rtgh

3ನೇ ತರಗತಿ ಪ್ರಾಮಾಣಿಕ ಬಾಲಕ ಕನ್ನಡ ನೋಟ್ಸ್‌ | 3rd Standard Pramanika Balaka Kannada Notes

3ನೇ ತರಗತಿ ಪ್ರಾಮಾಣಿಕ ಬಾಲಕ ಕನ್ನಡ ನೋಟ್ಸ್‌, 3ನೇ ತರಗತಿ ಪ್ರಾಮಾಣಿಕ ಬಾಲಕ ಕನ್ನಡ ನೋಟ್ಸ್‌, 3rd Std Pramanika Balaka Notes Question Answer Summery Pramanika Balaka Notes in Kannada Pdf Download Kseeb Solution For Class 3 Chapter 7 Notes 2024 3rd Standard Pramanika Balaka Notes Kannada Medium

3rd Std Pramanika Balaka Notes

ತರಗತಿ : 3ನೇ ತರಗತಿ

ವಿಷಯ : ಕನ್ನಡ

ಪಾಠದ ಹೆಸರು : ಪ್ರಾಮಾಣಿಕ ಬಾಲಕ

3rd Std Pramanika Balaka Notes

3rd Std Pramanika Balaka Notes

ಅ ) ಬಿಟ್ಟಿರುವ ಸ್ಥಳವನ್ನು ತುಂಬಿ ಬರೆ .

1. ದಾರಿ ಬದಿಯ ……… ತೋಪಿನಲ್ಲಿಯ ಹಣ್ಣುಗಳು ಆಕರ್ಷಿಸಿದವು .

ಉತ್ತರ : ದಾರಿ ಬದಿಯ ಮಾವಿನ ತೋಪಿನಲ್ಲಿಯ ಹಣ್ಣುಗಳು ಆಕರ್ಷಿಸಿದವು .

2. ಶಾಸ್ತ್ರಿಯವರಲ್ಲಿ ……… ಪುಟಿದೆದ್ದಿತು .

ಉತ್ತರ : ಶಾಸ್ತ್ರಿಯವರಲ್ಲಿ ದೇಶಪ್ರೇಮ ಪುಟಿದೆದ್ದಿತು .

3. ಶಾಸ್ತ್ರಿಯವರು ಗಾಂಧೀಜಿಯವರ ಒಡನಾಟದಲ್ಲಿ ಅನೇಕ …… ಗಳಲ್ಲಿ ಪಾಲ್ಗೊಂಡರು .

ಉತ್ತರ : ಶಾಸ್ತ್ರಿಯವರು ಗಾಂಧೀಜಿಯವರ ಒಡನಾಟದಲ್ಲಿ ಅನೇಕ ಚಳುವಳಿಗಳಲ್ಲಿ ಪಾಲ್ಗೊಂಡರು .

4. ನಮ್ಮ ದೇಶವು 1947 ಆಗಸ್ಟ್ ……… ರಂದು ಸ್ವತಂತ್ರವಾಯಿತು .

ಉತ್ತರ : ನಮ್ಮದೇಶವು 1947 ಆಗಸ್ಟ್ 15 ರಂದು ಸ್ವತಂತ್ರವಾಯಿತು .

5. ಭಾರತ ದೇಶದ ಪ್ರಥಮ ಪ್ರಧಾನಿ ………

ಉತ್ತರ : ಭಾರತ ದೇಶದ ಪ್ರಥಮ ಪ್ರಧಾನಿ ಜವಾಹರ್‌ಲಾಲ್ ನೆಹರು

6. ಶಾಸ್ತ್ರಿಯವರು ಜನತೆಗೆ ನೀಡಿದ ಘೋಷವಾಕ್ಯ ……… ಮತ್ತು ………

ಉತ್ತರ : ಶಾಸ್ತ್ರಿಯವರು ಜನತೆಗೆ ನೀಡಿದ ಘೋಷವಾಕ್ಯ ಜೈ ಜವಾನ್ ಮತ್ತು ಜೈ ಕಿಸಾನ್ .

Pramanika Balaka Questions and Answers

ಆ ) ಒಂದು ವಾಕ್ಯದಲ್ಲಿ ಉತ್ತರ ಬರೆ .

1. ಮಕ್ಕಳು ತೋಪನ್ನು ಏಕೆ ಪ್ರವೇಶಿಸಿದರು ?

