದೇಶ ನಾರು ( 9000 ) .

18) “ ಉತ್ತಮ ಪ್ರಜೆಗಳು ಉತ್ತಮ ರಾಜ್ಯ ನಿರ್ಮಿಸುತ್ತಾರೆ ” ಈ ಮಾತನ್ನು ಹೇಳಿದವರಾರು ?

ಅರಿಸ್ಟಾಟಲ್ ಈ ಮಾತನ್ನು ಹೇಳಿದ್ದಾರೆ .

19 ) ಭೂ ಪ್ರದೇಶ ಎಂದರೇನು ?

ಭೂಪ್ರದೇಶ ಎಂದರೆ , ಅಲ್ಲಿನ ನೆಲ , ನದಿ , ಸರೋವರ , ಬೆಟ್ಟ – ಗುಡ್ಡ ಹಾಗು ಸಕಲ ಪರಿಸರವನ್ನು ಒಳಗೊಂಡಿದೆ .

20 ) ಸರ್ಕಾರ ಎಂದರೇನು ?

ರಾಜ್ಯದ ಧ್ಯೇಯ ಧೋರಣೆಗಳ ಈಡೇರಿಕೆಗಾಗಿ ಇರುವ ಸಾಧನವೇ ಸರ್ಕಾರ

21 ) ರಾಜ್ಯದ ಏಜೆಂಟ್ ಯಾವುದು ?

ಸರ್ಕಾರ ರಾಜ್ಯದ ಏಜೆಂಟ್ .

22 ) “ ರಾಜ್ಯದ ಹೃದಯ ಮತ್ತು ಆತ್ಮ ” ಯಾವುದು ?

ಪರಮಾಧಿಕಾರ ‘ ರಾಜ್ಯದ ಹೃದಯ ಮತ್ತು ಆತ್ಮ .

23 ) ಪರಮಾಧಿಕಾರ ಎಂದರೇನು ?

ರಾಜ್ಯದ ಸರ್ವಶ್ರೇಷ್ಠ ಅಧಿಕಾರವೇ ಪರಮಾಧಿಕಾರ .

24 ) ಸಂಘ – ಸಂಸ್ಥೆ ಎಂದರೇನು ?

ಒಂದು ನಿರ್ದಿಷ್ಟ ಧೈಯ – ಧೋರಣೆಗಳ ಈಡೇರಿಕೆಗಾಗಿ ಸುಸಂಘಟಿತವಾದ ಜನಸಮುದಾಯವೇ ಸಂಘ – ಸಂಸ್ಥೆ,

25 ) ‘ ಸಂಘ – ಸಂಸ್ಥೆಗಳ ಸಂಘ ‘ ಎಂದು ಯಾವುದನ್ನು ಕರೆಯುತ್ತಾರೆ ?

ರಾಜ್ಯವನ್ನು ಸಂಘ ಸಂಸ್ಥೆಗಳ ಸಂಘ ‘ ಎನ್ನುವರು .

26 ) ಸಮಾಜ ಎಂದರೇನು ?

ಸಾಮಾಜಿಕ ಸಂಬಂಧಗಳ ಬಲೆಯೇ ಸಮಾಜ

27 ) “ ಸಮಾಜವು ಸಮಾಜಿಕ ಸಂಬಂಧಗಳ ಬಲೆ ” ಎಂದವರು ಯಾರು ?

ಸಮಾಜವು ಸಾಮಾಜಿಕ ಸಂಬಂಧಗಳ ಬಲೆ ಎಂದವರು ಮ್ಯಾಕ್ಸ್‌ವೆಬರ್ .

28 ) ಯಾವುದನ್ನು ಸರ್ವಶ್ರೇಷ್ಠ ಸಂಘ ಎಂದು ಕರೆಯುತ್ತೇವೆ ?

ರಾಜ್ಯ

29 ) ‘ ನೇಷನ್‌ ‘ ಪದದ ಮೂಲ ಪದ ಯಾವುದು ?

‘ ನೇಷನ್’ನ ಮೂಲಪದ ‘ ನೇಶಿಯೋ ‘ ಎಂಬ ಲ್ಯಾಟಿನ್ ಪದ .

30 ) ರಾಷ್ಟ್ರ ಎಂಬುದು ‘ ರಾಜ್ಯ ಮತ್ತು ರಾಷ್ಟ್ರೀಯತೆ ‘ ಎಂದು ಯಾರು ಹೇಳಿದರು ?

ರಾಷ್ಟ್ರ ಎಂಬುದು ‘ ರಾಜ್ಯ ಮತ್ತು ರಾಷ್ಟ್ರೀಯತೆ ‘ ಎಂದವರು ಗಿಲ್‌ಕ್ರಿಸ್ಟ್ ,

31 ) ಭಾರತವು ಯಾವಾಗ ಪರಮಾಧಿಕಾರ ರಾಜ್ಯವಾಯಿತು ?

15 ನೇ ಆಗಸ್ಟ್ 1947 ರಂದು ಭಾರತವು ಪರಮಾಧಿಕಾರ ರಾಜ್ಯವಾಯಿತು .

32 ) ರಾಷ್ಟ್ರ ಎಂದರೇನು ?

ರಕ್ತ ಸಂಬಂಧದಿಂದ ಬಂದಿಸಲ್ಪಟ್ಟ ಒಂದೇ ಜನಾಂಗ ಸೇರಿದ ಜನರನ್ನು ರಾಷ್ಟ್ರ ಎನ್ನುವರು .

1st PUC Political Science Question Bank Chapter 2 State

II . ಎರಡು ಅಂಕಗಳ ಪ್ರಶ್ನೆಗಳು

1. ರಾಜ್ಯದ ಅರ್ಥವನ್ನು ಬರೆಯಿರಿ .

ರಾಜ್ಯವು ರಾಜ್ಯಶಾಸ್ತ್ರದ ಅಧ್ಯಯನದ ಪ್ರಮುಖ ವಿಷಯವಾಗಿದೆ . ಒಂದು ನಿರ್ದಿಷ್ಟ ಭೂ ಪ್ರದೇಶದಲ್ಲಿ ಸರ್ಕಾರದ ಆಶ್ರಯದಲ್ಲಿ , ಪರರ ನಿಯಂತ್ರಣಕ್ಕೆ ಒಳಪಡದ ಜನಸಮುದಾಯವೇ ರಾಜ್ಯ ಇದು ನಾಲ್ಕು ಮೂಲಾಂಶಗಳನ್ನು ಒಳಗೊಂಡಿದೆ .

2 ) ರಾಜ್ಯ ಅನಿವಾರ್ಯ ಏಕೆ ?

ರಾಜ್ಯವು ಜನತೆಯ ನಡವಳಿಕೆಯನ್ನು ನಿಯಂತ್ರಿಸಿ , ಸಮಾಜದಲ್ಲಿ ಶಾಂತಿಯನ್ನು ಕಾಪಾಡುವುದರ ಮೂಲಕ ವ್ಯಕ್ತಿಯ ಅವಶ್ಯಕತೆಗಳನ್ನು ಪೂರೈಸುತ್ತದೆ ಹಾಗಾಗಿ ರಾಜ್ಯ ಅನಿವಾರ್ಯ .

3 ) ರಾಜ್ಯದ ಉದಯದ ಎರಡು ಸಿದ್ಧಾಂತಗಳನ್ನು ಹೆಸರಿಸಿ .

ರಾಜ್ಯದ ಉದಯದ ಸಿದ್ಧಾಂತಗಳೆಂದರೆ ,

1. ದೈವಿಕ ಸಿದ್ಧಾಂತ

2. ಸಾಮಾಜಿಕ ಒಪ್ಪಂದ ಸಿದ್ಧಾಂತ

3. ಶಕ್ತಿ ಸಿದ್ಧಾಂತ

4 ) ರಾಜ್ಯವನ್ನು ವ್ಯಾಖ್ಯಾನಿಸಿ .

ಬ್ಲಂಟಷ್ಲಿ ಪ್ರಕಾರ ರಾಜ್ಯ ಎಂದರೆ “ ಒಂದು ನಿರ್ದಿಷ್ಟ ಭೂ ಪ್ರದೇಶದಲ್ಲಿ ರಾಜಕೀಯವಾಗಿ ಸುಸಂಘಟಿತವಾದ ಜನ ಸಮುದಾಯವೇ ರಾಜ್ಯ ” .

5 ) ಕಲ್ಯಾಣರಾಜ್ಯ ಎಂದರೇನು ?

ಜನರ ಜೀವ ಮತ್ತು ಆಸ್ತಿಯ ರಕ್ಷಣೆಯೊಂದಿಗೆ ಅವರ ಸರ್ವತೋಮುಖ ಪ್ರಗತಿಗೆ ಶ್ರಮಿಸುವ ರಾಜ್ಯವೇ ಕಲ್ಯಾಣ ರಾಜ್ಯ ಆಧುನಿಕ ರಾಜ್ಯಗಳು ಕಲ್ಯಾಣ ರಾಜ್ಯಗಳಾಗಿವೆ .

6 ) ಸಪ್ತಾಂಗ ಸಿದ್ಧಾಂತದ ಅಂಗಗಳನ್ನು ತಿಳಿಸಿ .

