7th Standard Vachanagala Bhava Sangama Kannada Notes | 7ನೇ ತರಗತಿ ವಚನಗಳ ಭಾವಸಂಗಮ ಕನ್ನಡ ನೋಟ್ಸ್

7ನೇ ತರಗತಿ ವಚನಗಳ ಭಾವಸಂಗಮ ಕನ್ನಡ ಪದ್ಯದ ನೋಟ್ಸ್‌ ಪ್ರಶ್ನೊತ್ತರಗಳು, 7th Standard Vachanagala Bhava Sangama Kannada Notes Question Answer Summary Mcq Pdf Download in kannada Medium Karnataka State Syllabus 2024, Kseeb Solutions For Class 7 Kannada Poem 4 Notes 7th Class Kannada 4th Poem Notes Vachanagala Bhava Sangama Summary in Kannada Vachanagala Bhava Sangama Prashn Uttar

7th Standard Kannada Vachanagala Bhava Sangama Notes Pdf

ಕೃತಿಕಾರರ ಪರಿಚಯ : – 

ಜೇಡರ ದಾಸಿಮಯ್ಯ :

11ನೆಯ ಶತಮಾನದ ಹಿರಿಯ ಶಿವಶರಣ, ಯಾದಗಿರಿ ಸಮೀಪದ ಮುದೇನೂರಿ ಸಮೀಪದವನು, ದಾಸಿಮಯ್ಯ ಪ್ರಥಮ ವಚನಕಾರರೆಂದೇ ಮಾನ್ಯನಾಗಿದ್ದಾನೆ. ರಾಮನಾಥ ಎಂಬ ಅಂಕಿತದಿಂದ ರಚಿಸಿರುವ ಇವರ 150 ವಚನಗಳು ದೊರೆತಿವೆ, ಸರಳ ಮತ್ತು ನೇರ ನಿರೂಪಣೆಯಿಂದ ಕೂಡಿದ ದಾಸಿಮಯ್ಯನವರ ವಚನಗಳು ಸಾಮಾಜಿಕ ಮೌಲ್ಯದಿಂದ ಜನಮಾನ್ಯವಾಗಿದೆ. ಜೇಡರ ದಾಸಿಮಯ್ಯನವರ ಈ ವಚನದಲ್ಲಿ ಶಿವನು ತನ್ನ ಭಕ್ತರನ್ನು ಹೇಗೆ ಪರೀಕ್ಷೆಗೆ ಒಳಪಡಿಸಿ ಪರಿಶುಧ್ಧರನ್ನಾಗಿ ಮಾಡಿ ಕೈ ಹಿಡಿದು ಕಾಯುತ್ತಾನೆಂಬುದನ್ನು ಉಪಮೆಗಳ ಮೂಲಕ ತಿಳಸಿದ್ದಾನೆ

ಮಡಿವಾಳ ಮಾಚಯ್ಯ :

12 ನೇ ಶತಮಾನದ ಪ್ರಮುಖ ವಚನಕಾರರಲ್ಲಿ ಒಬ್ಬರು . ಇವರ ಜನ್ಮಸ್ಥಳ ವಿಜಯಪುರ ಜಿಲ್ಲೆಯ ಹಿಪ್ಪರಗಿ , ಇವರ 353 ವಚನಗಳು ಉಪಲಬ್ದವಾಗಿವೆ . ಇವರ ವಚನಾಂಕಿತ ನಾಮ ‘ ಕಲಿದೇವರ ದೇವ ‘ .

