rtgh

ದ್ವಿತೀಯ ಪಿ.ಯು.ಸಿ ಅಧ್ಯಾಯ- 4.2 ಹೊಸ ಧರ್ಮಗಳ ಉದಯ ಇತಿಹಾಸ ನೋಟ್ಸ್‌ | 2nd Puc History Chapter 4.2 Notes in Kannada

ದ್ವಿತೀಯ ಪಿ.ಯು.ಸಿ ಅಧ್ಯಾಯ- 4.2 ಹೊಸ ಧರ್ಮಗಳ ಉದಯ ಇತಿಹಾಸ ನೋಟ್ಸ್‌, 2nd Puc History Chapter 4.2 Notes Question Answer Mcq in Kannada Pdf Download Kseeb Solution FOR Class 12 History Chapter 4.2 Notes 2nd Puc History 4.2 Question Answer

ಅಧ್ಯಾಯ- 4.2 ಹೊಸ ಧರ್ಮಗಳ ಉದಯ

2nd puc history chapter 4 question answer in

2nd Puc History Chapter 4.2 Question Answer in Kannada

I. ಒಂದು ವಾಕ್ಯದಲ್ಲಿ ಉತ್ತರಿಸಿ

1. ಜೈನ ಧರ್ಮವನ್ನು ಯಾರು ಸ್ಥಾಪಿಸಿದರು ?

ಮೊದಲ ತೀರ್ಥಂಕರನಾದ ವೃಷಭನಾಥ ,

2. 23 ನೇ ತೀರ್ಥಂಕರರು ಯಾರಾಗಿದ್ದರು ?

23 ನೇ ತೀರ್ಥಂಕರರು ಪಾರ್ಶ್ವನಾಥ .

3. ವರ್ಧಮಾನ ಎಲ್ಲಿ ಜನಿಸಿದನು ?

ವೈಶಾಲಿ ಸಮೀಪದ ಕುಂದಗ್ರಾಮದಲ್ಲಿ .

4 . ವರ್ಧಮಾನ ಎಲ್ಲಿ ನಿರ್ವಾಣ ಹೊಂದಿದನು ?

ದಕ್ಷಿಣ ಬಿಹಾರದ ರಾಜಗೃಹ ಸಮೀಪದ ಪಾವಾದಲ್ಲಿ

5 . ವರ್ಧಮಾನನು ಎಲ್ಲಿ ಜ್ಞಾನೋದಯವನ್ನು ಪಡೆದನು ?

ಬಿಹಾರದ ಜೃಂಬಿಕಾ ಗ್ರಾಮದಲ್ಲಿ .

6. ಬೌದ್ಧ ಧರ್ಮವನ್ನು ಸ್ಥಾಪಿಸಿದವರು ಯಾರು ?

ಗೌತಮ ಬುದ್ಧ

7 . ಬುದ್ಧ ಎಲ್ಲಿ ಜನಿಸಿದನು ?

ಬುದ್ದ ಲುಂಬಿನಿವನದಲ್ಲಿ ಜನಿಸಿದನು .

8. ಬುದ್ದನ ಮೊದಲ ಹೆಸರೇನು ?

ಬುದ್ಧನ ಮೊದಲ ಹೆಸರು ಸಿದ್ದಾರ್ಥ .

9.ಬುದ್ಧ ‘ ಪದದ ಅರ್ಥವೇನು ?

‘ಜ್ಞಾನವನ್ನು ಪಡೆದವನು ಎಂದರ್ಥ .

10. ಸಿದ್ದಾರ್ಥನು ಯಾವ ಸ್ಥಳದಲ್ಲಿ ಜ್ಞಾನೋದಯವನ್ನು ಹೊಂದಿದನು ?

ಸಿದ್ದಾರ್ಥನು ‘ ಗಯಾ ‘ ದಲ್ಲಿ ಜ್ಞಾನೋದಯವನ್ನು ಹೊಂದಿದನು .

11. ಬುದ್ದ ತನ್ನ ಮೊದಲ ಪ್ರವಚನವನ್ನು ಎಲ್ಲಿ ನೀಡಿದನು ?