ಉತ್ತರ : ದಾರಿ ಬದಿಯ ಮಾವಿನ ತೋಪಿನಲ್ಲಿ ಬೆಳೆದು ಪಕ್ವವಾಗಿದ್ದ ಮಾವಿನ ಹಣ್ಣುಗಳು ಮಕ್ಕಳನ್ನು ಆಕರ್ಷಿಸಿದ್ದರಿಂದ ಮಕ್ಕಳು ತೋಪನ್ನು ಪ್ರವೇಶಿಸಿದರು .

2. ಮಕ್ಕಳು ಏಕೆ ಗಲಿವಿಲಿಗೊಂಡರು ?

ಉತ್ತರ : ಅನಿರೀಕ್ಷಿತವಾಗಿ ಬಂದ ತೋಟದ ಮಾಲೀಕನನ್ನು ಕಂಡು ಮಕ್ಕಳು ಗಲಿವಿಲಿಗೊಂಡರು .

3. ಮಾಲೀಕನ ಮನಸ್ಸು ಏಕೆ ಕರಗಿತು ?

ಉತ್ತರ : ಬಾಲಕನ ಮುಗ್ಗ ಹಾಗೂ ಪ್ರಾಮಾಣಿಕ ಮಾತುಗಳನ್ನು ಕೇಳಿ ಮಾಲೀಕನ ಮನಸ್ಸು ಕರಗಿತು .

4. ಶಾಸ್ತ್ರಿಯವರಿಗೆ ಸರ್ಕಾರ ಯಾವ ಪ್ರಶಸ್ತಿ ನೀಡಿ ಗೌರವಿಸಿತು ?

ಉತ್ತರ : ಸರ್ಕಾರವು ಶಾಸ್ತ್ರಿಯವರಿಗೆ ‘ ಭಾರತ ರತ್ನ ‘ ಪ್ರಶಸ್ತಿ ನೀಡಿ ಗೌರವಿಸಿತು .

ಇ ) ಎರಡು ಮೂರು ವಾಕ್ಯಗಳಲ್ಲಿ ಉತ್ತರ ಬರೆ .

1. ಬಾಲಕ ಮಾಲಿಕನಿಗೆ ಏನೆಂದು ಹೇಳಿದನು ?

ಉತ್ತರ : ‘ ನಾನು ಮಾಡಿದ್ದು ತಪ್ಪು . ಇನ್ನೆಂದೂ ಇಂತಹ ತಪ್ಪನ್ನು ಮಾಡುವುದಿಲ್ಲ . ಆದರೆ ನಾನು ಮಾಡಿದ ತಪ್ಪಿಗೆ ನನ್ನ ತಂದೆ , ತಾಯಿ ಮತ್ತು ಗುರುಗಳು ನಿಂದನೆಗೆ ಗುರಿಯಾದರಲ್ಲಾ ಎಂದು ದುಃಖಿಸುತ್ತಿರುವೆ ‘ ಎಂದು ಬಾಲಕ ಮಾಲಿಕನಿಗೆ ಹೇಳಿದನು .

2. ಮಾಲಿಕ ಬಾಲಕನನ್ನು ಹೇಗೆ ಸಮಾಧಾನಪಡಿಸಿದನು ?

‘ ಮಗು , ನಿನ್ನ ತಪ್ಪನ್ನು ನೀನು ಒಪ್ಪಿಕೊಂಡಿರುವೆ. ನಿನ್ನ ಪ್ರಾಮಾಣಿಕತೆ ನನಗೆ ಇಷ್ಟವಾಯಿತು . ತಪ್ಪನ್ನು ಅರಿಯುವ , ತಿದ್ದಿಕೊಳ್ಳುವ ನಿನ್ನ ಈ ಗುಣ, ನಿನ್ನನ್ನು ದೊಡ್ಡ ವ್ಯಕ್ತಿಯನ್ನಾಗಿ ಮಾಡುತ್ತದೆ ಎಂದು ಹೇಳಿ ಮತ್ತಷ್ಟು ಮಾವಿನಹಣ್ಣುಗಳನ್ನು ಬಾಲಕನಿಗೆ ನೀಡಿ ಸಮಾಧಾನಪಡಿಸಿದನು .