ಮುಕ್ತಾಯಕ್ಕ : 

12 ನೇ ಶತಮಾನದ ಅನುಭಾವಿ ಶಿವಶರಣೆ , ಜನ್ಮಸ್ಥಳ ಲಕ್ಕುಂಡಿ , ಅಜಗಣ್ಯ ದೊರೆತಿವೆ . ಅಧ್ಯಾತ್ಮ ಸಾಧನೆಯ ಅಂಕಿತವಿರುವ 27 ವಚನಗಳು ಗುಪ್ತಭಕ್ತಿ ಅಜಗಣ್ಣನು ಗುರು .ಮುಕ್ತಾಯಕ್ಕನ ಸಹೋದರ ಮತ್ತು ಗುರು 

ಸತ್ಯಕ್ಕ : 

12 ನೆಯ ಶತಮಾನದ ಶಿವಶರಣೆಯರಲ್ಲೊಬ್ಬಳು , ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪ ಸಮೀಪದ ಹಿರೇಜಂಬೂರು ಸತ್ಯಕ್ಕನ ಜನ್ಮಸ್ಥಳ. ‘ ಶಂಭುಕೇಶ್ವರ ‘ ಎಂಬುದು ಇವರ ವಚನಗಳ ಅಂಕಿತನಾಮ.ಇವರ 27 ವಚನಗಳು ದೊರಕಿವೆ .ವಚನ ಸಾಹಿತ್ಯವು ಕನ್ನಡ ಸಾಹಿತ್ಯ ವಿಶಿಷ್ಟಸಾಹಿತ್ಯ ಪ್ರಕಾರ , 12 ನೆಯ ಭೇದವಿಲ್ಲದೆ ಗಂಡು ಹೆಣ್ಣೆಂಬ  ಮಂದಿ ವಚನಗಳನ್ನುರಚಿಸಿದ್ದಾರೆ . 

ಮುಖ್ಯಾಂಶಗಳು :