ಬುದ್ದ ತನ್ನ ಮೊದಲ ಪ್ರವಚನವನ್ನು ಸಾರನಾಥದ ಜಿಂಕೆವನದಲ್ಲಿ ನೀಡಿದನು

12. ಬುದ್ಧ ಎಲ್ಲಿ ನಿರ್ವಾಣ ಹೊಂದಿದನು ?

ಉತ್ತರ ಪ್ರದೇಶದ ಕುಶಿನಗರದಲ್ಲಿ ನಿರ್ವಾಣ ಹೊಂದಿದನು .

2nd Puc History Chapter 4 Ancient Period in Kannada

II . ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ ಒಂದು ಪದ ಅಥವಾ ವಾಕ್ಯದಲ್ಲಿ ಉತ್ತರಿಸಿ :

1 . ವರ್ಧಮಾನನ ತಂದೆ ತಾಯಿ ಯಾರು ?

ತಂದೆ ಸಿದ್ದಾರ್ಥ , ತಾಯಿ ತ್ರಿಶಲಾದೇವಿ .

2. ವರ್ಧಮಾನನ ತಿರತ್ನಗಳಲ್ಲಿ ಯಾವುದಾದರೂ ಎರಡನ್ನು ತಿಳಿಸಿ.

ಸಮ್ಯಕ್ ಜ್ಞಾನ , ಸಮ್ಯಕ್ ನಂಬಿಕೆ .

3. ಜೈನ ಸಭೆಗಳು ಎಲ್ಲಿ ಜರುಗಿದವು ?

ಮೊದಲ ಸಭೆ ಪಾಟಲೀಪುತ್ರದಲ್ಲಿ , ಎರಡನೇ ಸಭೆ ವಲ್ಲಭಿಯಲ್ಲಿ .

4. ಜೈನ ಧರ್ಮದ ಪಂಗಡಗಳು ಯಾವುವು ?

ಜೈನ ಧರ್ಮದ ಪಂಗಡಗಳು ಶ್ವೇತಾಂಬರರು , ದಿಗಂಬರರು .

5. ಬುದ್ಧನ ತಂದೆ ತಾಯಿ ಯಾರು ?

ಶುದ್ಧೋದನ ಮತ್ತು ಮಾಯಾದೇವಿ .

6. ಬುದ್ಧ ಬೋಧಿಸಿದ ಆರ್ಯ ಸತ್ಯಗಳಲ್ಲಿ ಯಾವುದಾದರೂ ಎರಡನ್ನು ತಿಳಿಸಿ .

ಪ್ರಾಪಂಚಿಕ ಜೀವನವು ದುಃಖಮಯವಾಗಿದೆ .

ಆಸೆಯೇ ದುಃಖಕ್ಕೆ ಮೂಲ ಕಾರಣ .

7. ಬೌದ್ಧ ಧರ್ಮಕ್ಕೆ ರಾಜಾಶ್ರಯ ನೀಡಿದ ಯಾರಾದರೂ ಇಬ್ಬರು ಅರಸರನ್ನು ಹೆಸರಿಸಿ .

ಬೌದ್ಧ ಧರ್ಮಕ್ಕೆ ರಾಜಾಶ್ರಯ ನೀಡಿದ ಅರಸರೆಂದರೆ ಅಶೋಕ , ಕಾನಿಷ್ಕ ,

8. ತ್ರಿಪಿಟಕಗಳಲ್ಲಿ ಯಾವುದಾದರೂ ಎರಡನ್ನು ತಿಳಿಸಿ .

ವಿನಯ ಪಿಟಕ , ಸುತ್ತ ಪಿಟಕ .

9.ಬೌದ್ಧ ಧರ್ಮದ ಪಂಥಗಳನ್ನು ಹೆಸರಿಸಿ .

ಬೌದ್ಧ ಧರ್ಮದ ಪಂಥಗಳೆಂದರೆ ಹೀನಯಾನ ಮತ್ತು ಮಹಾಯಾನ .

III . ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ 15-20 ವಾಕ್ಯಗಳಲ್ಲಿ ಉತ್ತರಿಸಿ .

1. ಹೊಸ ಧರ್ಮಗಳ ಉದಯಕ್ಕೆ ಕಾರಣವಾದ ಅಂಶಗಳಾವುವು ?