3. ಶಾಸ್ತ್ರಿಯವರು ಮಂತ್ರಿ ಪದವಿಗೆ ಏಕೆ ರಾಜೀನಾಮೆ ನೀಡಿದರು ?

ಉತ್ತರ : ನೆಹರು ಅವರ ಮಂತ್ರಿಮಂಡಲದಲ್ಲಿ ರೈಲ್ವೆ ಮಂತ್ರಿಯಾಗಿ ಶಾಸ್ತ್ರಿಯವರು ಕಾರ್ಯನಿರ್ವಹಿಸಿದರು . ಆ ಸಮಯದಲ್ಲಿ ರೈಲ್ವೆ ಅಪಘಾತವೊಂದಕ್ಕೆ ತಾವೇ ಹೊಣೆ ಹೊತ್ತು ತಪ್ಪು ತಮ್ಮದಲ್ಲದಿದ್ದರೂ ಮಂತ್ರಿ ಪದವಿಗೆ ರಾಜೀನಾಮೆ ನೀಡಿದರು .

ಈ ) ಈ ಕೆಳಗಿನ ಪ್ರಶ್ನೆಗಳಿಗೆ ಕಾರಣಕೊಡು .

1. ಮಾಲಿಕ ಹೊಡೆಯದಿದ್ದರೂ ಬಾಲಕ ಅತ್ತನು .

ಉತ್ತರ : ಬಾಲಕ ಮಾಡಿದ್ದು ತಪ್ಪು . ಆದರೆ ಅವನು ಮಾಡಿದ ತಪ್ಪಿಗೆ ಅವನ ತಂದೆ , ತಾಯಿ ಮತ್ತು ಗುರುಗಳ ನಿಂದನೆಗೆ ಗುರಿಯಾದರಲ್ಲಾ ಎಂಬ ಕಾರಣಕ್ಕೆ ಬಾಲಕ ಅಳುವನು .

2. ‘ ಶಾಸ್ತ್ರಿಯವರು ದೇಶದೆಲ್ಲೆಡೆ ಮನೆಮಾತಾದರು .

ಕಾರಣ , ಕೇವಲ ಹದಿನೆಂಟು ತಿಂಗಳುಗಳ ಅವಧಿಯಲ್ಲಿ ತಮ್ಮ ಪ್ರಾಮಾಣಿಕತೆ ಹಾಗೂ ದೇಶ ಪ್ರೇಮದ ನಡವಳಿಕೆಗಳಿಂದ ದೇಶದೆಲ್ಲೆಡ ಮನೆಮಾತಾದರು .

ಉ ) ಇಲ್ಲಿ ಕೊಟ್ಟಿರುವ ಮಾತುಗಳನ್ನು ಯಾರಿಗೆ ಹೇಳಿದರು ? ಎಂದು ಬರೆ.

1. “ ನಿನ್ನ ಅಪ್ಪ , ಅಮ್ಮ ಮತ್ತು ಗುರುಗಳು ಇದನ್ನೇ ಏನು ಕಲಿಸಿದ್ದು ? ”

ಉತ್ತರ : ಈ ಮಾತನ್ನು ತೋಟದ ಮಾಲಿಕ ಬಾಲಕನಿಗೆ ಹೇಳುವನು .

2. “ ಇನ್ನೆಂದೂ ಇಂತಹ ತಪ್ಪು ಮಾಡುವುದಿಲ್ಲ” .

ಉತ್ತರ : ಈ ಮಾತನ್ನು ಬಾಲಕ ಮಾವಿನ ತೋಪಿನ ಮಾಲಿಕನಿಗೆ ಹೇಳುವನು .

3. “ ನಿನ್ನ ಗುಣ ನಿನ್ನನ್ನು ದೊಡ್ಡ ವ್ಯಕ್ತಿಯನ್ನಾಗಿ ಮಾಡುತ್ತದೆ . ”

ಉತ್ತರ : ಬಾಲಕನ ಪ್ರಾಮಾಣಿಕತೆ ಮೆಚ್ಚಿ ಮಾವಿನ ತೋಪಿನ ಮಾಲಿಕ ಬಾಲಕನಿಗೆ ಈ ಮಾತನ್ನು ಹೇಳುವನು .

ಊ ) ಕೊಟ್ಟಿರುವ ಪದಗಳನ್ನು ಓದಿ , ನಂತರ ವಾಕ್ಯ ರಚಿಸು .