ಕೌಟಿಲ್ಯನ ಸಪ್ತಾಂಗ ಸಿದ್ಧಾಂತದ ಅಂಗಗಳೆಂದರೆ – ಅರ್ಥ ಸದ

1. ಸ್ವಾಮಿನ್ 2. ಜನಪದ 3. ದುರ್ಗಾ 4. ಅಮಾತ್ಯ 5 . ಕೋಶ 6. ಬಲ 7. ಮಿತ್ರ

7 ) ರಾಜ್ಯದ ನಾಲ್ಕು ಮೂಲಾಂಶಗಳನ್ನು ಹೆಸರಿಸಿ .

1. ಜನಸಂಖ್ಯೆ 2. ಭೂಪ್ರದೇಶ 3. ಸರ್ಕಾರ 4. ಪರಮಾಧಿಕಾರ

8 ) ನಿಯಮಿತ ಜನಸಂಖ್ಯೆಯಿಂದಾಗುವ ಆಗುವ ಎರಡು ಉಪಯೋಗಗಳನ್ನು ಬರೆಯಿರಿ ?

ನಿಯಮಿತ ಜನಸಂಖ್ಯೆಯಿಂದಾಗುವ ಎರಡು ಉಪಯೋಗಗಳೆಂದರೆ

1 ) .ಬಡತನವಿರದು

2 ) ನಿರುದ್ಯೋಗ ಸಮಸ್ಯೆ ಕಾಡದು

3 ) ವಸತಿ ಸಮಸ್ಯೆ ಕಾಡದು ಮುಂತಾದವು .

9 ) ಹೆಚ್ಚು ಜನಸಂಖ್ಯೆ ಹೊಂದಿರುವ ಎರಡು ರಾಜ್ಯಗಳನ್ನು ಹೆಸರಿಸಿ .

ಹೆಚ್ಚು ಜನಸಂಖ್ಯೆ ಹೊಂದಿರುವ ಎರಡು ರಾಜ್ಯಗಳೆಂದರೆ ,

1 ) ಚೀನಾ ( 145 ಕೋಟಿ )

2 ) ಭಾರತ ( 125 ಕೋಟಿ )

10 ) ಕಡಿಮೆ ಭೂ ಪ್ರದೇಶ ಹೊಂದಿರುವುದರಿಂದ ಆಗುವ ಎರಡು ಉಪಯೋಗಗಳನ್ನು ತಿಳಿಸಿ .

ಕಡಿಮೆ ಭೂ ಪ್ರದೇಶ ಹೊಂದಿರುವುದರಿಂದ ಎರಡು ಉಪಯೋಗಗಳೆಂದರೆ –

1) ರಾಷ್ಟ್ರ ರಕ್ಷಣೆ ಸುಲಭ .

2 ) ದಕ್ಷ ಆಡಳಿತ ಸಾಧ್ಯ .

11 ) ಹೆಚ್ಚು ಭೂ ಪ್ರದೇಶ ಹೊಂದಿರುವುದರಿಂದ ಆಗುವ ಎರಡು ಉಪಯೋಗಗಳನ್ನು ತಿಳಿಸಿ .

ಹೆಚ್ಚು ಭೂ ಪ್ರದೇಶ ಹೊಂದಿರುವುದರಿಂದ ಎರಡು ಉಪಯೋಗಗಳೆಂದರೆ –

1 ) ಹೇರಳವಾದ ನೈಸರ್ಗಿಕ ಸಂಪನ್ಮೂಲಗಳ ಲಭ್ಯತೆ ,

2 ) ವಸತಿ ಸಮಸ್ಯೆ ಕಾಡದು .

12 ) ದೊಡ್ಡ ಭೂಪ್ರದೇಶ ಹೊಂದಿರುವ 2 ದೇಶಗಳನ್ನು ಹೆಸರಿಸಿ .

ಹೆಚ್ಚು ಭೂಪ್ರದೇಶ ಹೊಂದಿರುವ 2 ದೇಶಗಳೆಂದರೆ –

1 ) ಕೆನಡ

2 ) ಅಮೇರಿಕಾ

13 ) ಕಡಿಮೆ ಭೂಪ್ರದೇಶ ಹೊಂದಿರುವ ಎರಡು ದೇಶಗಳನ್ನು ಹೆಸರಿಸಿ ,

ಕಡಿಮೆ ಭೂಪ್ರದೇಶ ಹೊಂದಿರುವ ಎರಡು ದೇಶಗಳೆಂದರೆ –

1 ) ವ್ಯಾಟಿಕನ್ ನಗರ ಮೆನಾಕೋ

2 ) ಸ್ಯಾನ್‌ಮೆರಿನೊ

14 ) ಸರ್ಕಾರದ ಅರ್ಥವನ್ನು ಬರೆಯಿರಿ .

ರಾಜ್ಯದ ಧೈಯಧೋರಣೆಗಳ ಈಡೇರಿಕೆಗಾಗಿರುವ ಸಾಧನವೇ ಸರ್ಕಾರ , ಇರು ರಾಜ್ಯದ 4 ಮೂಲಾಂಶಗಳಲ್ಲೊಂದು ಹಾಗು ರಾಜ್ಯದ ಒಂದು ಆಡಳಿತ ಯಂತ್ರ ಪ್ರತಿನಿಧಿ ಅಥವಾ ನಿಯೋಗವಾಗದೆ .

15 ) ಸರ್ಕಾರದ ಅಂಗಗಳನ್ನು ತಿಳಿಸಿ .

ಸರ್ಕಾರವು ಪ್ರಮುಖವಾದ 3 ಅಂಗಗಳನ್ನು ಹೊಂದಿದೆ ಅವುಗಳೆಂದರೆ

1 ) ಶಾಸಕಾಂಗ

2 ) ಕಾರ್ಯಾಂಗ

3 ) ನ್ಯಾಯಾಂಗ

16 ) ಪರಮಾಧಿಕಾರ ಎಂದರೇನು ?

ರಾಜ್ಯದ ಸರ್ವೋಚ್ಛ ಅಧಿಕಾರವೇ ಪರಮಾಧಿಕಾರ . ಇದು ರಾಜ್ಯವನ್ನು ಇತರ ಸಂಘ – ಸಂಸ್ಥೆಗಳಿಂದ ಬೇರ್ಪಡಿಸುತ್ತದೆ . ಇದು ರಾಜ್ಯದ 4 ಮೂಲಾಂಶಗಳನ್ನು ಅತ್ಯಂತ ಪ್ರಮುಖವಾದುದಾಗಿದೆ .

17 ) ಸರ್ಕಾರ ಎಂದರೇನು ?

ಸರ್ಕಾರವು ರಾಜ್ಯದ ಒಂದು ಆಡಳಿತ ಯಂತ್ರ ಪ್ರತಿನಿಧಿ ಅಥವಾ ನಿಯೋಗಿಯಾಗಿದೆ . ಇದು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಕಾರ್ಯ ನಿರ್ವಹಿಸುತ್ತದೆ . ಆದ್ದರಿಂದ ಬಂಟಷ್ಠಿ ಹೇಳಿದಂತೆ “ ಸರ್ಕಾರವೇ ಇಲ್ಲದ ರಾಜ್ಯ ಅವ್ಯವಸ್ಥೆ ಮತ್ತು ಅರಾಜಕತೆಯಿಂದ ನಶಿಸುತ್ತದೆ .

18 ) ಪರಮಾಧಿಕಾರದ ಸ್ವರೂಪಗಳಾವುವು ?

ಪರಮಾಧಿಕಾರವು ಈ ಕೆಳಗಿನ 2 ಸ್ವರೂಪಗಳನ್ನು ಹೊಂದಿದೆ .

1 ) ಆಂತರಿಕ ಪರಮಾಧಿಕಾರ

2 ) ಬಾಹ್ಯ ಪರಮಾಧಿಕಾರ

19 ) ಆಂತರಿಕ ಪರಮಾಧಿಕಾರ ಎಂದರೇನು ?

ರಾಜ್ಯದ ವ್ಯಾಪ್ತಿಯೊಳಗಿನ ಎಲ್ಲಾ ವ್ಯಕ್ತಿಗಳು ಹಾಗೂ ಸಂಘ – ಸಂಸ್ಥೆಗಳನ್ನು ನಿಯಂತ್ರಿಸುವ ರಾಜ್ಯದ ಸರ್ವೋಚ್ಛ ಅಧಿಕಾರವೇ ಆಂತರಿಕ ಪರಮಾಧಿಕಾರ ರಾಜ್ಯದ ವ್ಯಾಪ್ತಿಯೊಳಗಿನ ಎಲ್ಲಾ ವ್ಯಕ್ತಿಗಳು ಹಾಗು ಸಂಘ – ಸಂಸ್ಥೆಗಳು ರಾಜ್ಯದ ಕಾನೂನನ್ನು ಪಾಲಿಸಬೇಕು ಹಾಗೂ ಗೌರವಿಸಬೇಕು . ಇಲ್ಲದಿದ್ದಲ್ಲಿ ರಾಜ್ಯ ಶಿಕ್ಷಿಸುವ ಅಧಿಕಾರ ಹೊಂದಿದೆ .