  • ವೈದಿಕ ಧರ್ಮದಲ್ಲಿನ ಗೊಂದಲಗಳು :
  • ಪುರೋಹಿತರ ಪ್ರಭಾವದಿಂದಾಗಿ ಬಹಳಷ್ಟು ಕಠೋರತೆಗಳು ಧರ್ಮದೊಳಗೆ ನುಸುಳಿ ಜನರು ಬೇಸರಗೊಂಡರು .
  • ಪುರೋಹಿತ ವರ್ಗದ ಪರಮಾಧಿಕಾರ : ಎಲ್ಲರಿಗಿಂತ ತಾವೇ ಶ್ರೇಷ್ಠ ಎಂದು ತಿಳಿದು ಇತರ ಜಾತಿಗಳ ಮೇಲೆ ಪರಮಾಧಿಕಾರ ಸ್ಥಾಪಿಸಿದರು .
  • ಪ್ರಾಣಿಬಲಿ : ಸಾಮಾನ್ಯ ಜನರ ಸಮಸ್ಯೆಗಳ ಪರಿಹಾರಕ್ಕೆ ಪಾಣಿಬಲಿ , ಶಾಸ್ತ್ರಗಳ ವಿಧಿಗಳು ಒಂದು ಭಾಗವಾಗಿತ್ತು ಮತ್ತು ಇವುಗಳ ಆಚರಣೆ ದುಬಾರಿಯಾಗಿತ್ತು .
  • ಮಂತ್ರಗಳ ಪಠಣ : ಸಂಸ್ಕೃತದಲ್ಲಿದ್ದ ವೈದಿಕ ಸಾಹಿತ್ಯ ಜನಸಾಮಾನ್ಯರಿಗೆ ಅರ್ಥವಾಗುತ್ತಿರಲಿಲ್ಲ . ಇದರಿಂದ ಮಂತ್ರ ಪಠಣೆಯಲ್ಲಿ ನಂಬಿಕೆಯನ್ನು ಕಳೆದುಕೊಂಡರು .
  • ಜಾತಿಪದ್ಧತಿ : ಬ್ರಾಹ್ಮಣರು ಉನ್ನತ ಸ್ಥಾನವನ್ನು ಹೊಂದಿದ್ದರು , ಇತರೇ ವರ್ಗದವರು ಮತ್ತು ಶೂದ್ರರು ಹೇಳಿಕೊಳ್ಳಲಾಗದ ಸಂಕಷ್ಟಗಳಿಗೆ ಗುರಿಯಾದರು .
  • ಮಹಾನ್ ವ್ಯಕ್ತಿಗಳ ಜನನ : ಇದೇ ಸಮಯದಲ್ಲಿ ಮಹಾವೀರ ಮತ್ತು ಬುದ್ಧ ನಂತಹ ಮಹಾನ್ ವ್ಯಕ್ತಿಗಳ ಜನನವಾಗಿ ಅವರು ಸರಳವಾದ ಭಾಷೆ ಮತ್ತು ತತ್ವಗಳನ್ನೊಳಗೊಂಡ ಧರ್ಮಗಳನ್ನು ಬೋಧಿಸಿದರು . ಇವೆಲ್ಲವೂ ಹೊಸಮತಗಳ ಉದಯಕ್ಕೆ ಕಾರಣವಾದವು .

2. ಮಹಾವೀರನ ಜೀವನ ಮತ್ತು ಬೋಧನೆಗಳನ್ನು ಕುರಿತು ಚರ್ಚಿಸಿ .