vachanagala bhava sangama saramsha in kannada

ಶ್ರೀಮಂತಗೊಳಿಸಿದ ಶತಮಾನದಲ್ಲಿ ಜಾತಿ ತಾರತಮ್ಯವಿಲ್ಲದೆ ಹಲವಾರು ಶಿವನು ತನ್ನ ಭಕ್ತರನ್ನು ಅನೇಕ ರೀತಿ ಪರೀಕ್ಷಿಸುತ್ತಾನೆ . ಯಾರ ಭಕ್ತಿ ನಿಜವೆಂದು ಈ ಪರೀಕ್ಷೆಗಳಿಂದ ತಿಳಿಯುತ್ತದೆ . ತನ್ನ ಭಕ್ತರಿಗೆ ಸಂಕಷ್ಟಗಳನ್ನು ಒಡ್ಡಿ ಭಿಕ್ಷೆ ಬೇಡುವಂತೆ ಮಾಡುತ್ತಾನೆ . ಚಿನ್ನವನ್ನು ಪರೀಕ್ಷಿಸುವ ಹಾಗೆ ಉಜ್ಜಿ , ಒರೆದು ನೋಡುತ್ತಾನೆ . ಚಂದನದಂತೆಅರೆದು ನೋಡುತ್ತಾನೆ . ಕಬ್ಬಿನ ಹಾಗೆ ಕತ್ತರಿಸಿ , ಹಿಂಡಿ ಹಿಪ್ಪೆ ಮಾಡಿ ನೋಡುತ್ತಾನೆ . ಇದ್ಯಾವುದಕ್ಕೂ ಸೋಲದಿದ್ದರೆ ಮಾತ್ರ ಪ್ರೀತಿಯಿಂದ ಕೈ ಹಿಡಿದು ತನ್ನ ನಿಜವಾದ ಭಕ್ತನನ್ನು ಎತ್ತಿಕೊಳ್ಳುತ್ತಾನೆ . ಹೀಗೆ ಶಿವನು ಭಕ್ತರನ್ನು ಪರಿಶುದ್ಧರನ್ನಾಗಿ ಮಾಡಿ ಕೈಹಿಡಿದು ಕಾಯುತ್ತಾನೆ ಎಂಬುದನ್ನು ಉಪಮೆಗಳ ( ಹೋಲಿಕೆಗಳ ) ಮೂಲಕ ವಿವರಿಸಿದ್ದಾರೆ . ಸೂರ್ಯನು ಮುಳುಗಿದ ಮೇಲೆ ಉಂಟಾದ ಲಿ ಹೋಗಲಾಡಿಸಲು ಚಂದ್ರನ ಪಭೆಯುಂಟಾಯಿತು . ನಿಂದಕರ ನುಡಿಯಿಂದ ಛೇಡಿಸುವಾಗ ಎಂದರೆ ಜನರ ಮಾತಿ ನೊಂದಾಗ ಶಿವಭಕ್ತಿಯಿಂದ ಮನಸ್ಸು ತಿಳಿಯಾಗುತ್ತದೆ . ಅಹುದು ( ಹೌದು ) ಎಂದಾಗ ಅಲ್ಲ ಎಂದು ನ್ಯಾಯವಲ್ಲದ ಮಾತನಾಡುವವರು ತಮ್ಮ ತಮ್ಮ ಹೀನ ಕೃತ್ಯಗಳಿಂದ ಅನೇಕ ಜನ್ಮಗಳನ್ನು ಎತ್ತಬೇಕಾಗುತ್ತದೆ . ಆ ಈ ರೀತಿ ಜನ್ಮಾಂತರಗಳಿಂದ ಅವರನ್ನು ಬಳಲಿಸದೆ ಶಿವಾಚಾರದ ಸನ್ಮಾರ್ಗವನ್ನು ತೋರಿಸಿ ಕಲಿದೇವರ ದೇವ ನಾದ ಶಿವ ನೆ ಎಂದು ಬೇಡಿಕೊಳ್ಳುತ್ತಿದ್ದಾರೆ . ಕೆಟ್ಟ ಮಾತು ( ನುಡಿ ) ಗಳನ್ನು ಆಡಬಾರದು , ಕೆಟ್ಟ ನಡತೆಯನ್ನು ನಡೆಯಬಾರದು , ಶಿವಭಕ್ತನಿಗೆ ನಡೆನುಡಿಗಳು ಬಹಳ ಮುಖ್ಯ ,ನಡೆನುಡಿಗಳ ಪರಿಶುದ್ಧತೆಯೇ ನಿಜವಾದ ವ್ರತ . ಹಿಡಿದ ವ್ರತವನ್ನು ಬಿಡದೆ ಇರುವುದೇ ಮಹಾಜ್ಞಾನ ಸಂಪಾದನೆ ಮಾರ್ಗ ಎಂದು ತಿಳಿಸುತ್ತಿದ್ದಾರೆ . ಲಂಚ ತೆಗೆದುಕೊಳ್ಳಬಾರದು ,ವಂಚನೆ ( ಮೋಸ ) ಮಾಡಬಾರದು , ನನ್ನ ದಾರಿಯಲ್ಲಿಯೇ ಬಂಗಾರದ ವಸ್ತ್ರ ಬಿದ್ದಿದ್ದರೂ ಅದನ್ನು ನಾನು ಮುಟ್ಟುವುದಿಲ್ಲ . ಮುಟ್ಟಿದರೆ ನಿಮ್ಮ ಮೇಲೆ ಮತ್ತು ನಿಮ್ಮ ಭಕ್ತರ ಮೇಲಾಣೆ .ಏಕೆಂದರೆ ನೀವು ನೀಡಿದ ಭಿಕ್ಷೆಯಲ್ಲಿಯೇ ಜೀವಿಸುತ್ತಿರುವ ನಾನು ಅಸ್ಥಿರವಾದ ಮನಸ್ಸಿನಿಂದ ಪರರ ಧನ ಪರಿಶ್ರಮವಿಲ್ಲದೆ ದೊರಕುವ ಯಾವುದೇ ಆಸೆ – ಆಮಿಷಗಳಿಗೆ ಒಳಗಾದರೆ , ನನ್ನನ್ನು ನರಕದಲ್ಲಿ ಅದ್ದಿ ಶಂಭುಕೇಶ್ವರ ಎಂದು ಶಿವನನ್ನು ಪ್ರಾರ್ಥಿಸುತ್ತಿದ್ದಾರೆ . 