20 ) ಬಾಹ್ಯ ಪರಮಾಧಿಕಾರ ಎಂದರೇನು ?

ರಾಜ್ಯವು ಬಾಹ್ಯ ನಿಯಂತ್ರಣದಿಂದ ಅಂದರೆ ಅನ್ಯದೇಶಗಳ ನಿಯಂತ್ರಣದಿಂದ ಸ್ವತಂತ್ರವಾಗಿರುವುದಕ್ಕೆ ಬಾಹ್ಯ ಪರಮಾಧಿಕಾರ ಎನ್ನುವರು . ಬಾಹ್ಯ ಪರಮಾಧಿಕಾರವನ್ನು ಹೊಂದಿರುವ ರಾಜ್ಯವು ಸ್ವತಂತ್ರವಾದ ವಿದೇಶಾಂಗ ನೀತಿಯನ್ನು ಅನುಸರಿಸಬಹುದು . ಈ ಪರಮಾಧಿಕಾರವನ್ನು ಹೊಂದಿರದ ಯಾವುದೇ ಭೂಭಾಗವು ರಾಜ್ಯ ಎನಿಸಿಕೊಳ್ಳುವುದಿಲ್ಲ .

21 ) ಸಮಾಜದ ಅರ್ಥವನ್ನು ಬರೆಯಿರಿ .

ಒಟ್ಟಾಗಿ ವಾಸಿಸುವ ವ್ಯಕ್ತಿಗಳ ಸಮೂಹವೇ ಸಮಾಜ , ಮಾನವ ಸಮಾಜ ಜೀವಿಯಾಗದಿರುವುದರಿಂದ ಸಮಾಜ ಉಗಮವಾಗಿದೆ .

22 ) ರಾಜ್ಯ ಮತ್ತು ಸಮಾಜದ ನಡುವಿನ 2 ವ್ಯತ್ಯಾಸಗಳನ್ನು ತಿಳಿಸಿ .

ರಾಜ್ಯ ಮತ್ತು ಸಮಾಜದ ನಡುವಿನ 2 ವ್ಯತ್ಯಾಸಗಳೆಂದರೆ –

1. ಸಮಾಜ ರಾಜ್ಯಕ್ಕಿಂತ ಪುರಾತನವಾದುದು ಆದರೆ ರಾಜ್ಯ ಸಮಾಜ ಹುಟ್ಟಿದ ನಂತರ ಹುಟ್ಟಿದೆ .

2. ಸಮಾಜ ಸಾಮಾಜಿಕ ಸಂಸ್ಥೆ ಆದರೆ ರಾಜ್ಯ ರಾಜಕೀಯ ಸಂಸ್ಥೆ .

23 ) ಸಂಘ – ಸಂಸ್ಥೆ ಎಂದರೇನು ? ಉದಾಹರಣೆ ನೀಡಿ .

ಯಾವುದಾದರೊಂದು ಬೇಡಿಕೆಯ ಈಡೇರಿಕೆಗಾಗಿ ವ್ಯಕ್ತಿಗಳು ಸ್ಥಾಪಿಸಿಕೊಂಡ ಸುಸಂಘಟಿತ ಜನಸಮುದಾಯವೇ ಸಂಘ – ಸಂಸ್ಥೆ , ಉದಾಹರಣೆ – ಲಯನ್ಸ್ ಕ್ಲಬ್ , ರೋಟರಿ ಕ್ಲಬ್ ‘ ಇತ್ಯಾದಿ .

24 ) ರಾಜ್ಯ ಮತ್ತು ಸಂಘ – ಸಂಸ್ಥೆಗಳ ನಡುವಿನ 2 ವ್ಯತ್ಯಾಸಗಳನ್ನು ತಿಳಿಸಿ .

ರಾಜ್ಯ ಮತ್ತು ಸಂಘ – ಸಂಸ್ಥೆಗಳ ನಡುವಿನ 2 ವ್ಯತ್ಯಾಸಗಳೆಂದರೆ –

1 ) ರಾಜ್ಯ ಶಾಶ್ವತವಾದುದು ಆದರೆ ಸಂಘ – ಸಂಸ್ಥೆಗಳು ಶಾಶ್ವತವಾದವುಗಳಲ್ಲ .

2 ) ರಾಜ್ಯದ ಸದಸ್ಯತ್ವ ಕಡ್ಡಾಯವಾದುದು ಆದರೆ ಸಂಘ – ಸಂಸ್ಥೆಗಳ ಸದಸ್ಯತ್ವ ಕಡ್ಡಾಯವಾದುದಲ್ಲ .

25 ) ರಾಷ್ಟ್ರ ಎಂದರೇನು ?

ರಕ್ತ ಸಂಬಂಧದಿಂದ ಬಂದಿಸಲ್ಪಟ್ಟು ಒಂದೇ ಜನಾಂಗಕ್ಕೆ ಸೇರಿದ ಜನರನ್ನು ರಾಷ್ಟ್ರ ಎನ್ನುವರು .

26 ) ರಾಜ್ಯ ಮತ್ತು ರಾಷ್ಟ್ರಗಳ ನಡುವಿನ 2 ವ್ಯತ್ಯಾಸಗಳನ್ನು ತಿಳಿಸಿ .

ರಾಜ್ಯ ಮತ್ತು ರಾಷ್ಟ್ರಗಳ ನಡುವಿನ 2 ವ್ಯತ್ಯಾಸಗಳೆಂದರೆ ,

1) ರಾಜ್ಯದ ವ್ಯಾಪ್ತಿ ಸಂಕುಚಿತವಾದುದು ಆದರೆ ರಾಷ್ಟ್ರದ ವ್ಯಾಪ್ತಿ ವಿಶಾಲವಾದುದು .

2 ) ರಾಜ್ಯ ಭೌತಿಕವಾದುದು ಆದರೆ ರಾಷ್ಟ್ರ ಭಾವನಾತ್ಮಕವಾದುದು .

1st Puc Political Science State Lesson Notes in Kannada

III . ಐದು ಅಂಕದ ಪ್ರಶ್ನೆಗಳು :

1 ) ರಾಜ್ಯದ ಮಹತ್ವವನ್ನು ವಿವರಿಸಿ .

ರಾಜ್ಯವು ಮಾನವ ಕಟ್ಟಿಕೊಂಡಿರುವ ಹಲವಾರು ಸಂಘ – ಸಂಸ್ಥೆಗಳಲ್ಲಿ ಸರ್ವಶ್ರೇಷ್ಠವಾದ ಹಾಗೂ ಅನಿವಾರವಾದ ಸಂಘವಾಗಿದೆ . ಈ ಕಾರಣದಿಂದ ಅರಿಸ್ಟಾಟಲ್‌ರವರು “ ರಾಜ್ಯವು ಜೀವನದ ರಕ್ಷಣೆಗಾಗಿ ಹುಟ್ಟಿಕೊಂಡಿದೆ . ಅದು ಒಳ್ಳೆಯ ಜೀವನವನ್ನು ಒದಗಿಸಲು ಮುಂದುವರೆದಿದೆ ” ಎಂದಿದ್ದಾರೆ . ಹಾಗಾಗ ರಾಜ್ಯದ ಹೊರತಾಗಿ ನಾಗರಿಕ ಸಮಾಜವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ . ಇಂಥಹ ರಾಜ್ಯದ ಮಹತ್ವ ಈ ಕೆಳಗಿನಂತಿದೆ .

1 ) ಇದು ಜನತೆಗೆ ಆಂತರಿಕ ರಕ್ಷಣೆ ಹಾಗೂ ಬಾಹ್ಯ ಭದ್ರತೆಯನ್ನು ಒದಗಿಸುತ್ತದೆ .

2 ) ಜನತೆಗೆ ನ್ಯಾಯವನ್ನು ದೊರಕಿಸಿಕೊಡುತ್ತದೆ .

3 ) ಜನತೆಯ ವಿಭಿನ್ನ ಚಟುವಟಿಕೆಗಳನ್ನು ನಿಯಂತ್ರಿಸಿ ಕಾನೂನು , ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುತ್ತದೆ .

4 ) ಜನತೆಯ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಸಂರಕ್ಷಿಸುತ್ತದೆ .

5 ) ಪ್ರಜೆಗಳಿಗೆ ಮೂಲಭೂತ ಸೌಕರ್ಯಗಳಾದ ಆರೋಗ್ಯ , ಶಿಕ್ಷಣ ಇತ್ಯಾದಿಗಳನ್ನು ಒದಗಿಸುತ್ತದೆ .

6 ) ಜನರಿಗೆ ಸಾಮಾನ್ಯ ಭದ್ರತೆ , ಉದ್ಯೋಗ , ನಿವೃತ್ತಿ ವೇತನ ಇತ್ಯಾದಿ ಸೌಲಭ್ಯಗಳನ್ನು ಒದಗಿಸುತ್ತದೆ .

7 ) ಆಧುನಿಕ ರಾಜ್ಯವು ಕಲ್ಯಾಣರಾಜ್ಯವಾಗಿದ್ದು ಜನನದಿಂದ ಮರಣದವರೆಗೆ ಎಲ್ಲಾ ಪ್ರಜೆಗಳಿಗೆ ಸಕಲ ಸೌಲಭ್ಯ ಮತ್ತು ಸಲವತ್ತುಗಳನ್ನು ಒದಗಿಸುತ್ತದೆ .

ಈ ರೀತಿ ಆಧುನಿಕ ರಾಜ್ಯವು ಕಲ್ಯಾಣ ರಾಜ್ಯವಾಗದ್ದು ಜನತೆಯ ಸರ್ವತೋಮುಖ ಪ್ರಗತಿಗಾಗಿ ಸದಾ ಶ್ರಮಿಸುತ್ತದೆ .

2 ) ಪರಮಾಧಿಕಾರ ಎಂದರೇನು ? ಅದರ 2 ಸ್ವರೂಪಗಳನ್ನು ವಿವರಿಸಿ .

ಪರಮಾಧಿಕಾರವು ರಾಜ್ಯದ ನಾಲ್ಕು ಮೂಲಾಂಶಗಳಲ್ಲಿ ಪ್ರಮುಖವಾದದ್ದಾಗಿದ್ದು , ಇದು ರಾಜ್ಯವನ್ನು ಇತರ ಸಂಘ – ಸಂಸ್ಥೆಗಳಿಂದ ಬೇರ್ಪಡಿಸಿದೆ . ಇದು ರಾಜ್ಯದ ಪರಮಶ್ರೇಷ್ಠ ಅಧಿಕಾರವಾಗಿದ್ದು ಇದನ್ನು ರಾಜ್ಯದ ‘ ಜೀವಾಳ ಮತ್ತು ಆತ್ಮ ‘ ಎಂದು ಕರೆಯಲಾಗಿದೆ .

ಪರಮಾಧಿಕಾರ ಎಂದರೆ , ರಾಜ್ಯದ ಪರಮಶ್ರೇಷ್ಠ ಅಧಿಕಾರ ಅಥವಾ ಯಾರೂ ಪ್ರಶ್ನಿಸದಂತಹ ಅಧಿಕಾರ , ಕಾನೂನುಗಳನ್ನು ರಚಿಸುವ ಕಾನೂನುಗಳಿಗೆ ವಿಧೇಯತೆ ತೋರಿಸುವಂತೆ ಪ್ರಜೆಗಳಿಗೆ ಒತ್ತಾಯಿಸುವ ಹಾಗು ಅವುಗಳನ್ನು ದಿಕ್ಕರಿಸಿದವರಿಗೆ ಶಿಕ್ಷೆ ವಿಧಿಸುವ ಅಧಿಕಾರ ರಾಜ್ಯಕ್ಕೆ ಮಾತ್ರ ಇದೆ . ಇದೇ ಪರಮಾಧಿಕಾರ . ಈ ಪರಮಾಧಿಕಾರ ಈ ಕೆಳಗಿನ 2 ಸ್ವರೂಪಗಳನ್ನು ಹೊಂದಿದೆ .

1 ) ಅಂತಲಕ ಸ್ವರೂಪದ ಪರಮಾಧಿಕಾರ : ರಾಜ್ಯದ ವ್ಯಾಪ್ತಿಯೊಳಗಿನ ಎಲ್ಲಾ ವ್ಯಕ್ತಿ ಮತ್ತು ಸಂಘ – ಸಂಸ್ಥೆಗಳನ್ನು ನಿಯಂತ್ರಿಸುವ ಅಧಿಕಾರವೇ ಆಂತರಿಕ ಸ್ವರೂಪದ ಪರಮಾಧಿಕಾರ . ಕಾನೂನು ರಚನೆ , ಅನುಷ್ಠಾನ ಇವುಗಳನ್ನು ಉಲ್ಲಂಘಿಸಿದರೆ ಶಿಕ್ಷೆ ನೀಡುವ ಹಾಗು ಅಗತ್ಯವೆನಿಸಿದರೆ ನೀತಿಕಾರಕ್ರಮಗಳನ್ನು ಹಮ್ಮಿಕೊಳ್ಳುವ ಆಂತರಿಕ ಸ್ವಾತಂತ್ರ್ಯವೇ ಆಂತರಿಕ ಸ್ವರೂಪದ ಪರಮಾಧಿಕಾರವಾಗಿದೆ .

2 ) ಬಾಹ್ಯ ಸ್ವರೂಪದ ಪರಮಾಧಿಕಾರ : ಒಂದು ರಾಜ್ಯದ ಬಾಹ್ಯ ನಿಯಂತ್ರಣದಿಂದ ಅಂದರೆ ಅನ್ಯದೇಶಗಳ ನಿಯಂತ್ರಣದಿಂದ ಅಂದರೆ ಅನ್ಯದೇಶಗಳ ನಿಯಂತ್ರಣದಿಂದ ಸ್ವಾತಂತ್ರ್ಯವಾಗಿರುವುದೇ ಬಾಹ್ಯಪರಮಾಧಿಕಾರ . ಈ ಪರಮಾಧಿಕಾರವನ್ನು ಹೊಂದಿರುವ ರಾಜ್ಯವು ಪರರಾಷ್ಟ್ರಗಳೊಡನೆ ತನಗೆ ಸರಿತೋರಿದ ಸಂಬಂಧವನ್ನಿಟ್ಟುಕೊಳ್ಳುವ ಅಧಿಕಾರ , ಅದು ತನಗೆ ಸರಿತೋರಿದ ವಿದೇಶಾಂಗ ನೀತಿಯನ್ನು ಅನುಸರಿಸುವ ಅಧಿಕಾರವನ್ನು ಹೊಂದಿದೆ . ಈ ಮೇಲಿನ ಎರಡು ಸ್ವರೂಪದ ಪರಮಾಧಿಕಾರವನ್ನು ಒಂದು ನಿರ್ದಿಷ್ಟ ಭೂಪ್ರದೇಶದ ಜನಾಂಗ ಹೊಂದಿದ್ದರೆ ಮಾತ್ರ ಅದು ರಾಜ್ಯ ಎನಿಸಿಕೊಳ್ಳಲು ಸಾಧ್ಯ .

3 ) ರಾಜ್ಯ ಮತ್ತು ಸಮಾಜದ ನಡುವಿನ ವ್ಯತ್ಯಾಸಗಳಾವುವು ?

ಮಾನವ ಸಮಾಜಜೀವಿಯಾಗಿರುವುದರಿಂದ ಸಮಾಜ ಉಗಮವಾದಂತೆ , ಆ ರಾಜಕೀಯ ಜೀವಿಯೂ ಆಗಿರುವುದರಿಂದ ರಾಜ್ಯ ಉಗಮವಾಗಿದೆ . ಸಮಾಜದಲ್ಲಿ ಉದ್ಭವಿಸುವ ಕಲಹಗಳನ್ನು ತೀರ್ಮಾನಿಸಲು ಅಗತ್ಯವಾದ ಅಧಿಕಾರವನ್ನು ಹೊಂದಿರುವ ಸಂಸ್ಥೆಯೇ ರಾಜ್ಯ . ಇವೆರಡು ಒಂದೇ ಉದ್ದೇಶವನ್ನು ಹೊಂದಿವೆ ಅದೇ ವ್ಯಕ್ತಿಯ ಅಭಿವೃದ್ಧಿ ಆದರೆ ಅವೆರಡು ಒಂದೇ ಅಲ್ಲ ಅವುಗಳ ನಡುವಿನ ವ್ಯತ್ಯಾಸಗಳನ್ನು ಕೆಳಗಿನಂತೆ ಕಾಣಬಹುದಾಗದೆ .

ರಾಜ್ಯ

  1. ಸಮಾಜದ ನ೦ತರ ಅಸ್ತಿತ್ವಕ್ಕೆ ಬಂದದ್ದು
  2. ಮಾನವ ಸ್ವ – ಇಚ್ಛೆಯಿಂದ ಅಸ್ತಿತ್ವಕ್ಕೆ ತಂದದ್ದು
  3. ಇದು ಪರಮಾಧಿಕಾರವನ್ನು ಹೊಂದಿದೆ
  4. ಇದು ಸಮಾಜದ ಒ೦ದು ಅಂಗವಾಗಿದೆ
  5. ಇದಕ್ಕೆ ನಿರ್ದಿಷ್ಟ ಭೂಪ್ರದೇಶದ ಅವಶ್ಯಕತೆ ಇದೆ
  6. ಇದಕ್ಕೆ ಸರ್ಕಾರವೆಂಬ ಸಾಧನವಿದೆ
  7. ಇದಕ್ಕೆ ಪ್ರಾದೇಶಿಕ ಮಿತಿಯಿದೆ
  8. ಇದು ಸುಸಂಘಟಿತವಾಗಿರಬೇಕು
  9. ಇದರ ಕಟ್ಟಳೆಗಳು ಕಡ್ಡಾಯ
  10. ಇದು ಒಂದೇ ಉದ್ದೇಶವನ್ನು ಹೊಂದಿದೆ . ಅದೇ ಜನತಾ ಕಲ್ಯಾಣ .
  11. ಇದರ ಸದಸ್ಯತ್ವ ಕಡ್ಡಾಯ
  12. ಇದು ರಾಜಕೀಯ ವ್ಯವಸ್ಥೆ