  • ವರ್ಧಮಾನ ಮಹಾವೀರನು ವೈಶಾಲಿ ಸಮೀಪದ ಕುಂದಗ್ರಾಮದಲ್ಲಿ ಸಾ.ಶ.ಪೂ. 599 ರಲ್ಲಿ ಜನಿಸಿದನು .
  • ರಾಜ ಸಿದ್ದಾರ್ಥ ಮತ್ತು ತ್ರಿಶಲಾದೇವಿ ಈತನ ತಂದೆತಾಯಿಗಳು .
  • 18 ನೇ ವಯಸ್ಸಿನಲ್ಲಿ ರಾಜಕುಮಾರಿ ಯಶೋಧಳನ್ನು ವಿವಾಹವಾದನು .
  • ಅವನಿಗೆ ಅನೊಜ್ಜ ಅಥವಾ ಪ್ರಿಯದರ್ಶಿನಿ ಎಂಬ ಮಗಳಿದ್ದಳು .
  • ತನ್ನ ತಂದೆತಾಯಿಗಳ ಆಕಸ್ಮಿಕ ಮರಣದಿಂದಾಗಿ ವರ್ಧಮಾನನು ಉಡುಪನ್ನು ಸೇರಿದಂತೆ ಪ್ರಾಪಂಚಿಕ ಸುಖಭೋಗಗಳನ್ನು ತ್ಯಜಿಸಿ ಸತ್ಯವನ್ನು ಅರಸುತ್ತಾ ಸನ್ಯಾಸಿಯಾಗಿ ಸಂಚರಿಸಿ 13 ವರ್ಷಗಳ ಕಾಲ ಸ್ವದೇಹ ದಂಡನೆ ಮತ್ತು ಆಳವಾದ ಧ್ಯಾನ ಮಾಡುತ್ತಾ ಜೀವನ ನಡೆಸಿದನು .
  • ವೈಶಾಖದ ‘ ಹತ್ತನೇ ದಿನ ಬಿಹಾರದ ಜೃಂಬಿಕಾ ಗ್ರಾಮದಲ್ಲಿ ಈತನಿಗೆ ಜ್ಞಾನೋದಯವಾಯಿತು .
  • ವರ್ಧಮಾನ ಮಹಾವೀರನೆಂದು ಕರೆಯಲ್ಪಟ್ಟನು .
  • ಸುಮಾರು 30 ವರ್ಷಗಳ ಕಾಲ ಕೋಸಲ , ಮಗದ , ವಿದೇಹ ಮತ್ತು ಅಂಗ ಗಳಲ್ಲಿ ಜೈನಧರ್ಮದ ತತ್ವಗಳನ್ನು ಭೋದಿಸುತ್ತಾ ಪ್ರವಾಸ ಕೈಗೊಂಡನು .
  • ತನ್ನ 72 ನೇ ವಯಸ್ಸಿನಲ್ಲಿ ಪಾವಾ ಎಂಬಲ್ಲಿ ಮರಣ ಹೊಂದಿದನು .

ಭೋದನೆಗಳು :

  • ಪಂಚಶೀಲ ತತ್ವಗಳು : ಸತ್ಯ , ಅಹಿಂಸೆ , ಆಸ್ತೇಯ [ ಕಳ್ಳತನ ಮಾಡದಿರುವುದು ] ಅಪರಿಗ್ರಹ [ ಅವಶ್ಯ ಕತೆಗಿಂತ ಹೆಚ್ಚಿನ ಸಂಪತ್ತನ್ನು ಹೊಂದದಿರುವುದು ] ಬ್ರಹ್ಮಚರ್ಯ [ ಪಾವಿತ್ರ್ಯತೆ ]
  • ಜಾತಿಪದ್ಧತಿ ಮತ್ತು ಪ್ರಾಣಿಬಲಿಗಳನ್ನು ಖಂಡಿಸಿದನು . ಅಹಿಂಸೆಗೆ ಹೆಚ್ಚು ಒತ್ತು ಕೊಟ್ಟನು . ಮೋಕ್ಷ ಸಾಧನೆಗಾಗಿ ಸನ್ಯಾಸತ್ವ ಮತ್ತು ಕಠಿಣ ತಪಸ್ಸನ್ನು ಪ್ರತಿಪಾದಿಸಿದನು .
  • ತಿರತ್ನಗಳು : ಸಮಕ್ ಜ್ಞಾನ , ಸಮ್ಯಕ್ ನಂಬಿಕೆ , ಸಮ್ಯಕ್ ನಡತ ಮಹಾವೀರನಿಗೆ ದೇವರ ಅಸ್ತಿತ್ವದಲ್ಲಿ ನಂಬಿಕೆ ಇರಲಿಲ್ಲ . ಆತ್ಮದ ಅಸ್ತಿತ್ವದಲ್ಲಿ ನಂಬಿಕೆ ಇತ್ತು .

2nd Puc History Hosa Dharmagala Udaya Notes in Kannada

IV ಈ ಕೆಳಗಿನ ಪ್ರಶ್ನೆಗೆ 30-40 ವಾಕ್ಯಗಳಲ್ಲಿ ಉತ್ತರಿಸಿ .

1. ಬುದ್ಧನ ಜೀವನ ಮತ್ತು ಬೋಧನೆಗಳನ್ನು ಚಿತ್ರಿಸಿ .

  • ಗೌತಮ ಬುದ್ಧನು ಸಾ.ಶ.ಪೂ. 583 ರಲ್ಲಿ ಲುಂಬಿನವನದಲ್ಲಿ ಜನಿಸಿದನು .
  • ಈತನ ಮೊದಲ ಹೆಸರು ಸಿದ್ದಾರ್ಥ , ರಾಜ ಶುದ್ಧೋದನ ಮತ್ತು ಮಾಯಾದೇವಿ ಇವನ ತಂದೆತಾಯಿಗಳು .
  • ಸಿದ್ದಾರ್ಥ ಏಳುದಿನಗಳ ಮಗುವಾಗಿದ್ದಾಗಲೇ ತನ್ನ ತಾಯಿ ಮಾಯಾದೇವಿ ಮರಣಹೊಂದಲಾಗಿ ಅವನ ಚಿಕ್ಕಮ್ಮ ಮಹಾಪ್ರಜಾಪತಿ ಗೌತಮಿ ಅವನನ್ನು ಘೋಷಿಸಿದಳು .
  • ಸುಖ ಭೋಗಗಳೊಡನೆ ಬೆಳೆದ ಸಿದ್ದಾರ್ಥನಿಗೆ 16 ನೇ ವಯಸ್ಸಿಗೆ ಯಶೋಧರಾಳೊಂದಿಗೆ ವಿವಾಹ ಮಾಡಲಾಯಿತು .
  • ಇವರಿಗೆ ರಾಮಲ ಎಂಬ ಗಂಡು ಮಗ ಜನಿಸಿದನು .
  • ಒಂದು ಸಂಜೆ ಸಿದ್ದಾರ್ಥನು ಅರಮನೆಯಿಂದ ಆಚೆ ಹೋದಾಗ ಒಬ್ಬ ವೃದ್ದ , ಒಬ್ಬ ರೋಗಿ , ಒಂದು ಶವಯಾತ್ರೆ , ಮತ್ತು ಒಬ್ಬ ಸನ್ಯಾಸಿಯನ್ನು ಕಂಡನು ಮೊದಲ ಮೂರು ದೃಶ್ಯಗಳಲ್ಲಿ ನೋವನ್ನು ಕಂಡರೆ , ನಾಲ್ಕನೇ ದೃಶ್ಯದಲ್ಲಿ ಸಂತೋಷವನ್ನು ಕಂಡನು .
  • ದುಃಖಕ್ಕೆ ಮೂಲ ಕಾರಣ ಕಂಡುಹಿಡಿಯಲು ಹೆಂಡತಿ ಮಕ್ಕಳು , ತಂದೆ ತಾಯಿಯರನ್ನು ಬಿಟ್ಟು ‘ ಮಹಾಪರಿತ್ಯಾಗಿ ಯಾದನು .
  • ಅಲೆಮಾರಿ ಸನ್ಯಾಸಿ ಜೀವನ ನಡೆಸಿ , ಆಸೆಯಿಂದ ದೂರವಿದ್ದು ತಪಸ್ಸನ್ನು ಆಚರಿಸಿದನು . ಗಯಾದ ಆಲದ ಮರವೊಂದರ ಕೆಳಗೆ ಜ್ಞಾನೋದಯವನ್ನು ಪಡೆದನು . ಬುದ್ದನೆಂದರೆ ಜ್ಞಾನ ಪಡೆದವನು ಎಂದರ್ಥ . ಬುದ್ಧನನ್ನು ‘ ತಥಾಗತ’ನೆಂದು ಕರೆಯಲಾಯಿತು .
  • ಬನಾರಸ್ ಸಮೀಪದ ಸಾರನಾಥದ ಜಿಂಕವನದಲ್ಲಿ ತನ್ನ ಪ್ರಥಮ ಪ್ರವಚನ ನೀಡಿದನು ಇದನ್ನು ಧರ್ಮಚಕ್ರ ಪ್ರವರ್ತನ ‘ ಎಂದು ಕರೆಯಲಾಗಿದೆ . ನಲವತ್ತೈದು ವರ್ಷಗಳ ಕಾಲ ಗೌತಮಬುದ್ದ ತನ್ನ ಸಿದ್ಧಾಂತ ಬೋಧಿಸುತ್ತ ಸಂಚರಿಸಿದನು . ಆತನ ವ್ಯಕ್ತಿತ್ವ ಮತ್ತು ಸರಳತೆ ಜನರನ್ನು ಬೌದ್ಧ ಧರ್ಮದತ್ತ ಸೆಳೆಯಿತು .
  • ತನ್ನ 80 ನೇ ವಯಸ್ಸಿನಲ್ಲಿ ಉತ್ತರ ಪ್ರದೇಶದ ಕುಶೀ ನಗರದಲ್ಲಿ ಏಷ್ಯಾದ ಬೆಳಕು ‘ ಗೌತಮ ಬುದ್ಧ ಮರಣ ಹೊಂದಿದನು .