ಪದಗಳ ಅರ್ಥ : 

  • ತಿರಿ = ಭಿಕ್ಷೆ ಬೇಡು
  •  ಮಿಸುನಿ = ಚಿನ್ನ
  •  ಅರೆದು = ತೇದು
  •  ಬೆದರು = ಹೆದರು
  •  ಅಂಧಕಾರ = ಕತ್ತಲೆ 
  • ಪ್ರಭೆ = ಕಾಂತಿ , ಬೆಳಕು
  •   ನಿಂದಕರು = ನಿಂದಿಸುವವರು 
  • ಏಡಿಸಲು = ಛೇಡಿಸು , ಚೇಪೆ ಮಾಡು
  •  ವ್ರತ = ನಿಯಮ , ಪೂಜೆ 
  • ಕುತರ್ಕ – ನ್ಯಾಯವಿಲ್ಲದ ಮಾತು
  •  ಪಥ = ಮಾರ್ಗ , ದಾರಿ 
  • ಬಟ್ಟೆ = ಮಾರ್ಗ , ದಾರಿ 
  • ಪ್ರಮಥರು = ಶಿವನ ಭಕ್ತರು
  •   ಅಳಿಮನ = ದಡವಿಲ್ಲದ ಮನಸ್ಸು 
  •  ಅದ್ದಿ = ಮುಳುಗಿಸು 
  • ಇರ್ದಡೆ = ಇದ್ದರೆ

ಅಭ್ಯಾಸ ಪ್ರಶ್ನೆಗಳು 

ಅ . ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ 

1 . ಹರನು ತನ್ನ ಭಕ್ತರನ್ನು ಹೇಗೆ ಪರೀಕ್ಷಿಸುತ್ತಾನೆ ? 

ಉತ್ತರ : ಹರನು ತನ್ನ ಭಕ್ತರಿಗೆ ನಾನಾ ರೀತಿಯ ಪರೀಕ್ಷೆಗಳನ್ನು ( ಕಷ್ಟಗಳನ್ನು ಕೊಟ್ಟು ಪರೀಕ್ಷಿಸುತ್ತಾನೆ ). 

2 . ಶಿವನ ಮೇಲಿನ ಭಕ್ತಿ ಯಾವುದರಿಂದ ಪ್ರಭೆಯಾಯಿತು ? 

ಉತ್ತರ : ಶಿವನ ಮೇಲಿನ ಭಕ್ತಿ ನಿಂದಕರ ನುಡಿಯಿಂದ ಏಡಿಸಿದಾಗ ನು ( ಛೇಡಿಸಿದಾಗ ) ಪ್ರಭೆಯಾಯಿತು . 

3 . ಮಹಾಜ್ಞಾನದಾಚರಣೆ ಯಾವುದು ?

ಉತ್ತರ : ಹಿಡಿದ ವ್ರತವನ್ನು ಬಿಡದಿದ್ದರೆ ಮಹಾಜ್ಞಾನದಾಚರಣೆಯಾಗುತ್ತದೆ . 

4 . ಯಾವುದಕ್ಕೆ ಆಸೆ ಮಾಡಿದರೆ ನರಕದಲ್ಲಿ ಅದ್ದ ಬೇಕು ? 

ಉತ್ತರ : ಪರದ್ರವ್ಯಕ್ಕೆ ಆಸೆ ಮಾಡಿದರೆ ನರಕದಲ್ಲಿ ಅದ್ದಬೇಕು .

5 . ಹೊನ್ನು ವಸ್ತ್ರ ಎಲ್ಲಿ ಬಿದ್ದಿದ್ದರೆ ಕೈಮುಟ್ಟಿ ಎತ್ತುವುದಿಲ್ಲ ?

ಉತ್ತರ : ನನ್ನ ದಾರಿಯಲ್ಲಿಯೇ ( ಸಮೀಪವೇ ) ಹೊನ್ನು ಮತ್ತು ವಸ್ತ ಬಿದ್ದಿದ್ದರೂ , ಅದನ್ನು ನಾನು ಮುಟ್ಟುವುದಿಲ್ಲ ( ತೆಗೆದುಕೊಳ್ಳುವುದಿಲ್ಲ ) . 