1. ಮನೆ ಮಾತಾಗು :

ಉತ್ತರ : ಶಾಸ್ತ್ರಿಯವರು ತಮ್ಮ ಪ್ರಾಮಾಣಿಕತೆ ಹಾಗೂ ದೇಶಪ್ರೇಮದ ನಡವಳಿಕೆಗಳಿಕೆಗಳಿಂದ ದೇಶದೆಲ್ಲೆಡೆ ಮನೆಮಾತಾದರು .

2. ಹೊಣೆ ಹೊತ್ತು .

ಉತ್ತರ : ಶಾಸ್ತ್ರಿಯವರು ರೈಲ್ವೆ ಅಪಘಾತವೊಂದಕ್ಕೆ ತಾವೇ ಹೊಣೆಹೊತ್ತು ಮಂತ್ರಿ ಪದವಿಗೆ ರಾಜೀನಾಮೆ ಕೊಟ್ಟರು

3. ಪುಟಿದೇಳು :

ಉತ್ತರ : ಶಾಸ್ತ್ರಿಯವರನ್ನು ಸ್ವಾತಂತ್ರ್ಯ ಚಳವಳಿಗಳು ಆಕರ್ಷಿಸಿದವು . ದೇಶಪ್ರೇಮ ಅವರಲ್ಲಿ ಪುಟಿದೆದ್ದಿತು .

4. ಆಕರ್ಷಿಸು :

ಉತ್ತರ : ಗಾಂಧೀಜಿವರ ನೇತೃತ್ವದಲ್ಲಿ ನಡೆದ ಚಳವಳಿಗಳು ಶಾಸ್ತ್ರಿಯವರನ್ನು ಆಕರ್ಷಿಸಿದವು .

ಭಾಷಾಭ್ಯಾಸ

ಅ ) ಗಮನಿಸಿ ಮಾದರಿಯಂತೆ ವಾಕ್ಯ ರಚಿಸು .

ಮಾದರಿ : ನಾನು ಹಣ್ಣನ್ನು ತಿಂದೆನು .

ಮಕ್ಕಳು ಮರದ ಬಳಿ ಆಟವಾಡುತ್ತಿದ್ದಾರೆ .

ಆ ) ಕೆಳಗಿನ ಪದಗಳಿಗೆ ಪಠ್ಯಪುಸ್ತಕದ ಪದಕೋಠಿ ಅಥವಾ ಅರ್ಥಕೋಶದಿಂದ ಅರ್ಥ ಹುಡುಕಿ ಬರೆ .

ಉತ್ತರ : ಪಕ್ವ = ಹಣ್ಣಾದ

ಧಾವಿಸು = ವೇಗವಾಗಿ ಹೋಗು

ಗಲಿವಿಲಿ = ದಿಕ್ಕು ತೋರದೆ ಹೋಗುವುದು

ನೇತೃತ್ವ = ನಾಯಕತ್ವ , ಮುಖಂಡತ್ವ

3rd Std Pramanika Balaka Notes

FAQ

2. ಮಕ್ಕಳು ಏಕೆ ಗಲಿವಿಲಿಗೊಂಡರು ?

ಉತ್ತರ : ಅನಿರೀಕ್ಷಿತವಾಗಿ ಬಂದ ತೋಟದ ಮಾಲೀಕನನ್ನು ಕಂಡು ಮಕ್ಕಳು ಗಲಿವಿಲಿಗೊಂಡರು .

3. ಮಾಲೀಕನ ಮನಸ್ಸು ಏಕೆ ಕರಗಿತು ?

ಉತ್ತರ : ಬಾಲಕನ ಮುಗ್ಗ ಹಾಗೂ ಪ್ರಾಮಾಣಿಕ ಮಾತುಗಳನ್ನು ಕೇಳಿ ಮಾಲೀಕನ ಮನಸ್ಸು ಕರಗಿತು .

ಇತರೆ ವಿಷಯಗಳು:

3ನೇ ತರಗತಿ ಪಠ್ಯಪುಸ್ತಕ PDF

1 ರಿಂದ 10ನೇ ತರಗತಿ ಕನ್ನಡ ನೋಟ್ಸ್‌ Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

All Notes App

Leave a Reply

Your email address will not be published. Required fields are marked *