ಬುದ್ದನ ಭೋದನೆಗಳು :

  • ಬುದ್ಧನು ತನ್ನ ಅನುಯಾಯಿಗಳಿಗೆ ನಾಲ್ಕು ಮೂಲತತ್ವ ಗಳಾದ ಸತ್ಯ , ಅಹಿಂಸೆ ( ನೋವು ಮಾಡದಿರುವುದು . ಆಸ್ತೇಯ [ ಕಳತನ ಮಾಡದಿರುವುದು ] ಮತ್ತು ಬ್ರಹ್ಮಚರ್ಯ [ ಪಾವಿತ್ರ್ಯತೆ ] ಬೋಧಿಸಿದನು .
  • ನಾಲ್ಕು ಆರ್ಯ ಸತ್ಯಗಳನ್ನು ಬೋಧಿಸಿದನು .
  • ಪ್ರಾಪಂಚಿಕ ಜೀವನವು ದುಃಖಮಯವಾಗಿದೆ .
  • ಆಸೆಯೇ ದುಃಖಕ್ಕೆ ಮೂಲ ಕಾರಣ .
  • ಆಸೆಯನ್ನು ನಿಗ್ರಹಿಸುವುದರಿಂದ ಪುನರ್‌ಜನ್ಮವನ್ನು ಕೊನೆಗಾಣಿಸಿಸಬಹುದು .
  • ಆಸೆಯನ್ನು ಕೊನೆಗಾಣಿಸಲು ಅಷ್ಟಾಂಗ ಮಾರ್ಗಗಳನ್ನು ಅನುಸರಿಸಬೇಕು .

ಅಷ್ಟಾಂಗ ಮಾರ್ಗಗಳೆಂದರೆ ,

  • ಒಳ್ಳೆಯ ನಂಬಿಕೆ 2. ಒಳ್ಳೆಯ ಆಲೋಚನೆ 3 . ಒಳ್ಳೆಯ ಮಾತು 4 , ಒಳ್ಳೆಯ ನಡತೆ 5 , ಒಳ್ಳೆಯ ಪ್ರಯತ್ನ 6. ಒಳ್ಳೆಯ ಧ್ಯಾನ – 7. ಒಳ್ಳೆಯ ಜೀವನೋಪಾಯ 8. ಒಳ್ಳೆಯ ಮನಸ್ಥಿತಿ .
  • ಬುದ್ದನು ನಡತೆಗೆ ಮಹತ್ವ ಕೊಟ್ಟನೇ ವಿನಃ ಧರ್ಮಾಚರಣೆಗೆ ಮತ್ತು ಬಲಿಗಳಿಗಲ್ಲ .
  • ಅವನು ಜಾತಿಪದ್ಧತಿಯನ್ನು ವಿರೋಧಿಸಿ , ಸಮಾನತೆಯನ್ನು ಪ್ರತಿಪಾದಿಸಿದನು .

