ದ್ವಿತೀಯ ಪಿ.ಯು.ಸಿ ಇತಿಹಾಸ ಅಧ್ಯಾಯ-7.7 ಕರ್ನಾಟಕದ ಏಕೀಕರಣ ನೋಟ್ಸ್, 2nd Puc History Chapter 7.7 Notes Question Answer Mcq in Kannada Pdf Download Kseeb Solution For class 12 History Chapter 7.7 Notes in Kannada Modern India Questions and Answers Notes Pdf
Contents
ಅಧ್ಯಾಯ-7.7 ಕರ್ನಾಟಕದ ಏಕೀಕರಣ

2nd Puc History Karnataka Ekikarana Notes Pdf
I. ಈ ಕೆಳಗಿನವುಗಳಿಗೆ ಒಂದು ಪದ ಅಥವಾ ಒಂದು ವಾಕ್ಯದಲ್ಲಿ ಉತ್ತರಿಸಿ :
1.ದೇಶೀಯ ರಾಜರನ್ನು ಭಾರತದ ಒಕ್ಕೂಟವನ್ನು ಸೇರುವಂತೆ ಮನ ಒಲಿಸಿದವರು ಯಾರು ?
ಸರ್ದಾರ್ ವಲ್ಲಭಬಾಯಿ ಪಟೇಲ್ .
2. ಆಲೂರು ವೆಂಕಟರಾಯರ ಪ್ರಸಿದ್ಧ ಕೃತಿ ಯಾವುದು ?
‘ ಕರ್ನಾಟಕ ಗತ ವೈಭವ .
3. ರಾಜ್ಯ ಪುನರ್ ವಿಂಗಡಣಾ ಸಮಿತಿಯ ಛೇರ್ಮನ್ನರು ಯಾರಾಗಿದ್ದರು ?
ಫಜಲ್ ಅಲಿ .
4 . ಏಕೀಕರಣದ ನಂತರದ ಮೈಸೂರಿನ ಪ್ರಥಮ ಮುಖ್ಯ ಮಂತ್ರಿಯನ್ನು ಹೆಸರಿಸಿ .
ಎಸ್ . ನಿಜಲಿಂಗಪ್ಪ .
2nd Puc History Chapter 7 7 Notes Kannada Medium
II . ಈ ಕೆಳಗಿನವುಗಳಿಗೆ ಎರಡು ಪದ ಇಲ್ಲವೇ ಎರಡು ವಾಕ್ಯಗಳಲ್ಲಿ ಉತ್ತರಿಸಿ :
1. ಕರ್ನಾಟಕದ ಏಕೀಕರಣ ಚಳುವಳಿಯ ಯಾರಾದರು ಇಬ್ಬರು ನಾಯಕರನ್ನು ಹೆಸರಿಸಿ .
ಆಲೂರು ವೆಂಕಟರಾಯರು , ಎಸ್ . ನಿಜಲಿಂಗಪ್ಪ
2. ರಾಜ್ಯಗಳ ಪುನರ್ ರಚನೆಗಾಗಿ ರಚಿಸಲಾದ ಯಾವು ಗಾದರೂ ಎರಡು ಸಮಿತಿಗಳನ್ನು ತಿಳಿಸಿ
ಧಾರ್ ಸಮಿತಿ , ಜೆ.ವಿ.ಪಿ.ಸಮಿತಿ .
3. ಜೆ.ವಿ.ಪಿ. ಸಮಿತಿಯ ಯಾರಾದರೂ ಇಬ್ಬರು ಸದಸ್ಯರನ್ನು ಹೆಸರಿಸಿ,
ಜವಹರಲಾಲ್ ನೆಹರು , ವಲ್ಲಬಬಾಯಿ ಪಟೇಲ್ .
III . ಈ ಕೆಳಗಿನವುಗಳಿಗೆ 15 ರಿಂದ 20 ವಾಕ್ಯಗಳಲ್ಲಿ ಉತ್ತರಿಸಿ :
1.ಕನ್ನಡಿಗರಲ್ಲಿ ಐಕ್ಯತೆಯನ್ನು ಮೂಡಿಸಲು ಕಾರಣವಾದ ಅಂಶಗಳನ್ನು ಗುರುತಿಸಿ .
- ಸಂಯುಕ್ತ ಕರ್ನಾಟಕ , ವಿಶಾಲ ಕರ್ನಾಟಕ , ಕರ್ನಾಟಕ ವೃತ್ತ ಮುಂತಾದ ವೃತ್ತ ಪತ್ರಿಕೆಗಳು .
- ಆಲೂರು ವೆಂಕಟರಾಯರ ಪ್ರಸಿದ್ಧ ಕೃತಿ ಕರ್ನಾಟಕ ಗತ ವೈಭವ ಮತ್ತು ಅಂತಹ ಇತರ ಕೃತಿಗಳು .
- ಹುಯಿಲಗೋಳ ನಾರಾಯಣರಾಯರ “ ಉದಯ ವಾಗಲಿ ನಮ್ಮ ಚೆಲುವ ಕನ್ನಡನಾಡು ” ಶಾಂತಕವಿಯ “ ರಕ್ಷಿಸು ಕರ್ನಾಟಕ ದೇವಿ ” , ಕುವೆಂಪು ರವರ “ ಜಯ ಭಾರತ ಜನನಿಯ ತನುಜಾತೆ ” ಬಿ.ಎಂ.ಶ್ರೀಯವರ “ ಏರಿಸು ಹಾರಿಸು ಕನ್ನಡ ಬಾವುಟ ” , ಮಂಗೇಶ ಪೈ ರವರ “ ತಾಯಿ ಬಾರೆ ಮೊಗವ ತೋರೆ ಕನ್ನಡಿಗರ ಮಾತೆಯೆ ” ಮುಂತಾದ ಕವನಗಳು .
- ಕರ್ನಾಟಕ ವಿದ್ಯಾವರ್ಧಕ ಸಂಘ , ಕನ್ನಡ ಸಾಹಿತ್ಯ ಪರಿಷತ್ ಮುಂತಾದ ಸಂಘ ಸಂಸ್ಥೆಗಳು .
- ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ , ಕರ್ನಾಟಕ ಸಭಾ , ಮುಂತಾದವು .
- ಭಾಷಾಧಾರಿತ ರಾಜ್ಯಗಳ ರಚನೆಯನ್ನು ಗಾಂಧೀಜಿ ಸಹ 1924 ರ ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಒಪ್ಪಿಕೊಂಡಿದ್ದರು .
- 1928 ರ ನೆಹರೂ ಸಮಿತಿ ಕರ್ನಾಟಕದ ಏಕೀಕರಣಕ್ಕೆ ಶಿಫಾರಸ್ಸು ಮಾಡಿತ್ತು .
- ಆಲೂರು ವೆಂಕಟರಾಯರು , ಸಿದ್ದಪ್ಪ ಕಂಬ್ಲಿ , ಗುದ್ದಪ್ಪ ಹಳ್ಳಿಕೇರಿ , ಆರ್.ಎಚ್.ದೇಶಪಾಂಡೆ ,ಗೋರೂರು ರಾಮಸ್ವಾಮಿ ಅಯ್ಯಂಗಾರ್ , ಕೆಂಗಲ್ ಹನುಮಂತಯ್ಯ , ಎಸ್.ನಿಜಲಿಂಗಪ್ಪ , ಅಂದಾನಪ್ಪ ದೊಡ್ಡ ಮೇಟಿ ಮುಂತಾದ ಕಾಯಕರ ಪ್ರಯತ್ನಗಳು .
2 . ಕರ್ನಾಟಕದ ಏಕೀಕರಣ ಚಳುವಳಿಯನ್ನು ಸಂಕ್ಷಿಪ್ತವಾಗಿ ಚರ್ಚಿಸಿ .