ಸಮಾಜ

  1. ರಾಜ್ಯಕ್ಕಿಂತ ಪೂರ್ವವಾದದ್ದು
  2. ಇದು ಸ್ವಾಭಾವಿಕವಾಗಿ ಅಸ್ತಿತ್ವಕ್ಕೆ ಬಂದಿದ್ದು
  3. ಇದು ಪರಮಾಧಿಕಾರ ಹೊಂದಿಲ್ಲ
  4. ಇದು ರಾಜ್ಯಕ್ಕಿಂತ ವಿಶಾಲವಾದದ್ದು
  5. ಇದಕ್ಕೆ ನಿರ್ದಿಷ್ಟ ಭೂ ಪ್ರದೇಶ ಅನಿವಾರ್ಯವಲ್ಲ
  6. ಇದಕ್ಕೆ ಸರ್ಕಾರವೆಂಬ ಸಾಧನವಿಲ್ಲ
  7. ಪ್ರಾದೇಶಿಕ ಮಿತಿ ಇಲ್ಲ
  8. ಇದು ಸುಸಂಘಟಿತವಾಗಿರಬಹುದು, ಅಸಂಘಟಿತವಾಗಿರಬಹುದು
  9. ಇದರ ಕಟ್ಟಳೆಗಳು ಕಡ್ಡಾಯವಲ್ಲ .
  10. ಇದು ಭೌತಿಕ ನೈತಿಕ , ಧಾರ್ಮಿಕ ಆರ್ಥಿಕ ಮತ್ತು ಸಾಂಸ್ಕೃತಿಕ ಮೊದಲಾದ ಉದ್ದೇಶಗಳನ್ನು ಹೊಂದಿದೆ .
  11. ಇದರ ಸದಸ್ಯತ್ವ ಕಡ್ಡಾಯವಲ್ಲ
  12. ಇದು ಸಾಮಾಜಿಕ ವ್ಯವಸ್ಥೆ

4 ) ರಾಜ್ಯ ಮತ್ತು ಸಂಘ – ಸಂಸ್ಥೆಗಳ ನಡುವಿನ ವ್ಯತ್ಯಾಸಗಳನ್ನು ವಿವರಿಸಿ .

ಮಾನವ ಹಲವಾರು ಆಸೆ ಆಕಾಂಕ್ಷೆಗಳನ್ನು ಹೊಂದಿದ್ದು , ಅವುಗಳ ಈಡೇರಿಕೆಗಾಗಿ ಹಲವಾರು ಸಂಘ – ಸಂಸ್ಥೆಗಳನ್ನು ಸ್ಥಾಪಿಸಿಕೊಂಡಿದ್ದಾನೆ . ಆದ್ದರಿಂದಲೇ ಪ್ರೊ . ಎಚ್.ಜೆ. ಲಾ “ ಮಾನವ ಸಂಘ – ಸಂಸ್ಥೆಗಳನ್ನು ನಿರ್ಮಿಸುವ ಪ್ರಾಣಿ ” ಎಂದಿದ್ದಾರೆ . ಯಾವುದಾದರೊಂದು ಬೇಡಿಕೆಯ ಪೂರೈಕೆಗಾಗಿ ವ್ಯಕ್ತಿ ಸ್ಥಾಪಿಸಿಕೊಂಡಿರುವ ಸುಸಂಘಟಿತ ಸಮುದಾಯವೇ ರಾಜ್ಯ ಉದಾ : ರೋಟರಿ ಕ್ಲಬ್ , ಲಯನ್ಸ್ ಕ್ಲಬ್ ಇತ್ಯಾದಿ ಎಲ್ಲಾ ಸಂಘಗಳಲ್ಲಿ ರಾಜ್ಯ ಅತ್ಯಂತ ಶ್ರೇಷ್ಠ ಸಂಘವಾಗಿದೆ . ಹಾಗಾಗಿ ಇದನ್ನು ಸಂಘಗಳ ಸಂಘ ” ಎನ್ನುವರು .

ರಾಜ್ಯ ಮತ್ತು ಸಂಘ – ಸಂಸ್ಥೆಗಳ ನಡುವಿನ ವ್ಯತ್ಯಾಸಗಳನ್ನು ಕೆಳಗಿನಂತೆ ಕಾಣಬಹುದು .

ರಾಜ್ಯ :

  1. ಸದಸ್ಯತ್ವ ಕಡ್ಡಾಯವಾದುದು .
  2. ಶಾಶ್ವತವಾದುದು
  3. ನಿರ್ದಿಷ್ಟ ಭೂಪ್ರದೇಶದ ಅಗತ್ಯವಿದೆ .
  4. ಪರಮಾಧಿಕಾರ ಹೊಂದಿದೆ
  5. ಕಾರಕ್ಷೇತ್ರ ವಿಶಾಲ .
  6. ಏಕಕಾಲದಲ್ಲಿ ಒಬ್ಬ ವ್ಯಕ್ತಿ ಹಲವು ಸಂಘ – ಸಂಸ್ಥೆಗಳ ಸದಸ್ಯನಾಗ ಒಂದಕ್ಕಿಂತ ಹೆಚ್ಚು ರಾಜ್ಯದ ಸದಸ್ಯನಾಗುವಂತಿಲ್ಲ
  7. ಇದರ ಸದಸ್ಯತ್ವವನ್ನು ಸುಲಭವಾಗಿ ಬಿಡಲು ಸಾಧ್ಯವಿಲ್ಲ .
  8. ಇದಕ್ಕೆ ಶಿಕ್ಷಿಸುವ ಕಾನೂನು ಬದ್ಧ ಅಧಿಕಾರವಿದೆ
  9. ಸೀಮಿತ ಸದಸ್ಯತ್ವ
  10. ಇದು ಸಂಘ – ಸಂಸ್ಥೆಗಳಿಗಿಂತ ಉನ್ನತಸ್ಥಾನ ಹೊಂದಿದೆ .
  11. ತನ್ನದೇ ಆದ ಗಡಿ ಪ್ರದೇಶ ಹೊಂದಿದೆ

ಸಂಘ – ಸಂಸ್ಥೆಗಳು :

  1. ಸದಸ್ಯತ್ವ ಐಚ್ಛಿಕವಾದುದು
  2. ಶಾಶ್ವತವಾದುದಲ್ಲ
  3. ನಿರ್ದಿಷ್ಟ ಭೂಪ್ರದೇಶದ ಅಗತ್ಯತೆ ಇಲ್ಲ
  4. ಪರಮಾಧಿಕಾರ ಹೊಂದಿಲ್ಲ
  5. ಸಂಕುಚಿತ ಕಾರ್ಯಕ್ಷೇತ್ರ
  6. ಏಕ ಕಾಲದಲ್ಲಿ ಒಬ್ಬ ವ್ಯಕ್ತಿ ಹಲವು ಸಂಘ ಸಂಸ್ಥೆಗಳ ಸದಸ್ಯನಾಗಬಹುದು
  7. ಇದರ ಸದಸ್ಯತ್ವವನ್ನು ಸುಲಭವಾಗಿ ಬಿಡಬಹುದು .
  8. ಇಂತಹ ಅಧಿಕಾರ ಇದಕ್ಕಿಲ್ಲ
  9. ಸಾರ್ವತ್ರಿಕ ಸದಸ್ಯತ್ವ .
  10. ಇದು ರಾಜ್ಯದ ಅಧೀನವಾಗಿರುತ್ತವೆ .
  11. ಇದಕ್ಕೆ ಗಡಿ ಎಂಬುದಿರುವುದಿಲ್ಲ .

5 ) ರಾಜ್ಯ ಮತ್ತು ರಾಷ್ಟ್ರಗಳ ನಡುವಿನ ವ್ಯತ್ಯಾಸಗಳನ್ನು ವಿವರಿಸಿ ,

ರಾಜ್ಯ ಮತ್ತು ರಾಷ್ಟ್ರ ಪದಗಳೆರಡನ್ನು ಒಂದೇ ಅರ್ಥದಲ್ಲಿ ಬಳಸುತ್ತಿದ್ದುದ್ದನ್ನು ಕಾಣಬಹುದು ರಾಷ್ಟ್ರ ಪದದ ದುರುಪಯೋಗಕ್ಕೆ ಮುಖ್ಯ ಕಾರಣ ರಾಷ್ಟ್ರಗಳು ರಾಜ್ಯಗಳ ಆಗಿರುವುದಾಗಿದೆ . ರಾಷ್ಟ್ರ / ಜನಪದ ಲ್ಯಾಟಿನ್ ಭಾಷೆಯ ‘ ನೇಶಿಯೋ ‘ ದಿಂದ ಬಂದಿದೆ . ‘ ನೇಶಿಯೋ ‘ ಎಂದರೆ ಹುಟ್ಟು / ಜನಿಸಿದ್ದು ಎಂದರ್ಥ . ಆದ್ದರಿಂದ ಜನಪದ ( ರಾಷ್ಟ್ರ ) ಎಂದರೆ ರಕ್ತ ಸಂಬಂಧದಿಂದ ಒಟ್ಟುಗೂಡಲ್ಪಟ್ಟ ಒಂದು ನಿರ್ದಿಷ್ಟ ಭ ಪ್ರದೇಶದಲ್ಲಿ ನೆಲಸಿರುವ ಜನಸಮುದಾಯವೇ ಆಗಿದೆ . ಒಂದು ಜನಸಮುದಾಯ ಜನಪದ / ರಾಷ್ಟ್ರವಾಗಬೇಕಾದರೆ ಒಂದೇ ಬುಡಕಟ್ಟು / ಒಂದೇ ಭಾಷೆ / ಒಂದೇ ಮತ / ಒಂದೇ ಸಂಸ್ಕೃತಿ / ಒಂದೇ ಇತಿಹಾಸನವನ್ನು ಹೊಂದಿರಬೇಕು . ಆಗ ಮಾತ್ರ ಸಾಧ್ಯ ರಾಜ್ಯ ಮತ್ತು ರಾಷ್ಟ್ರಗಳೆರಡನ್ನು ಒಂದೇ ಅರ್ಥದಲ್ಲಿ ಬಳಸುತ್ತಿದ್ದರು ಆದರೆ ಅವೆರಡು ಒಂದೇ ಅಲ್ಲವೆಂಬುದನ್ನು ಕೆಳಗಿನ ವ್ಯತ್ಯಾಸಗಳನ್ನು ತಿಳಿಯುವುದರಿಂದ ಅರಿಯಬಹುದು .

ರಾಜ್ಯ :

1. ರಾಜಕೀಯ ದೃಷ್ಟಿಯಿಂದ ಸುಸಂಘಟಿತವಾದ ಜನಸಮುದಾಯ .

2. ಇದಕ್ಕೆ ನಿರ್ದಿಷ್ಟ ಭೂಪ್ರದೇಶದ ಅಗತ್ಯವಿದೆ .

3. ಭೌತಿಕವಾದದ್ದು .

4 . ಸೀಮಿತ ವ್ಯಾಪ್ತಿ .

5. ಸರ್ಕಾರವೆಂಬ ಆಡಳಿತ ಯಂತ್ರದ ಅಗತ್ಯವಿದೆ .

6. ಪರಮಾಧಿಕಾರ ಹೊಂದಿರುವ ಸಾರ್ವಭೌಮ ಸಂಘ .

ರಾಷ್ಟ್ರ :

1. ನಾವೆಲ್ಲರೂ ಒಂದೇ ಎಂಬುವ ಭಾವನೆಯನ್ನು ಹೊಂದಿರುವ ಜನಸಮುದಾಯ

2. ನಿರ್ದಿಷ್ಟ ಭೂಪ್ರದೇಶ ಅನಿವಾರ್ಯವಲ್ಲ ,

3. ಭಾವನಾತ್ಮಕವಾದದ್ದು .

4. ವಿಶಾಲವ್ಯಾಪ್ತಿ .

5. ಇದಕ್ಕೆ ಅಗತ್ಯವಿಲ್ಲ .

6. ಸಾರ್ವಭೌಮ ಅಧಿಕಾರವಿಲ್ಲ .

1st Puc Political Science Chapter 2 Notes Pdf

IV . ಹತ್ತು ಅಂಕದ ಪ್ರಶ್ನೆಗಳು :

1 ) ರಾಜ್ಯಶಾಸ್ತ್ರ ರಾಜ್ಯ ಎಂದರೇನು ? ಅದರ ಮೂಲಾಂಶಗಳನ್ನು ವಿವರಿಸಿ .

ಒಂದು ನಿರ್ದಿಷ್ಟ ಭೂಪ್ರದೇಶದಲ್ಲಿ , ಸರ್ಕಾರದ ಆಶ್ರಯದಲ್ಲಿ , ಪರರ ನಿಯಂತ್ರಣಕ್ಕೆ ಒಳಪಡದೆ ಇರುವ ಜನಮುದಾಯವೇ ರಾಜ್ಯ ರಾಜ್ಯ ರಾಜ್ಯಶಾಸ್ತ್ರದ ಅಧ್ಯಯನದ ವಸ್ತು / ತಿರುಳಾಗಿದೆ . ರಾಜ್ಯವಿಲ್ಲದೆ ರಾಜ್ಯಶಾಸ್ತ್ರವಿರಲಾರದು . ಸಮಾಜದಲ್ಲಿರುವ ಅನೇಕ ಸಂಘ – ಸಂಸ್ಥೆಗಳಲ್ಲಿ ರಾಜ್ಯವೂ ಒಂದು ಅತ್ಯಂತ ಮಹತ್ವದ ಸಂಸ್ಥೆಯಾಗಿದೆ . ಇದು ಸ್ವಾಭಾವಿಕವಾದ , ಅಗತ್ಯವಾದ ಮತ್ತು ಸರ್ವವ್ಯಾಪಿಯಾದ ಸಂಸ್ಥೆಯಾಗಿದೆ . ರಾಜ್ಯದ ಅಸ್ತಿತ್ವಕ್ಕೆ ಅಗತ್ಯವಾದ ಪರಿಕರಗಳನ್ನು ರಾಜ್ಯದ ಮೂಲಾಂಶ ಎನ್ನುವರು .

ಪ್ರಾಚೀನ ಭಾರತದ ರಾಜಕೀಯ ಇತಿಹಾಸದ ಪಿತಾಮಹಾನಾದ ಕೌಟಿಲ್ಯ ರಾಜ್ಯದ ಅಸ್ತಿತ್ವಕ್ಕೆ ಏಳು ಅಂಗಗಳು ( ಸಪ್ತಾಂಗ ಸಿದ್ಧಾಂತ ) ಅಗತ್ಯವೆಂದು ತನ್ನ “ ಅರ್ಥಶಾಸ್ತ್ರ ” ಗ್ರಂಥದಲ್ಲಿ ಉಲ್ಲೇಖಿಸಿದ್ದಾನೆ . ಆದರೆ ಆಧುನಿಕ ಪಾಶ್ಚಾತ್ಯ ರಾಜಕೀಯ ಚಿಂತಕರ ಪ್ರಕಾರ ರಾಜ್ಯದ ಮೂಲಾಂಶಗಳು 4. ಅವುಗಳು ಕೆಳಗಿನಂತಿವೆ .

1 ) ಜನಸಂಖ್ಯೆ : ರಾಜ್ಯ ಮಾನವ ನಿರ್ಮಿತ ಸಂಸ್ಥೆಯಾಗಿರುವುದರಿಂದ ಜನಸಂಖ್ಯೆಯು ರಾಜ್ಯದ ಅತ್ಯಂತ ಪ್ರಮುಖ ಮುಲಾಂಶವಾಗಿದೆ . ಜನರಿಲ್ಲದಿದ್ದರೆ ಆಳುವವರು ಇರುವುದಿಲ್ಲ . ಆಳಿಸಿಕೊಳ್ಳುವವರು ಇರುವುದಿಲ್ಲ . ಆದ್ದರಿಂದ ಮಾನವರಹಿತ ರಾಜ್ಯದ ಅಸ್ತಿತ್ವ ಅಸಾಧ್ಯ ಜನಸಂಖ್ಯೆ ಪ್ರಮಾಣ ಎಷ್ಟಿರಬೇಕೆಂಬುದರ ಬಗ್ಗೆ ರಾಜಕೀಯ ಚಿಂತಕರಲ್ಲಿ ಏಕಾಭಿಪ್ರಾಯವಿಲ್ಲ . ನಗರ – ರಾಜ್ಯಗಳ ಕಾಲದಲ್ಲಿ ಜೀವಿಸಿದಂತಹ ಪ್ಲೇಟೋ ಪ್ರಕಾರ ಆದರ್ಶ ರಾಜ್ಯದ ಜನಸಂಖ್ಯೆ 5040 ಇರಬೇಕು . [ ಗುಲಾಮರು , ಸ್ತ್ರೀಯರು , ಅಪ್ರಾಪ್ತ ವಯಸ್ಕರು , ವೃದ್ಧರು , ವ್ಯಾಪಾರಸ್ಥರುಗಳನ್ನು ಹೊರತುಪಡಿಸಿ ] ರುಸೋ ಪ್ರಕಾರ 10,000 ಜನರಿರಬೇಕು . ಅರಿಸ್ಟಾಟಲ್ ಪ್ರಕಾರ ರಾಜ್ಯ ರಕ್ಷಣೆ ಮಾಡಿಕೊಳ್ಳುವಷ್ಟು ಚಿಕ್ಕದಾಗಿಯೂ ಮತ್ತು ಆಡಳಿತವನ್ನು ದಕ್ಷವಾಗಿ ನಡೆಸಿ ಜನರ ಅವಶ್ಯಕತೆಗಳನ್ನು ಪೂರೈಸುವಷ್ಟೇ ವಿಶಾಲವಾಗಿರಬೇಕು ಎಂದಿದ್ದಾರೆ . ಆದರೆ ಆಧುನಿಕ ಕಾಲದಲ್ಲಿ ಅತೀ ಕಡಿಮೆ ಜನಸಂಖ್ಯೆಯುಳ್ಳ ರಾಜ್ಯವನ್ನು ಊಹಿಸಿಕೊಳ್ಳುವುದು ಕಷ್ಟ ಸಾಧ್ಯ . ಹಾಗಾಗಿ ಆಧುನಿಕ ರಾಜಕೀಯ ಚಿಂತಕರು ನಿರ್ದಿಷ್ಟ ಜನಸಂಖ್ಯೆಯನ್ನು ನಿಗದಿ ಮಾಡುವ ಪ್ರಯತ್ನ ಮಾಡಿಲ್ಲ . ಆದ್ದರಿಂದ ರಾಜ್ಯದ ರಚನೆಯಲ್ಲಿ ಜನಸಂಖ್ಯೆಯು ನಿರ್ಧಾರಕ ಅಂಶವೇ ವಿನಃ ಜನಸಂಖ್ಯೆಯ ಗಾತ್ರವಲ್ಲ . ಒಂದು ರಾಜ್ಯಕ್ಕೆ ಅತಿ ಕಡಿಮೆ ಜನಸಂಖ್ಯೆ ಅಥವಾ ಅತಿ ಹೆಚ್ಚು ಜನಸಂಖ್ಯೆ ಒಳ್ಳೆಯದಲ್ಲಿ , ಜನಸಂಖ್ಯೆ ಹೆಚ್ಚಾಗಿದ್ದರೆ , ಆಹಾರ , ಉಡುಗೆ – ತೊಡುಗೆ , ವಸತಿ , ಶಿಕ್ಷಣ ಉದ್ಯೋಗ ಮುಂತಾದ ಸಮಸ್ಯೆಗಳು ಉದ್ಭವಿಸುತ್ತವೆ . ಹಾಗೆಯೇ ಅತಿ ಕಡಿಮೆ ಜನಸಂಖ್ಯೆ ಇದ್ದಲ್ಲಿ ರಾಷ್ಟ್ರರಕ್ಷಣೆ ಸಮಸ್ಯೆ & ಮಾನವ ಸಂಪನ್ಮೂಲಗಳ ಕೊರತೆ ಉದ್ಭವವಾಗುವುದು . ಆದ್ದರಿಂದ ಒಂದು ರಾಜ್ಯದಲ್ಲಿ ಜನಸಂಖ್ಯೆ ಲಭ್ಯವಿರುವ ನೈಸರ್ಗಿಕ ಸಂಪನ್ಮೂಲಗಳಿಗನುಗುಣವಾಗಿ ಇರಬೇಕು . ಕೂಡ ದೇಶಭಕ್ತರು , ಆ ಜನರ ವಿದ್ಯಾವಂತರು , ಪ್ರಾಮಾಣಿಕರು , ದಕ್ಷರು , ತ್ಯಾಗಗಳು ಮತ್ತು ಶ್ರಮಜೀವಿಗಳು ಆಗಿದ್ದಲ್ಲಿ ಮಾತ್ರ ಆ ರಾಜ್ಯ ಪ್ರಗತಿ ಸಾಧಿಸಬಹುದಾಗಿದೆ .