7th Vachanagala Bhava Sangama Question Answer

ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಎರಡು -ಮೂರು ವಾಕ್ಯದಲ್ಲಿ ಉತ್ತರಿಸಿ 

1. ಹರನು ತನ್ನ ಭಕ್ತರನ್ನು ಯಾವಾಗ ಕರವಿಡಿದು ಎತ್ತಿಕೊಳ್ಳುವನು ? 

ಉತ್ತರ : ಹರನು ಕೊಟ್ಟ ಕರುಣೆ ತೋರಿ ಕೈಹಿಡಿದು ( ಭಕ್ತರ ) ಕಪ್ಪವನ್ನು ಪರೀಕ್ಷೆಯಲ್ಲೆಲ್ಲಾ ಗೆದ್ದು , ಬೆದರದೆ ಬೆಚ್ಚದೆ ಇದ್ದರೆ ಎತ್ತಿಕೊಳ್ಳುವನು ಎಂದರೆ ಅವರ ಭಕ್ತರ ಕಷ್ಟವನ್ನ ಹೋಗಲಾಡಿಸಿ ಉದ್ದಾರ ಮಾಡುವನು 

2. ಶಿವಾಚಾರದ ಪಥವನ್ನು ತೋರಿಸಲು ಏನು ಮಾಡಬೇಕು ?

ಉತ್ತರ : ಪಥವನ್ನು  ಶಿವಾಚಾರ , ಗಲಾಡಿಸಿ ಉದ್ಧಾರ ಮಾಡುವನು . ಬೇರೆಯವರ ಹತ್ತಿರ ( ಕುತರ್ಕ ಶಾಸ್ತ್ರದಿಂದ ) ನ್ಯಾಯವಲ್ಲದ ರೀತಿಯಲ್ಲಿ ನಡೆದುಕೊಳ್ಳದಿದ್ದರೆ , ಅನ್ಯಾಯವನ್ನು ಮಾಡಿದಿದ್ದರೆ ಶಿವಾಚಾರದ ಪಥವನ್ನು ತೋರಿಸು ಎಂದು ಬೇಡಿಕೊಳ್ಳಬೇಕು . 

3. ನಡೆ – ನುಡಿಗಳ ಬಗೆಗೆ ಮುಕ್ತಾಯಕ್ಕನ ಅಭಿಪ್ರಾಯವೇನು ?

ಉತ್ತರ : ಕೆಟ್ಟ ( ನುಡಿ ) ಮಾತುಗಳನ್ನಾಡಬಾರದು , ಕೆಟ್ಟ ( ನಡ ) ನಡವಳಿಕೆಯನ್ನು ನಡೆಯಬಾರದು . ಹಿಡಿದ ವ್ರತವನ್ನು ಬಿಡಬಾರದು ಎಂಬುದು ಮುಕ್ತಾಯಕ್ಕನ ಅಭಿಪ್ರಾಯ , ಪ್ರಶ್ನೆ 

4. ಅಳಿಮನದಿಂದ ಉಂಟಾಗುವ ಪರಿಣಾಮವೇನು ?

 ಉತ್ತರ : ಅಳಿಮನ ( ದೃಢವಿಲ್ಲದ ಮನಸ್ಸಿನಿಂದ ) ಬೇರೆಯವರ ದ್ರವ್ಯಕ್ಕೆ ಆಸೆ ಪಟ್ಟರೆ ಶಿವನು ನಮ್ಮನ್ನು ನರಕದಲ್ಲಿ ಅದ್ದುತ್ತಾನೆ

ಇ ) ಕೊಟ್ಟಿರುವ ಪ್ರಶ್ನೆಗಳಿಗೆ ಐದು -ಆರು ವಾಕ್ಯಗಳಲ್ಲಿ ಉತ್ತರಿಸಿ 

1. ಶಿವನು ಯಾವಾಗ ತನ್ನ ಭಕ್ತರನ್ನು ಕರವಿಡಿದು ಎತ್ತಿಕೊಳ್ಳುತ್ತಾನೆ ?