- ಸಂಯುಕ್ತ ಕರ್ನಾಟಕ , ವಿಶಾಲ ಕರ್ನಾಟಕ , ಕರ್ನಾಟಕ ವೃತ್ತ ಮುಂತಾದ ವೃತ್ತ ಪತ್ರಿಕೆಗಳು .
- ಆಲೂರು ವೆಂಕಟರಾಯರ ಪ್ರಸಿದ್ದ ಕೃತಿ ‘ ಕರ್ನಾಟಕ ಗತ ವೈಭವ ‘ ಮತ್ತು ಅಂತಹ ಇತರ ಕೃತಿಗಳು .
- ಹುಯಿಲಗೋಳ ನಾರಾಯಣರಾಯರ “ ಉದಯ ವಾಗಲಿ ನಮ್ಮ ಚೆಲುವ ಕನ್ನಡನಾಡು ” ಶಾಂತಕವಿಯ “ ರಕ್ಷಿಸು ಕರ್ನಾಟಕ ದೇವಿ , ಕುವೆಂಪು ರವರ “ ಜಯ ಭಾರತ ಜನನಿಯ ತನುಜಾತೆ ” ಬಿ.ಎಂ.ಶ್ರೀಯವರ “ ಏರಿಸು ಹಾರಿಸು ಕನ್ನಡ ಬಾವುಟ ” : ಮಂಗೇಶ ಪೈ ರವರ “ ತಾಯಿ ಬಾರೆ ಮೊಗವ ತೋರೆ ಕನ್ನಡಿಗರ ಮಾತೆಯೆ ” ಮುಂತಾದ ಕವನಗಳು .
- ಕರ್ನಾಟಕ ವಿದ್ಯಾವರ್ಧಕ ಸಂಘ , ಕನ್ನಡ ಸಾಹಿತ್ಯ ಪರಿಷತ್ ಮುಂತಾದ ಸಂಘ ಸಂಸ್ಥೆಗಳು . ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ,
- ಕರ್ನಾಟಕ ಸಭಾ , ಮುಂತಾದವು .
- ಭಾಷಾಧಾರಿತ ರಾಜ್ಯಗಳ ರಚನೆಯನ್ನು ಗಾಂಧೀಜಿ ಸಹ 1924 ರ ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಒಪ್ಪಿಕೊಂಡಿದ್ದರು .
- 1928 ರ ನೆಹರೂ ಸಮಿತಿ ಕರ್ನಾಟಕದ ಏಕೀಕರಣಕ್ಕೆ ಶಿಫಾರಸ್ಸು ಮಾಡಿತ್ತು .
- ಆಲೂರು ವೆಂಕಟರಾಯರು , ಸಿದ್ದಪ್ಪ ಕಂಬ್ಲಿ , ಗುದ್ದಪ್ಪ ಹಳ್ಳಿಕೇರಿ , ಆರ್.ಎಚ್.ದೇಶಪಾಂಡೆ , ಗೋರೂರು ರಾಮಸ್ವಾಮಿ ಅಯ್ಯಂಗಾರ್ , ಕೆಂಗಲ್ ಹನುಮಂತಯ್ಯ , ಎಸ್.ನಿಜಲಿಂಗಪ್ಪ , ಅಂದಾನಪ್ಪ ದೊಡ್ಡ ಮೇಟಿ ಮುಂತಾದ ನಾಯಕರ ಪ್ರಯತ್ನಗಳು .
- ಹಿರಿಯ ಕಾಂಗ್ರೆಸ್ ನಾಯಕರಾಗಿದ್ದ ಅಂದಾನಪ್ಪ ದೊಡ್ಡ ಮೇಟಿ ಬಾಂಬೆ ಶಾಸನ ಸಭೆಗೆ ರಾಜಿನಾಮೆ ನೀಡಿ ಕನ್ನಡ ಮಾತನಾಡುವ ಪ್ರದೇಶಗಳ ಏಕೀಕರಣವನ್ನು ಒತ್ತಾಯಿಸಿ ಉಪವಾಸ ಆರಂಭಿಸಿದರು .
- ಇದರಿಂದಾಗಿ “ ಫಜಲ್ ಅಲಿ ಸಮಿತಿಯನ್ನು ನೇಮಿಸಲಾಯಿತು . ಅದು ವರದಿ ಸಲ್ಲಿಸಿ ನವಂಬರ್ 1 , 1956 ರಂದು ಅನುಷ್ಠಾನ ಗೊಂಡು ಏಕೀಕೃತ ನವಮೈಸೂರು ರಾಜ್ಯ ರಚಿಸಲ್ಪಟ್ಟಿತು . ಇದರಲ್ಲಿ 19 ಜಿಲ್ಲೆಗಳಿದ್ದವು . ಎಸ್ . ನಿಜಲಿಂಗಪ್ಪನವರು ಏಕೀಕೃತ ಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿ ಯಾದರು .
ಹೆಚ್ಚುವರಿ ಪ್ರಶ್ನೋತ್ತರಗಳು
2nd Puc History Notes Chapter 7 in Kannada Mcq Questions
1. ಸ್ವಾತಂತ್ರ್ಯ ನಂತರದಲ್ಲಿ ಒಕ್ಕೂಟವನ್ನು ಸೇರಲು ನಿರಾಕರಿಸಿದವರಾರು ?
ಹೈದರಾಬಾದ್ , ಕಾಶ್ಮೀರ ಮತ್ತು ಜೂನಾಗಡದ ರಾಜರು .
2. ಆಂಧ್ರಪ್ರದೇಶ ರಚನೆಗೆ ಒತ್ತಾಯಿಸಿ ಉಪವಾಸ ನಡೆಸಿ ಸಾವನ್ನಪ್ಪಿದವರಾರು ?
ಪೊಟ್ಟಿ ಶ್ರೀರಾಮುಲು
3. ‘ ತಾಯಿ ಬಾರೆ ಮೊಗವ ತೋರೆ ಕನ್ನಡಿಗರ ಮಾತೆಯ ಗೀತೆಯನ್ನು ರಚಿಸಿದವರಾರು ?
ಮಂಗೇಶ ಪೈ
4. ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ಯಾವಾಗ ನಡೆಯಿತು ?
1924 ರಲ್ಲಿ
5. ಕನ್ನಡ ಮಾತನಾಡುವ ಪ್ರದೇಶಗಳ ಏಕೀಕರಣಕ್ಕೆ ಒತ್ತಾಯಿಸಿ ಉಪವಾಸ ಆರಂಭಿಸಿದವರಾರು ?
ಅಂದಾನಪ್ಪ ದೊಡ್ಡಮನಿ
6. ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಮರುನಾಮಕರಣ ಮಾಡಿದ್ದು ಯಾವಾಗ ?
ನವಂಬರ್ 1 , 1973 ರಲ್ಲಿ.
FAQ
ಎಸ್ . ನಿಜಲಿಂಗಪ್ಪ .
‘ ಕರ್ನಾಟಕ ಗತ ವೈಭವ .
ಇತರೆ ವಿಷಯಗಳು:
ದ್ವಿತೀಯ ಪಿ.ಯು.ಸಿ ಇತಿಹಾಸ ನೋಟ್ಸ್
ದ್ವಿತೀಯ ಪಿ.ಯು.ಸಿ ಎಲ್ಲಾ ಪಠ್ಯಪುಸ್ತಕಗಳ Pdf 2022
1 ರಿಂದ 12ನೇ ತರಗತಿ ಕನ್ನಡ ನೋಟ್ಸ್
1 ರಿಂದ 9ನೇ ತರಗತಿ ವರೆಗಿನ ಕಲಿಕಾ ಚೇತರಿಕೆ PDF