ಹೆಚ್ಚುವರಿ ಪ್ರಶ್ನೋತ್ತರಗಳು

2nd puc history chapter 4.2 question answer in kannada Mcq Questions

1.ಭಾರತದಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಶೋಷಣೆಯ ವಿರುದ್ಧ ಮೊಟ್ಟಮೊದಲು ಪ್ರತಿಭಟನೆ ಗಳನ್ನು ಕಂಡಿದ್ದು ಯಾವಾಗ ?

ಸಾ.ಶ.ಪೂ. 6 ನೇ ಶತಮಾನದಲ್ಲಿ .

2. ಪಾರ್ಶ್ವನಾಥನು ತನ್ನ ಎಷ್ಟನೇ ವಯಸ್ಸಿನಲ್ಲಿ ಜ್ಞಾನೋದಯವನ್ನು ಕಂಡುಕೊಂಡನು ?

30 ನೇ ವಯಸ್ಸಿನಲ್ಲಿ .

3. ಅಪರಿಗ್ರಹ ಎಂದರೇನು ?

ಅವಶ್ಯಕತೆಗಿಂತ ಹೆಚ್ಚಿನ ಸಂಪತ್ತನ್ನು ಹೊಂದದಿರುವುದು .

4.’ ಜಿನ ‘ ಎಂದರೆ ಯಾರು ?

ಇಂದ್ರೀಯಗಳನ್ನು ನಿಗ್ರಹಿಸಿದವನೇ ಜಿನ .

5. ಮಹಾವೀರನು ಯಾವಾಗ ನಿರ್ವಾಣ ಹೊಂದಿದನು ?

ಸಾ.ಶ.ಪೂ .527 ರಲ್ಲಿ

6. ಮಹಾವೀರ ಮತ್ತು ಬುದ್ಧ ಒಬ್ಬರನ್ನೊಬ್ಬರು ಭೇಟಿಯಾಗಿದ್ದರೇ ?

ಇಲ್ಲ

7.ಪಾರ್ಶ್ವನಾಥನ ಅನುಯಾಯಿಗಳಾದ ಬಿಳಿಯ ವಸ್ತ್ರಧಾರಿಗಳನ್ನು ಏನೆಂದು ಕರೆಯಲಾಗುವುದು ?

ಶ್ವೇತಾಂಬರರು .

8. ಸಹಸ್ರ ಕಂಬಗಳ ಬಸದಿ ಎಲ್ಲಿದೆ ?

ಕರ್ನಾಟಕದ ಮೂಡಬಿದಿರೆಯಲ್ಲಿದೆ .

FAQ:

1. ಬೌದ್ಧ ಧರ್ಮವನ್ನು ಸ್ಥಾಪಿಸಿದವರು ಯಾರು ?

ಗೌತಮ ಬುದ್ಧ

2. ಬುದ್ದನ ಮೊದಲ ಹೆಸರೇನು ?

ಬುದ್ಧನ ಮೊದಲ ಹೆಸರು ಸಿದ್ದಾರ್ಥ .

ಇತರೆ ವಿಷಯಗಳು:

ದ್ವಿತೀಯ ಪಿ.ಯು.ಸಿ ಕನ್ನಡ ನೋಟ್ಸ್

ದ್ವಿತೀಯ ಪಿ.ಯು.ಸಿ ಇತಿಹಾಸ ನೋಟ್ಸ್‌

ದ್ವಿತೀಯ ಪಿ.ಯು.ಸಿ ಎಲ್ಲಾ ಪಠ್ಯಪುಸ್ತಕಗಳ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌

1 ರಿಂದ 9ನೇ ತರಗತಿ ವರೆಗಿನ ಕಲಿಕಾ ಚೇತರಿಕೆ PDF

All Notes App

One thought on “ದ್ವಿತೀಯ ಪಿ.ಯು.ಸಿ ಅಧ್ಯಾಯ- 4.2 ಹೊಸ ಧರ್ಮಗಳ ಉದಯ ಇತಿಹಾಸ ನೋಟ್ಸ್‌ | 2nd Puc History Chapter 4.2 Notes in Kannada

Leave a Reply

Your email address will not be published. Required fields are marked *