ಉತ್ತರ : ಜೇಡರ ದಾಸಿಮಯ್ಯನು ಪರಮ ಶಿವಭಕ್ತ ಶಿವನು ತನ್ನ ಭಕ್ತರ ನಾನಾ ವಿಧಗಳಲ್ಲಿ ಪರೀಕ್ಷಿಸುತ್ತಾನೆ ಎಂದರೆ  ಕಷ್ಟಕೊಟ್ಟು ಭಿಕ್ಷೆ ಬೇಡುವಂತೆ ಮಾಡುತ್ತಾನೆ . ಚಿನ್ನವನ್ನು ಪರೀಕ್ಷಿಸುವಂತೆ ಉಜ್ಜಿ ನೋಡುತ್ತಾನೆ . ಚಂದನದಂತೆ ಅರೆಯುತ್ತಾನೆ . ಕಬ್ಬಿನ ಕೋಲಿನಂತೆ ಕತ್ತರಿಸಿ ಹಿಂಡುತ್ತಾನೆ . ಇವೆಲ್ಲಕ್ಕೂ ಹೆದರದೆ ಇದ್ದರೆ ತಾನಿದ್ದೇನೆ ಎಂದು ಬಂದು ಕೈಹಿಡಿದು ಕಾಪಾಡುತ್ತಾನೆ . ಶಿವನ ಮೇಲೆ ಅಂತಹ ದೃಢವಾದ ಭಕ್ತಿಯಿರಬೇಕು , ಕಷ್ಟಗಳು ತಮ್ಮ ಉದ್ಧಾರಕ್ಕೆ ಬಂದಿರುವುದು ಎಂದು ದೇವರು ಕೊಟ್ಟ ಪರೀಕ್ಷೆಯಲ್ಲಿ ಗೆಲ್ಲಬೇಕು. 

2. ಆಸೆ ಆಮಿಷಗಳಿಂದ ಮುಕ್ತರಾಗುವ ಬಗೆಯನ್ನು ಸತ್ಯಕ್ಕ ತನ್ನ ವಚನದಲ್ಲಿ ಹೇಗೆ ವ್ಯಕ್ತಗೊಳಿಸಿದ್ದಾಳೆ ?

ಉತ್ತರ : ಶಿವಭಕ್ತರಿಗೆ ಆಸೆ ಆಮಿಷಗಳು ಇರಬಾರದು . ಪರರ ಧನ ಪರಿಶ್ರಮವಿಲ್ಲದೆ ದೊರಕುವ ಯಾವುದೇ ಸೌಲಭ್ಯ ಅಥವಾ ವಸ್ತುಗಳಿಗೆ ಆಸೆ ಪಡಬಾರದು . ನಮ್ಮ ದಾರಿಯಲ್ಲಿ ಚಿನ್ನವೇ ಬಿದ್ದಿದ್ದರೂ ಅದನ್ನು ಕೈ ಮುಟ್ಟಿ ಎತ್ತಿಕೊಳ್ಳಬಾರದು, ಹಾಗಿಲ್ಲದಿದ್ದರೆ ಶಿವನು ನಮ್ಮನ್ನು ಮೆಚ್ಚುವುದಿಲ್ಲ, ಅದರ ಬದಲು ನಮಗೆ ಕಷ್ಟ ಎನ್ನುವ ನರಕದಲ್ಲಿ ಅದ್ದಲಿ ಈ ಆಸೆಗಳಿಂದ ಮುಕ್ತರಾಗಬೇಕಾದರೆ ನಾವು ಶಿವನ ಪೂಜಿಸಬೇಕು, ಧ್ಯಾನಿಸಬೇಕು ಎಂದು ಸತ್ಯಕ್ಕ ತನ್ನ ವಚನದಲ್ಲಿ ಹೇಳಿದ್ದಾಳೆ.