2 ) ಭೂಪ್ರದೇಶ : ಕೇವಲ ಜನಸಂಖ್ಯೆ ಮಾತ್ರವೇ ಇದ್ದರೆ ರಾಜ್ಯವಾಗುವುದಿಲ್ಲ . ಆ ಜನರು ಶಾಶ್ವತವಾಗಿ ನೆಲೆಸಲು ಒಂದು ನಿರ್ದಿಷ್ಟ ಭೂಪ್ರದೇಶವಿರಬೇಕು . ಈ ಕಾರಣದಿಂದಲೇ ಕ್ಯೂಬರ್ ನಿರ್ದಿಷ್ಟವಾದ ಭೂಪ್ರದೇಶವನ್ನು ಹೊಂದಿರುವ ಪ್ರಜಾಸಮುದಾಯವೇ ರಾಜ್ಯ ಎಂದಿದ್ದಾರೆ . ಒಂದು ನಿರ್ದಿಷ್ಟ ಪ್ರದೇಶವನ್ನು ಹೊಂದಿಲ್ಲದ ಕಾರಣ ಯಹೂದಿಗಳು 1948 ರ ಪ್ಯಾಲಿಸ್ತೇನ್ ವಿಭಜನೆಯವರೆಗೂ ತಮ್ಮದೇ ಆದ ರಾಜ್ಯ ಹೊಂದಲಾಗಲಿಲ್ಲ . ಭೂ ವಿಸ್ತೀರ್ಣದ ಬಗ್ಗೆ ರಾಜಕೀಯ ಚಿಂತಕರಲ್ಲಿ ಒಮ್ಮತವಿಲ್ಲ ಅರಿಸ್ಟಾಟಲ್ ರುಸೋ ಮೊದಲಾದವರು ಸೀಮಿತ ಭೂಪ್ರದೇಶ ಇರಬೇಕೆಂದಿದ್ದಾರೆ . ಆಧುನಿಕ ರಾಜ್ಯಗಳು ವಿಶಾಲ ಭೂ ಪ್ರದೇಶಗಳ ಕಡೆ ಒಲವು ಹೊಂದಿವೆ . ಅತಿ ಹೆಚ್ಚು ಭೂ ಪ್ರದೇಶವನ್ನು ಹೊಂದಿರುವ ರಾಜ್ಯಗಳು ನೈಸರ್ಗಿಕ ಸಂಪನ್ಮೂಲಗಳನ್ನು ಹೆಚ್ಚಾಗಿ ಹೊಂದಬಹುದು . ಜನರ ವಾಸ್ತವ್ಯಕ್ಕೆ ವಿಶಾಲವಾದ ಭೂ ಪ್ರದೇಶ ಒದಗಿಸಬಹುದು ಮತ್ತು ಅಂತರರಾಷ್ಟ್ರೀಯ ಸ್ಥಾನಮಾನಗಳನ್ನು ಗಳಿಸಬಹುದು . ಆದರೆ ರಾಜ್ಯ ತನ್ನ ಆದಾಯದ ಹೆಚ್ಚು ಭಾಗವನ್ನು ರಕ್ಷಣೆಗಾಗಿ ಮೀಸಲಿಡಬೇಕಾಗುತ್ತದೆ . ಆದರೆ ಸೀಮಿತ ಭೂ ಪ್ರದೇಶ ಹೊಂದಿರುವ ರಾಜ್ಯಗಳು ಪರಿಣಾಮಕಾರಿ ಆಡಳಿತ , ರಾಜ್ಯ ಮತ್ತು ಪ್ರಜೆಗಳ ಸುಮಧುರ ಸಂಬಂಧಕ್ಕೆ ಸಹಕಾರಿಯಾಗಿದ್ದು ನೈಸರ್ಗಿಕ ಸಂಪನ್ಮೂಲಗಳಿಂದ ವಂಚಿತವಾಗಿರುತ್ತವೆ .

3 ) ಸರ್ಕಾರ : ರಾಜ್ಯದ ಮುಖ್ಯ ಉದ್ದೇಶ ಜನತೆಯ ಕಲ್ಯಾಣವಾಗಿದ್ದು ಅದನ್ನು ಸಾಧಿಸಲು ಸರ್ಕಾರವೆಂಬ ಸಾಧನಬೇಕು . ಸರ್ಕಾರವು ರಾಜ್ಯದ ಒಂದು ಆಡಳಿತಯಂತ್ರ ಪ್ರತಿನಿಧಿ ಅಥವಾ ನಿಯೋಗಯಾಗದೆ . ಇದು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಕಾರ ನಿರ್ವಹಿಸುತ್ತದೆ . ಆದ್ದರಿಂದ ಬಂಟಷ್ಠಿ ಪ್ರಕಾರ “ ಸರ್ಕಾರವೇ ಇಲ್ಲದ ರಾಜ್ಯ ಅವ್ಯವಸ್ಥೆ ಮತ್ತು ಅರಾಜಕತೆಯಿಂದ ನಶಿಸುತ್ತದೆ , ಈ ಸರ್ಕಾರವು ಕೆಳಗಿನ 3 ಅಂಗಗಳನ್ನು ಹೊಂದಿದೆ .

1 ) ಶಾಸಕಾಂಗ – ಕಾನೂನುಗಳನ್ನು ರೂಪಿಸುತ್ತದೆ .

2 ) ಕಾರ್ಯಾಂಗ – ಕಾನೂನುಗಳನ್ನು ಕಾರರೂಪಕ್ಕೆ ತರುತ್ತದೆ .

3 ) ನ್ಯಾಯಾಂಗ – ಕಾನೂನಿನ ಅರ್ಥ ವಿವರಣೆ ನೀಡಿ , ನ್ಯಾಯ ನಿರ್ವಹಣೆ ಮಾಡುತ್ತದೆ .

ರಾಜ್ಯದ ಅಸ್ತಿತ್ವಕ್ಕೆ ಇಂತಹ ಸರ್ಕಾರವೇ ಬೇಕೆಂಬ ನಿಯಮವಿಲ್ಲ .

4 ) ಪರಮಾಧಿಕಾರ : ರಾಜ್ಯದ ಮೂಲಾಂಶಗಳಲ್ಲಿ ಅತಿ ಮುಖ್ಯವಾದ ಮೂಲಾಂಶವೆಂದರೆ , ಪರಮಾಧಿಕಾರ , ರಾಜ್ಯದ ಸರ್ವಶ್ರೇಷ್ಠ ಅಧಿಕಾರವೇ ಪರಮಾಧಿಕಾರ . ಕಾನೂನುಗಳನ್ನು ರೂಪಿಸುವ , ಅವುಗಳಿಗೆ ವಿಧೇಯತೆ ತೋರುವಂತೆ ಪ್ರಜೆಗಳಿಗೆ ಒತ್ತಾಯಿಸುವ ಹಾಗು ಅವುಗಳನ್ನು ದಿಕ್ಕರಿಸಿದವರಿಗೆ ಶಿಕ್ಷೆ ವಿಧಿಸುವ ಅಧಿಕಾರವೇ ಪರಮಾಧಿಕಾರ . ಪರಮಾಧಿಕಾರ ರಾಜ್ಯವನ್ನು ಇತರ ಸಂಘ – ಸಂಸ್ಥೆಗಳಿಂದ ಬೇರ್ಪಡಿಸುವ ಮುಖ್ಯವಾದ ಮೂಲಾಂಶವಾಗಿದೆ . ಹಾಗಾಗಿ ಇದನ್ನು ರಾಜ್ಯದ ಜೀವಾಳ , ಹೃದಯ ಅಥವಾ ಆತ್ಮ ಎಂದಿದ್ದಾರೆ . ಈ ಪರಮಾಧಿಕಾರವು ಎರಡು ಸ್ವರೂಪಗಳನ್ನು ಹೊಂದಿದೆ . ಆಂತರಿಕ ಸರಮಾಭಿಕಾರ : ರಾಜ್ಯದ ವ್ಯಾಪ್ತಿಯೊಳಗಿನ ಎಲ್ಲಾ ವ್ಯಕ್ತಿ ಮತ್ತು ಸಂಘ – ಸಂಸ್ಥೆಗಳ ಮೇಲೆ ರಾಜ್ಯವು ಹೊಂದಿರುವ ಪರಮೋಚ್ಛ ಅಧಿಕಾರ . 9 ) ಬಾಹ್ಯ ಪರಮಾಧಿಕಾರ : ರಾಜ್ಯ ಬಾಹ್ಯ ನಿಯಂತ್ರಣದಿಂದ ಅಂದರೆ , ಅನ್ಯದೇಶಗಳ ನಿಯಂತ್ರಣದಿಂದ ಸ್ವಾತಂತ್ರ್ಯವಾಗಿರುವುದೇ ಬಾಹ್ಯಪರಮಾಧಿಕಾರ . ಈ ಆಂತರಿಕ ಮತ್ತು ಬಾಹ್ಯ ಪರಮಾಧಿಕಾರವನ್ನು ಒಂದು ನಿರ್ದಿಷ್ಟ ಭೂ ಪ್ರದೇಶದ ಜನಾಂಗ ಹೊಂದಿದ್ದರೆ ಅದು ರಾಜ್ಯವೆನಿಸಿಕೊಳ್ಳಲು ಸಾಧ್ಯ .

5 ) ಅಂತರ ರಾಷ್ಟ್ರೀಯ ಮನ್ನಣೆ : ಕೆಲವು ವಿದ್ವಾಂಸರು ಅಂತರ ರಾಷ್ಟ್ರೀಯ ಮನ್ನಣೆ ಎಂಬ ಮತ್ತೊಂದು ಅಂಶವನ್ನ ರಾಜ್ಯದ ಮೂಲಾಂಶಗಳ ಪಟ್ಟಿಗೆ ಸೇರಿಸಿದ್ದಾರೆ . ಇದು ಎರಡು ಅಂಶಗಳನ್ನು ಹೊಂದಿದೆ . ಒಂದು ರಾಜ್ಯಗಳ ವ್ಯಕ್ತಿಗತ ಮನ್ನಣೆ ಮತ್ತೊಂದು ವಿಶ್ವಸಂಸ್ಥೆಯ ಮನ್ನಣೆ .

5 ) ರಾಜ್ಯ ಎಂದರೇನು ? ಅದರ ಮಹತ್ವವನ್ನು ವಿವರಿಸಿ .

ಮಹತ್ವ : ರಾಜ್ಯವು ಮಾನವ ಕಟ್ಟಿಕೊಂಡಿರುವ ಹಲವಾರು ಸಂಘ – ಸಂಸ್ಥೆಗಳಲ್ಲಿ ಸರ್ವಶ್ರೇಷ್ಠವಾದ ಹಾಗೂ ಅನಿವಾರವಾದ ಸಂಘವಾಗದೆ . ಈ ಕಾರಣದಿಂದ ಅರಿಸ್ಟಾಟಲ್‌ರವರು “ ರಾಜ್ಯವು ಜೀವನದ ರಕ್ಷಣೆಗಾಗಿ ಹುಟ್ಟಿಕೊಂಡಿದೆ . ಅದು ಒಳ್ಳೆಯ ಜೀವನವನ್ನು ಒದಗಿಸಲು ಮುಂದುವರೆದಿದೆ ” ಎಂದಿದ್ದಾರೆ . ಹಾಗಾಗ ರಾಜ್ಯದ ಹೊರತಾಗಿ ನಾಗರಿಕ ಸಮಾಜವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ .

ಇಂಥಹ ರಾಜ್ಯದ ಮಹತ್ವ ಈ ಕೆಳಗಿನಂತಿದೆ .

1 ) ಇದು ಜನತೆಗೆ ಆಂತರಿಕ ರಕ್ಷಣೆ ಹಾಗೂ ಬಾಹ್ಯ ಭದ್ರತೆಯನ್ನು ಒದಗಿಸುತ್ತದೆ .

2 ) ಜನತೆಗೆ ನ್ಯಾಯವನ್ನು ದೊರಕಿಸಿಕೊಡುತ್ತದೆ .

3 ) ಜನತೆಯ ವಿಭಿನ್ನ ಚಟುವಟಿಕೆಗಳನ್ನು ನಿಯಂತ್ರಿಸಿ ಕಾನೂನು , ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುತ್ತದೆ .

4 ) ಜನತೆಯ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಸಂರಕ್ಷಿಸುತ್ತದೆ .

5 ) ಪ್ರಜೆಗಳಿಗೆ ಮೂಲಭೂತ ಸೌಕರ್ಯಗಳಾದ ಆರೋಗ್ಯ , ಶಿಕ್ಷಣ ಇತ್ಯಾದಿಗಳನ್ನು ಒದಗಿಸುತ್ತದೆ .

6 ) ಜನರಿಗೆ ಸಾಮಾನ್ಯ ಭದ್ರತೆ , ಉದ್ಯೋಗ , ನಿವೃತ್ತಿ ವೇತನ ಇತ್ಯಾದಿ ಸೌಲಭ್ಯಗಳನ್ನು ಒದಗಿಸುತ್ತದೆ .

7 ) ಆಧುನಿಕ ರಾಜ್ಯವು ಕಲ್ಯಾಣರಾಜ್ಯವಾಗಿದ್ದು ಜನನದಿಂದ ಮರಣದವರೆಗೆ ಎಲ್ಲಾ ಪ್ರಜೆಗಳಿಗೆ ಸಕಲ ಸೌಲಭ್ಯ ಮತ್ತು ಸಲವತ್ತುಗಳನ್ನು ಒದಗಿಸುತ್ತದೆ .

ಈ ರೀತಿ ಆಧುನಿಕ ರಾಜ್ಯವು ಕಲ್ಯಾಣ ರಾಜ್ಯವಾಗದ್ದು ಜನತೆಯ ಸರ್ವತೋಮುಖ ಪ್ರಗತಿಗಾಗಿ ಸದಾ ಶ್ರಮಿಸುತ್ತದೆ .‌

FAQ

1 ) ರಾಜ್ಯದ ಮೂಲ ಪದ ಯಾವುದು ?

ಗ್ರೀಕ್ ಭಾಷೆಯ ‘ ಪಾಲಿಸ್ ರಾಜ್ಯದ ಮೂಲಪದ .

2) ಸರ್ಕಾರ ಎಂದರೇನು ?

ರಾಜ್ಯದ ಧ್ಯೇಯ ಧೋರಣೆಗಳ ಈಡೇರಿಕೆಗಾಗಿ ಇರುವ ಸಾಧನವೇ ಸರ್ಕಾರ

ಇತರೆ ವಿಷಯಗಳು :

First PUC All Textbooks Pdf

First Puc Political Science Notes

First PUC History Notes

ಪ್ರಥಮ ಪಿ.ಯು.ಸಿ ಕನ್ನಡ ನೋಟ್ಸ್

ಪ್ರಥಮ ಪಿ.ಯು.ಸಿ ಕನ್ನಡ ಪಠ್ಯಪುಸ್ತಕ Pdf

All Notes App

3 thoughts on “1st Puc Political Science Chapter 2 Notes | ಪ್ರಥಮ ಪಿ.ಯು.ಸಿ ರಾಜ್ಯಶಾಸ್ತ್ರ ರಾಜ್ಯ ಪಾಠ ನೋಟ್ಸ್‌ ಪ್ರಶ್ನೋತ್ತರಗಳು

Leave a Reply

Your email address will not be published. Required fields are marked *