ಈ ) ಕೆಳಗಿನ ಪದ್ಯದ ವಾಕ್ಯಗಳನ್ನು ಪೂರ್ಣಗೊಳಿಸಿ

  1. ಅರೆದು ನೋಡುವ_______ದಂತೆ 
  2. ಕುತರ್ಕಶಾಸ್ತ್ರದಿಂದ_________ಕೊಡೆ 
  3. ನುಡಿಯಲುಬಾರದು ಕೆಟ್ಟ ______
  4. ಇಂತಲ್ಲದೆ ______ಮಾನವ ಮಾಡಿ 

ಉತ್ತರಗಳು : 

  1. ಚಂದನ
  2. ಯಮಗತಿಗರ  
  3. ನುಡಿಗಳ
  4. ನಾನು ಆಳಿ 

ಉ ) ಮೊದಲೆರಡು ಪದಗಳಿಗಿರುವ ಪದದಂತೆ ಸಂಬಂಧಿಸಿದ ಪದ ಬರೆಯಿರಿ,

  1. ಅರೆದು ನೋಡುವ : ಚಂದನದಂತೆ : ಅರಿದು ನೋಡುವ
  2. ನುಡಿಯಲು ಬಾರದು : ಕೆಟ್ಟ ನುಡಿಗಳ : : ನಡೆಯಲುಬಾರದು :
  3. ಬಟ್ಟೆ : ಮಾರ್ಗ : ಮಿಸುನಿ :
  4. ಮುಕ್ತಾಯಕ್ಕ : ಅಜಗಣ್ಣ ತಂದೆ : : ಸತ್ಯಕ್ಕ :  
  5. ಭಿಕ್ಷದಲ್ಲಿಪ್ಪೆನಾಗಿ : ಭಿಕ್ಷದಲ್ಲಿ + ಇಪ್ಪೆನಾಗಿ : : ಅಹುದೆಂದಡೆ :

ಉತ್ತರಗಳು : 

  1. ಕಬ್ಬಿನ ಕೋಲಿನಂತೆ 
  2. ಕೆಟ್ಟ ನಡೆಗಳ 
  3. ಚಿನ್ನ
  4. ಶಂಭುಕೇಶ್ವರಾ 
  5. ಅಹುದು + ಎಂದೆಡೆ

FAQ :

ಮಹಾಜ್ಞಾನದಾಚರಣೆ ಯಾವುದು ?

ಉತ್ತರ : ಹಿಡಿದ ವ್ರತವನ್ನು ಬಿಡದಿದ್ದರೆ ಮಹಾಜ್ಞಾನದಾಚರಣೆಯಾಗುತ್ತದೆ . 

ಯಾವುದಕ್ಕೆ ಆಸೆ ಮಾಡಿದರೆ ನರಕದಲ್ಲಿ ಅದ್ದ ಬೇಕು ? 

ಉತ್ತರ : ಪರದ್ರವ್ಯಕ್ಕೆ ಆಸೆ ಮಾಡಿದರೆ ನರಕದಲ್ಲಿ ಅದ್ದಬೇಕು .

ಹೊನ್ನು ವಸ್ತ್ರ ಎಲ್ಲಿ ಬಿದ್ದಿದ್ದರೆ ಕೈಮುಟ್ಟಿ ಎತ್ತುವುದಿಲ್ಲ ?

ಉತ್ತರ : ನನ್ನ ದಾರಿಯಲ್ಲಿಯೇ ( ಸಮೀಪವೇ ) ಹೊನ್ನು ಮತ್ತು ವಸ್ತ ಬಿದ್ದಿದ್ದರೂ , ಅದನ್ನು ನಾನು ಮುಟ್ಟುವುದಿಲ್ಲ ( ತೆಗೆದುಕೊಳ್ಳುವುದಿಲ್ಲ ) . 

ಇತರೆ ವಿಷಯಗಳು :

7th Standard All Subject Notes

7ನೇ ತರಗತಿ ಕನ್ನಡ ಪುಸ್ತಕ Pdf

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ  7ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *