rtgh

9th Standard Kannada Nadu Nudi Poem Notes | ಕನ್ನಡ ನಾಡು ನುಡಿ ಪದ್ಯದ ಪ್ರಶ್ನೋತ್ತರ ನೋಟ್ಸ್

9ನೇ ತರಗತಿ ಕನ್ನಡ ನಾಡು ನುಡಿ ಪದ್ಯದ ನೋಟ್ಸ್ ಪ್ರಶ್ನೋತ್ತರಗಳು, 9th Standard Kannada Nadu Nudi Poem Notes Question Answer Mcq Pdf Download in Kannada Medium Karnataka State Syllabus 2023, Kseeb Solutions for Class 9 Kannada Poem 8 Notes Kannada Nadu Nudi Poem Summary in Kannada Kannada Nadu Nudi 9th Standard Poem Notes 9th Class Kannada 8th Poem Notes 9th Class Kannada Naadu Nudi Question Answer Kannada Naadu Nudi Notes Class 9

 

ಪದ್ಯ ಭಾಗ – 8   

ಪದ್ಯದ ಹೆಸರು : ಕನ್ನಡ ನಾಡು ನುಡಿ

ಕೃತಿಕಾರರ ಪರಿಚಯ :

ಶ್ರೀವಿಜಯ       

ಶ್ರೀವಿಜಯನು ಕ್ರಿ.ಶ. ಸುಮಾರು 9 ನೆಯ ಶತಮಾನದಲ್ಲಿ ರಾಷ್ಟ್ರಕೂಟ ಚಕ್ರವರ್ತಿ ಅಮೋಘವರ್ಷ ನೃಪತುಂಗನ ಆಸ್ಥಾನದಲ್ಲಿ ಇದ್ದನು . ಈತನು ‘ ಕವಿರಾಜಮಾರ್ಗ ‘ ಎಂಬ ಲಾಕ್ಷಣಿಕ ಗ್ರಂಥವನ್ನು ರಚಿಸಿದ್ದಾನೆ .

ನಯಸೇನ :

ನಯಸೇನನು ಕ್ರಿ.ಶ. ಸುಮಾರು 12 ನೆಯ ಶತಮಾನದಲ್ಲಿ ಧಾರವಾಡ ಜಿಲ್ಲೆಯ ಮುಳುಗುಂದದಲ್ಲಿ ಜೀವಿಸಿದ್ದನು .

ಈತನು ‘ ಧರ್ಮಾಮೃತ ‘ ಎಂಬ ಚಂಪೂ ಕಾವ್ಯ ಕೃತಿಯನ್ನು ರಚಿಸಿದ್ದಾನೆ . ಕನ್ನಡದಲ್ಲಿ ಕಾವ್ಯ ರಚನೆಯ ಸಮಯದಲ್ಲಿ ಸಂಸ್ಕೃತ ಶಬ್ದಗಳನ್ನು ಸೇರಿಸುವ ಬಗ್ಗೆ ನಯಸೇನನು ಆಕ್ಷೇಪವನ್ನು ವ್ಯಕ್ತಪಡಿಸುತ್ತಾನೆ .

ಕಾವ್ಯ ರಚಿಸುವುದಾದರೆ ಕನ್ನಡದಲ್ಲಿ ರಚಿಸಬೇಕು ಇಲ್ಲವೇ ಸಂಸ್ಕೃತದಲ್ಲಿ ರಚಿಸಬೇಕು . ಇವೆರಡನ್ನು ಬೆರೆಸಿ ಕಾವ್ಯ ರಚನೆ ಮಾಡಿದರೆ ಅದು ಎಣ್ಣೆ – ತುಪ್ಪಗಳ ಮಿಶ್ರಣದಂತೆ ಅಸ್ವಾದ ಆಗುತ್ತದೆ ಎಂಬುದು ಆತನ ಅಭಿಪ್ರಾಯ .

ನೇಮಿಚಂದ್ರ :

ನೇಮಿಚಂದ್ರನು ಕ್ರಿ.ಶ. ಸುಮಾರು 12 ನೆಯ ಶತಮಾನದಲ್ಲಿ ಜೀವಿಸಿದ್ದನು ಈತನು ಲೀಲಾವತೀ ಪ್ರಬಂಧ ಹಾಗೂ ಅರ್ಧನೇಮಿ ಪುರಾಣ ಎಂಬ ಪ್ರಸಿದ್ಧ ಕಾವ್ಯಗಳನ್ನು ರಚಿಸಿದ್ದಾನೆ . ಈತನು ಕವಿಗಳ ಕಾವ್ಯಶಕ್ತಿಯ ಹೆಗ್ಗಳಿಕೆಯನ್ನು ಬಹು ಸ್ವಾರಸ್ಯಪೂರ್ಣವಾಗಿ ವರ್ಣಿಸಿದ್ದಾನೆ .

ಮಹಲಿಂಗರಂಗ :

ಮಹಲಿಂಗರಂಗನು ಕ್ರಿ.ಶ. ಸುಮಾರು 17 ನೆಯ ಶತಮಾನದಲ್ಲಿ ಜೀವಿಸಿದ್ದನು . ಈತನು ‘ ಅನುಭವಾಮೃತ ‘ ಎಂಬ ಕೃತಿಯನ್ನು ರಚಿಸಿದ್ದಾನೆ . ಇವನ ನಿಜನಾಮ ಶ್ರೀರಂಗ , ತನ್ನ ಹೆಸರಿನೊಂದಿಗೆ ತಂದೆಯ ಹೆಸರನ್ನು ಸೇರಿಸಿ ಮಹಲಿಂಗರಂಗ ಎಂದು ಕರೆದುಕೊಂಡಿದ್ದಾನೆ .

ಈತನ ಆರಾಧ್ಯ ದೈವ ಶ್ರೀಶೈಲ ಮಲ್ಲಿಕಾರ್ಜುನ , ಅನುಭವಾಮೃತವು ಕನ್ನಡದಿಂದ ಸಂಸ್ಕೃತಕ್ಕೆ ಅನುವಾದಗೊಂಡ ಕೃತಿಯೆಂಬುದು ಇನ್ನೊಂದು ವಿಶೇಷ .

ಆಂಡಯ್ಯ :

ಆಂಡಯ್ಯನು ಕ್ರಿಶ ಸುಮಾರು 13 ನೇ ಶತಮಾನದಲ್ಲಿ ಕದಂಬರ ದೊರೆ ಕಾಮದೇವನ ಆಶ್ರಯದಲ್ಲಿ ಇದ್ದನು . ಇವನು ‘ ಕಬ್ಬಿಗರ ಕಾವ ‘ ಅಥವಾ ‘ ಕಬ್ಬಿಗರ ಕಾವಂ ‘ ಎಂಬ ಚಂಪೂ ಕಾವ್ಯವನ್ನು ರಚಿಸಿದ್ದಾನೆ .

‘ ಕನ್ನಡ ನಾಡು – ನುಡಿ ‘ ಪದ್ಯದಲ್ಲಿ ಇರುವ ಎಲ್ಲಾ ಪದ್ಯಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ಬಿ.ಎಂ.ಶ್ರೀ . ಅವರ ಸಂಪಾದಕತ್ವದಲ್ಲಿ ಪ್ರಕಟಿಸಿರುವ ‘ ಕನ್ನಡ ಬಾವುಟ ‘ ಕೃತಿಯಿಂದ ಆರಿಸಿಕೊಳ್ಳಲಾಗಿದೆ .

ಆಶಯ ಭಾವ

9th Kannada Nadu Nudi Poem Saramsha in Kannada

ನಮ್ಮ ಕನ್ನಡ ನಾಡು ನುಡಿಯ ವಿಶಿಷ್ಟತೆಯನ್ನು ನಮ್ಮ ನಾಡಿನ ಕವಿಗಳು ಮನಸಾರ ಹೊಗಳಿರುವುದನ್ನು , ಅವರ ಭಾಷಾ ಕಾಳಜಿಯನ್ನು ಅವರ ಕಾವ್ಯಗಳಲ್ಲಿ ಕಾಣಬಹುದು . ಶ್ರೀ ವಿಜಯನು ನಮ್ಮ ಕನ್ನಡದ ಜನಪದರು ಅಕ್ಷರಸ್ತರಲ್ಲದಿದ್ದರೂ ಕಾವ್ಯ ಪ್ರಯೋಗ ಪರಿಣತರಾಗಿದ್ದರು ಎನ್ನುತ್ತಾನೆ .

ನಯಸೇನನು ನಮ್ಮ ಕನ್ನಡವು ಕೆಲವು ಪಂಡಿತರಿಂದ ಸಂಸ್ಕೃತಮಯವಾಗುವುದನ್ನು ಸಹಿಸದೇ ಶುದ್ಧ ಕನ್ನಡವೇ ಇರಬೇಕೆಂದು ಬಯಸುತ್ತಾನೆ .

ನೇಮಿಚಂದ್ರನು ಕನ್ನಡ ನಾಡಿನ ಶ್ರೇಷ್ಠಕಾವ್ಯಗಳ ರಚನೆಯ ಬಗ್ಗೆ ಹೊಗಳಿದ್ದಾನೆ . ಮಹಲಿಂಗರಂರನು ನಮ್ಮ ಕನ್ನಡವು ಹೇಗೆ ಸರಳ ಸುಂದರ ಎಂಬುದನ್ನು ಹಲವು ಉಪಮೇಯಗಳೊಂದಿಗೆ ಹೊಗಳಿ ಸಂಸ್ಕೃತಕ್ಕಿಂತ ಯಾವುದರಲ್ಲೂ ಕಡಿಮೆಯಿಲ್ಲ ಎನ್ನುತ್ತಾನೆ .

ಆಂಡಯ್ಯನು ಕನ್ನಡನಾಡಿನ ಪ್ರಕೃತಿಯ ರಮ್ಯತೆಯನ್ನು ಮೆಚ್ಚಿ ಹೀಗೆ ಕನ್ನಡನಾಡಿನ ಪ್ರಕೃತಿ , ಸಂಸ್ಕೃತಿ ಹಾಗೂ ಭಾಷಾ ಹಿರಿಮೆಗಳನ್ನು ವಿವಿಧ ಕವಿಗಳು ವರ್ಣಿಸಿರುವುದನ್ನು ಪರಿಚಯಿಸುವುದೇ ಪ್ರಸ್ತುತ ಪದ್ಯಪಾಠದ ಆಶಯವಾಗಿದೆ ,

ಪದಗಳ ಅರ್ಥ

ಅರಿದು – ತಿಳಿದು ;

ಚದುರ ( ದ ) -ಚತುರ ( ತೃ ) ಜಾಣ :

ಪರಿಣಿತ – ತಜ್ಞ  .

ಘೃತ- ತುಪ್ಪ

ಬೆರೆಸು – ಕೂಡಿಸು

ಅಗ್ಗಳ – ಶ್ರೇಷ್ಠ,

ಕಡಲು – ಸಮುದ್ರ

ಮೋಕ್ಷ – ಮುಕ್ತಿ

ಆರಯ – ಪಾಲನೆ

ಪದ- ಕ್ರಮ , ರೀತಿ

ಮತಿಗಳು – ಪ್ರತಿಭಾವಂತರು ;

ತೈಲ – ಎಣ್ಣೆ ;

ಸಕ್ಕದ ( ದ್ಧ ) – ಸಂಸ್ಕೃತ ( ತ್ಸ )

ಕಟ್ಟುಗೆ – ಸೇತುವೆ

ನರ – ಅರ್ಜುನ

ಉಷ್ಣ – ಶಾಖ ;

ಅ ) ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ

1. ಪದನರಿದು ನುಡಿಯುವವರು ಯಾರು ಎಂದು ಕವಿ ಹೇಳಿದ್ದಾನೆ ?

ಉತ್ತರ : ಪದನರಿದು ನುಡಿಯುವವರು ಕನ್ನಡ ನಾಡಿನ ಜನ

2 , ತುಪ್ಪದೊಡನೆ ಯಾವುದನ್ನು ಬೆರೆಸಬಾರದು ?

ಉತ್ತರ : ತುಪ್ಪದೊಡನೆ ತೈಲವನ್ನು ಬೆರೆಸಬಾರದು .

3. ಮಹಲಿಂಗರಂಗನ ಪ್ರಕಾರ ಸುಲಿದ ಬಾಳೆಯ ಹಣ್ಣಿನಂತೆ ಇರುವ ಭಾಷೆ ಯಾವುದು ?

ಉತ್ತರ : ಮಹಲಿಂಗರಂಗರವರ ಪ್ರಕಾರ ಸುಲಿದ ಬಾಳೆಯ ಹಣ್ಣನಂತೆ ಇರುವ ಭಾಷೆ ಕನ್ನಡ ,

ಆ ) ಈ ಕೆಳಗಿನ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯದಲ್ಲಿ ಉತ್ತರಿಸಿ .

1. ಕನ್ನಡಿಗರ ವಿಶೇಷತೆಯನ್ನು ಶ್ರೀ ವಿಜಯ ಹೇಗೆ ಸಾರಿದ್ದಾನೆ ?

ಉತ್ತರ : “ ಪದನಡೆದು ನುಡಿಯಲುಂ ನುಡಿ ದುದನಜೆದಾರಯಲುಮಾರ್ಪರಾ ನಾಡವರ್ಗಳ್ ಚದುರರ್ ನಿಜದಿಂ ಕುಜೆತೋ ದದೆಯಂ ಕಾವ್ಯ ಪ್ರಯೋಗ ಪರಿಣಿತ ಮತಿಗಳ ”

ಅಂದರೆ ಕನ್ನಡ ನಾಡಿನ ಜನತೆ ಕ್ರಮವರಿತು ನುಡಿಯಬಲ್ಲರು ನುಡಿದಿದ್ದನ್ನು ಅರಿತು ಪಾಲನೆ ಮಾಡಬಲ್ಲರು ಯಾವುದೇ ಅಕ್ಷರ ಜ್ಞಾನವಿಲ್ಲದಿದ್ದರು ಕಾವ್ಯ ರಚಿಸುವಂತಹ ಪರಿಣತರು ಕನ್ನಡನಾಡಿನ ಜನತೆ ನಿಜಕ್ಕೂ ಚತುರರು ಬುದ್ಧಿವಂತರು ಎಂದು ನಾಡಿನ ಜನಪದರ ಕಾವ್ಯರಚಿಸುವಂತಹ ಪರಿಣತಿಯನ್ನು ಕುರಿತು ಹೇಳಿದ್ದಾನೆ .

2. ಕನ್ನಡ ಮತ್ತು ಸಂಸ್ಕೃತ ಭಾಷಾ ಬಳಕೆಯ ಬಗ್ಗೆ ನಯಸೇನ ಏನು ಹೇಳುತ್ತಾನೆ ?

ಉತ್ತರ : “ ಸಕ್ಕದಮಂ ಪೇಡೆ ನೆಜ ಸಕ್ಕದಮಂ ಪೇಟಿ ಶುದ್ಧ ಕನ್ನಡದೊಳ್ ತಂ ದಿಕ್ಕುವುದೇ ಸಕ್ಕದಮಂ ತಕ್ಕುದೆ ಬೆರೆಸಿ ಧೃತಮುಮಂ ತೈಲಮುಮಂ ” ನಮಗೆ ತುಪ್ಪವೂ ಬೇಕು , ಎಣ್ಣೆಯೂ ಬೇಕು , ಸಂಸ್ಕೃತವೂ ಬೇಕು , ಕನ್ನಡವೂ ಬೇಕು . ಆದರೆ ಎಣ್ಣೆ – ತುಪ್ಪದ ಅಸ್ವಾದು ಮಿಶ್ರಣ ಬೇಡ ಅಂದರೆ

ಕನ್ನಡ ಸಂಸ್ಕೃತದ ಮಿಶ್ರಣ ಬೇಡ ಎಂದಿದ್ದಾನೆ . ಶುದ್ದ ಕನ್ನಡದೊಳ್ ತಂದಿಕ್ಕುವುದೆ ಸಕ್ಕದಮಂ ಎಂದಿದ್ದಾನೆ . ಕವಿ ನಯಸೇನ ,

3. ಕವೀಂದ್ರರ ಶ್ರೇಷ್ಠತೆಯನ್ನು ನೇಮಿಚಂದ್ರನು ಹೇಗೆ ವರ್ಣಿಸಿದ್ದಾನೆ ?

ಉತ್ತರ : “ ಕಟ್ಟುಗೆ ಕಟ್ಟದಿರ್ಕೆ ಕಡಲಂ ಕಪಿಸಂತತಿ ವಾಮನಕ್ರಮಂ ಮುಟ್ಟುಗೆ ಮುಟ್ಟದಿರ್ಕೆ ಮುಗಿಲಂ ಹರನಂ ನರಸೊತ್ತಿ ಗಂಟಲಂ ಮೆಟ್ಟುಗೆ ಮೆಟ್ಟದಿರ್ಕೆ ಕವಿಗಳ ಕೃತಿಬಂಧದೊಳ ಕಟ್ಟಿದರ್ ಮುಟ್ಟಿದರೆತ್ತಿ

ಮೆಟ್ಟಿದರದೇನಳವಗ್ಗಳಮೋಕವೀಂದ್ರರಾ ” ಕಪಿಸಂತತಿ ಸೇತುವೆಯನ್ನು ಕಟ್ಟಿದಂತೆ ಹರನು , ನರನು ಮುಗಿಲನ್ನು ಒತ್ತಿ ಹಿಡಿದಂತೆ , ಕವಿಗಳು ಶ್ರೇಷ್ಟ ಕೃತಿಗಳನ್ನು ರಚಿಸಿದವರು ಎಂದು ಕವಿ ನೇಮಿಚಂದ್ರ ಕನ್ನಡ ಕವೀಂದರ ಶ್ರೇಷ್ಠತೆಯನ್ನು ವರ್ಣಿಸಿದ್ದಾರೆ .

4. ಕನ್ನಡ ನುಡಿಯಲ್ಲೇ ಮೋಕ್ಷ ಸಾಧನೆ ಎಂದು ಕವಿ ಮಹಲಿಂಗರಂಗ ಹೇಗೆ ಸಾಧಿಸುತ್ತಾರೆ ?

ಉತ್ತರ : “ ಸುಲಿದ ಬಾಳೆಯ ಹಣ್ಣಿನಂದದಿ ಕಳೆದ ಸಿಗುರಿನ ಕಬ್ಬಿನಂದದಿ ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪ ಲಲಿತವಹ ಕನ್ನಡದ ನುಡಿಯಲಿ ತಿಳಿದು ತನ್ನೊಳು ತನ್ನ ಮೋಕ್ಷವ ಗಳಿಸಿಕೊಂಡೊರೆ ಸಾಲದೇ ಸಂಸ್ಕೃತದಲಿನ್ನೇನು ” ?

ಕನ್ನಡ ಭಾಷೆಯು ಸುಲಿದ ಬಾಳೆಯ ಹಣ್ಣಿನಂತೆ , ಸಿಗುರು ತೆಗೆದ ಕಬ್ಬಿನಂತೆ ಉಷ್ಣ ಆಳಿದ ಹಾಲಿನಂತೆ , ಸುಲಭವೂ ರುಚಿಯುಳ್ಳದ್ದೂ ಆಗಿದೆ . ಆದ್ದರಿಂದ ಕನ್ನಡ ಭಾಷೆಯಿಂದಲೇ ಮೋಕ್ಷಗಳಿಸಿಕೊಂಡರೆ ಸಾಕು ಸಂಸ್ಕೃತದಲ್ಲಿದೆ ಎಂದು ಕವಿ ಮಹಲಿಂಗರಂಗ ಪ್ರಶ್ನಿಸಿದ್ದಾರೆ

5. ಕನ್ನಡ ನಾಡಿನ ಪಾಕೃತಿಕ ವರ್ಣನೆಯನ್ನು ಆಂಡಯ್ಯ ಕವಿ ಹೇಗೆ ಸಾರಿದ್ದಾರೆ ?

ಉತ್ತರ : “ ಮಲ್ಲಿಗೆಯಲ್ಲದೆ ಸಂಪಗೆಯಲ್ಲದೆ ದಾಳಿಂಬವಲ್ಲದೊಪ್ಪುವ ಚೆಂದೆಂ ಗಲ್ಲದೆ ಮಾವಲ್ಲದೆ ಕೌಂ ಗಲ್ಲದೆ ಗಿಡುಮರಗಳೆಂಬುವಿಲ್ಲಾ ನಾಡೊಳ್ ” ಮಲ್ಲಿಗೆ , ಸಂಪಿಗೆ , ದಾಳಿಂಬೆ , ಒಪ್ಪುವ ಚಂದದ ಮಾವು, ತೆಂಗು, ಬಾಳೆ ಹೀಗೆ ಹಲವಾರು ಗಿಡ ಮರಗಳಿಂದ ಕೂಡಿರುವ ಕನ್ನಡನಾಡು ಅತ್ಯಂತ ಸಂಪದ್ಭರಿತವಾಗಿದೆ ಎಂದು ಕವಿ ಆಂಡಯ್ಯನವರು ಕನ್ನಡನಾಡಿನ ಪ್ರಾಕೃತಿಕ ವರ್ಣನೆಯನ್ನು ಸಾರಿದ್ದಾರೆ .

ಇ ) ಕೆಳಗಿನ ಪ್ರಶ್ನೆಗೆ ಎಂಟು ಹತ್ತು ವಾಕ್ಯದಲ್ಲಿ ಉತ್ತರಿಸಿ .

1. ಕನ್ನಡ ನಾಡಿನ ವಿಸ್ತಾರ , ಪ್ರಾಕೃತಿಕ ಸಂಪತ್ತಿನ ಬಗ್ಗೆ ಕವಿಗಳು ಹೇಗೆ ವರ್ಣಿಸಿದ್ದಾರೆ ?

ಉತ್ತರ : ಕನ್ನಡ ನಾಡು ನುಡಿಯ ವೈಶಿಷ್ಟ್ಯ ಕುರಿತು ಪ್ರಾಚೀನ ಕಾಲದಿಂದಲೂ ಕವಿ ಪರಂಪರೆ ಮನಸಾರೆ ಬಣ್ಣಿಸುತ್ತಾ ಬಂದಿದೆ . ಕನ್ನಡ ಸಂಸ್ಕೃತಿ , ಸೊಬಗು ವೈಭವ , ಸೌಂದರ್ಯ ಅಪೂರ್ವ ಹಾಗೂ ಅವಿಸ್ಮರಣೀಯ .

ಸಂಸ್ಕೃತ ಪ್ರಭಾವ ದಟ್ಟವಾಗಿದ್ದ ಆ ಕಾಲದಲ್ಲಿ ಕನ್ನಡದ ಹಿರಿಮೆ ಹಾಗೂ ಸಂಸ್ಕೃತಿಯನ್ನು ಮೆರೆದ ಸಾಹಸ ಅವರದು .

ಕನ್ನಡನಾಡು ವಿಸ್ತಾರವಾದ ಭೂಮಿ , ಇಲ್ಲಿನ ಜನ ಪ್ರತಿಭಾ ಸಂಪನ್ನರು , ವಿಶೇಷವಾಗಿ ‘ ಕುಣಿತೋ ದದೆಯಂ ಕಾವ್ಯ ಪ್ರಯೋಗ ಪರಿಣಿತ ಮತಿಗಳ’ಕಾವ್ಯ ಸೃಷ್ಟಿಯಲ್ಲಿ ಮೇಲುಗೈ ಪಡೆದವರು .

ಇಲ್ಲಿನ ಪ್ರಾಕೃತಿಕ ಸಂಪತ್ತು ಶ್ರೀಮಂತವಾದುದು ಭೌಗೋಳಿಕ ಹರವಿನ ಸಾಂಸ್ಕೃತಿಕ ವೈಭವ ಮನೋಹರವಾಗಿದೆ . ಇಲ್ಲಿ ಮಲ್ಲಿಗೆ , ಸಂಪಿಗೆಯ ಪರಿಮಳವಿದ ದಾಳಿಂಬೆ , ತೆಂಗು , ಮಾವು , ಬಾಳೆ ಹೀಗೆ ಹಲವಾರು ಗಿಡಮರಗ ಳಿಂದ ತುಂಬಿದ್ದು ಪ್ರಾಕೃತಿಕವಾಗಿ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ .

2. ಕನ್ನಡ ಭಾಷೆ ಹಾಗೂ ಸಾಹಿತ್ಯದ ಬಗ್ಗೆ ಕವಿಗಳಿಗಿರುವ ಅಭಿಮಾನ ಹೇಗೆ ವ್ಯಕ್ತವಾಗಿದೆ . ?

ಉತ್ತರ : ಕನ್ನಡ ನಾಡು ನುಡಿಯ ವೈಶಿಷ್ಟ್ಯ ಕುರಿತು ಪ್ರಾಚೀನ ಕಾಲದಿಂದಲು ಕವಿ ಪರಂಪರೆ ಮನಸಾರೆ ಬಣ್ಣಿಸುತ್ತಾ ಬಂದಿದೆ ಕನ್ನಡ ನಾಡಿನ ಜನತೆ ಕ್ರಮವರಿತು ನಡೆಯಬಲ್ಲರು , ನುಡಿದದ್ದನ್ನು ಅರಿತು ಪಾಲನೆ ಮಾಡಬಲ್ಲರು .

ಕಾವ್ಯರಚಿಸುವಂತಹ ಪರಿಣತರು , ಕನ್ನಡ ನಾಡಿನ ಜನತೆ ನಿಜಕ್ಕೂ ಚತುರರು ಎಂದು ಶ್ರೀ ವಿಜಯ ತನ್ನ ಕವಿರಾಜಮಾರ್ಗದಲ್ಲಿ ತಿಳಿಸಿದ್ದಾನೆ . ನಮಗೆ ತುಪ್ಪವೂ ಬೇಕು , ಎಣ್ಣೆಯು ಬೇಕು , ಸಂಸ್ಕೃತವೂ ಬೇಕು .

ಕನ್ನಡವೂ ಬೇಕು , ಆದರೆ ತುಪ್ಪದ ಅಸ್ವಾದು ಮಿಶ್ರಣ ಬೇಡ ಅಂದರೆ ಕನ್ನಡ ಸಂಸ್ಕೃತದ ಮಿಶ್ರಣಬೇಡ ಎಂದಿದ್ದಾನೆ . ಶುದ್ಧ ಕನ್ನಡದೊಳ್ ತಂದಿಕ್ಕುವುದೆ ಸಕ್ಕದಮಂ ಎಂದಿದ್ದಾನೆ

ಕವಿ ನಯಸೇನ , ಕಪಿಸಂತತಿ ಸೇತುವೆಯನ್ನು ಕಟ್ಟಿದಂತೆ , ಹರನು , ನರನು ಮುಗಿಲನ್ನು ಒತ್ತಿ ಹಿಡಿದಂತೆ , ಕವಿಗಳು ಶ್ರೇಷ್ಟವಾದ ಕೃತಿಗಳನ್ನು ರಚಿಸಿದರು

ಎಂದು ಕವಿ ನೇಮಿಚಂದ್ರ ಕನ್ನಡ ಕವೀಂದ್ರರ ಶ್ರೇಷ್ಟತೆಯನ್ನು ವರ್ಣಿಸಿದ್ದಾನೆ ಕನ್ನಡ ಭಾಷೆಯು ಸುಲಿದ ಬಾಳೆಯ ಹಣ್ಣನೆಂತೆ , ಸಿಗುರು ತೆಗೆದ ಕಬ್ಬಿನಂತೆ ಉಷ್ಣ ಆಳಿದ ಹಾಲಿನಂತೆ , ಸುಲಭವೂ ರುಚಿಯುಳ್ಳದ್ದೂ

ಆಗಿದೆ ಆದ್ದರಿಂದ ಕನ್ನಡ ಭಾಷೆಯಿಂದಲೆ ಮೋಕ್ಷಗಳಿಸಿಕೊಂಡರೆ ಸಾಕು ಸಂಸ್ಕೃತದಲ್ಲೆನಿದೆ ಎಂದು ಕವಿ ಮಹಲಿಂಗರಂಗರು ಕನ್ನಡ ಭಾಷೆ ಸಾಹಿತ್ಯದ ಬಗ್ಗೆ ಅಭಿಮಾನದಿಂದ ನುಡಿದಿದ್ದಾರೆ

ಈ ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ ,

1. ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ ,

ಆಯ್ಕೆ : ಈ ವಾಕ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತು ಬಿ.ಎಂ.ಶ್ರೀ , ಅವರ ಸಂಪಾದಕತ್ವದಲ್ಲಿ ಪ್ರಕಟಿಸಿರುವ ‘ ಕನ್ನಡ ಬಾವುಟ ‘ ಕೃತಿಯಿಂದ ಆಯ್ದ ‘ ಕನ್ನಡ ನಾಡು – ನುಡಿ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಈ ಮಾತನ್ನು ಕವಿರಾಜಮಾರ್ಗಕಾರ ಶ್ರೀವಿಜಯ ಕನ್ನಡ ನಾಡಿನ ಜನಪದರನ್ನು ಹೊಗಳುವ ಸಂದರ್ಭದಲ್ಲಿ ಹೇಳಿದ್ದಾನೆ . ಪ್ರಾಚೀನ ಜನಪದರಿಗೆ ಅಕ್ಷರದ ಅರಿವು ಇಲ್ಲದಿದ್ದರು ಸಹ ,

ದೇಶಿ ನುಡಿಯಲ್ಲಿ ಉತ್ತಮವಾದ ಸಾಹಿತ್ಯರಚನಾ ಸಾಮರ್ಥ್ಯವನ್ನು ಹೊಂದಿದ್ದರು . ಶಾಸ್ತ್ರ ಸಾಹಿತ್ಯವನ್ನು ಅರಿಯದಿದ್ದರೂ ಅದಕ್ಕೆ ಸರಿಸಮಾನವಾದ ಸಾಹಿತ್ಯವನ್ನು ರಚಿಸಿದ್ದರು ಎಂದು ಹೇಳುವಾಗ ಈ ಮಾತು ಬಂದಿದೆ

ಸ್ವಾರಸ್ಯ : ಕನ್ನಡ ನಾಡಿನ ಜನಪದರ ಸಾಹಿತ್ಯ ಶಕ್ತಿಯ ಬಗ್ಗೆ , ಕನ್ನಡ ನಾಡು , ನುಡಿ , ಜನತೆಯ ಬಗೆಗಿರುವ ಈ ಮಾತುಗಳು ಸ್ವಾರಸ್ಯಕರವಾಗಿವೆ .

2. ತಕ್ಕುದೆ ಬೆರೆಸಲೆ ಧೃತಮುಮಂ ತೈಲಮುಮಂ .

ಆಯ್ಕೆ : ಈ ವಾಕ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತು ಬಿ.ಎಂ.ಶ್ರೀ . ಅವರ ಸಂಪಾದಕತ್ವದಲ್ಲಿ ಪ್ರಕಟಿಸಿರುವ ‘ ಕನ್ನಡ ಬಾವುಟ ‘ ಕೃತಿಯಿಂದ ಆಯ್ದ “ ಕನ್ನಡ ನಾಡು – ನುಡಿ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಅನೇಕ ಕವಿಗಳು ಕನ್ನಡದಲ್ಲಿ ಉತ್ತಮ ಕಾವ್ಯಗಳನ್ನು ರಚಿಸಿದರೂ ಅದನ್ನು ಸಂಸ್ಕೃತಮಯವಾಗಿ ಮಾಡಿಬಿಟ್ಟರು . ಇದನ್ನು ಕಂಡ ಕವಿ ನಯಸೇನ ನಮಗೆ ತುಪ್ಪವೂ ಬೇಕು ,

ಎಣ್ಣೆಯೂ ಬೇಕು , ಸಂಸ್ಕೃತವೂ ಬೇಕು , ಕನ್ನಡವೂ ಬೇಕು . ಆದರೆ ಎಣ್ಣೆ ತುಪ್ಪದ ಆಸ್ವಾದು ಮಿಶ್ರಣ ಬೇಡ ಎಂದು ಹೇಳುವ ಸಂದರ್ಭದಲ್ಲಿ ಕವಿ ನಯಸೇನನು ಈ ಮಾತನ್ನು ಹೇಳಿದ್ದಾನೆ .

ಸ್ವಾರಸ್ಯ : ಎಣ್ಣೆ ತುಪ್ಪ ಹೇಗೆ ಬೇರೆ ಬೇರೆ ರುಚಿಯಾಗಿರುತ್ತವೆಯೇ ಹಾಗೆಯೇ ಕನ್ನಡ ಭಾಷೆ , ಸಂಸ್ಕೃತ ಭಾಷೆಗಳು ಸಹ ಅದರಿಂದ ಇವುಗಳ ಮಿಶ್ರಣ ಕಾವ್ಯ ರಚನೆ ಬೇಡ ಎಂಬ ಮಾತಿನಲ್ಲಿ ಕನ್ನಡ ಭಾಷೆಯ ಬಗ್ಗೆ ತೋರಿರುವ ಅಭಿಮಾನ ಸ್ವಾರಸ್ಯಕರವಾಗಿದೆ .

3. ಕಟ್ಟುಗೆ ಕಟ್ಟುದಿರ್ಕೆ ಕಡಲಂ ಕಪಿಸಂತತಿ ,

ಆಯ್ಕೆ : ಈ ವಾಕ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತು ಬಿ.ಎಂ.ಶ್ರೀ . ಅವರ ಸಂಪಾದಕತ್ವದಲ್ಲಿ ಪ್ರಕಟಿಸಿರುವ ‘ ಕನ್ನಡ ಬಾವುಟ ‘ ಕೃತಿಯಿಂದ ಆಯ್ದ ‘ ಕನ್ನಡ ನಾಡು – ನುಡಿ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ: ಕಪಿ ಸಂತತಿಯು ಕಡಲಿಗೆ ಸೇತುವೆಯನ್ನು ಕಟ್ಟಿದಂತೆ , ಹರನು ನರನು ಮುಗಿಲನ್ನು ಗಂಟಲಲ್ಲಿ ಒತ್ತಿ ಹಿಡಿದಂತೆ , ಕನ್ನಡ ಕವಿಗಳು ಹಂತ ಹಂತವಾಗಿ ಕಾವ್ಯಗಳನ್ನು ರಚಿಸುತ್ತಾ ,

ಉತ್ತಮ ಕೃತಿಗಳನ್ನು ರಚಿಸಿ ಕವೀಂದ್ರರೇ ಆದರೆಂದು ಹೇಳುವ ಸಂದರ್ಭದಲ್ಲಿ ನೇಮಿಚಂದ್ರ ಕನ್ನಡ ಕವಿಗಳ ಮಹತ್ವವನ್ನು ತಿಳಿಸುತ್ತಾ ಹೇಳಿದ್ದಾರೆ .

ಸ್ವಾರಸ್ಯ : ಕನ್ನಡ ನಾಡಿನ ಕವಿಗಳು ತಮ್ಮ ಕಾವ್ಯಗಳಲ್ಲಿ ಎಂತಹ ವಿಷಯಗಳನ್ನಾದರೂ ಕಟ್ಟಿ ಕೊಡುವ ಶಕ್ತಿ ಉಳ್ಳವರು ಎಂದು ಅವರ ಬಗ್ಗೆ ಇರುವ ಅಭಿಮಾನ ಸ್ವಾರಸ್ಯಕರವಾಗಿದೆ .

4. ಕಳೆದ ಸಿಗುರಿನ ಕಬ್ಬಿನಂದದಿ ,

ಆಯ್ಕೆ : ಈ ವಾಕ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತು ಬಿ.ಎಂ.ಶ್ರೀ . ಅವರ ಸಂಪಾದಕತ್ವದಲ್ಲಿ ಪ್ರಕಟಿಸಿರುವ “ ಕನ್ನಡ ಬಾವುಟ ‘ ಕೃತಿಯಿಂದ ಆಯ್ದ ‘ ಕನ್ನಡ ನಾಡು – ನುಡಿ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ

ಸಂದರ್ಭ : ಕನ್ನಡ ಭಾಷೆಯು ಸುಲಿದ ಬಾಳೆಯ ಹಣ್ಣನೆಂತೆ ಸಿಗುರು ತೆಗೆದ ಕಬ್ಬಿನಂತೆ , ಉಷ್ಟ ಅಳಿದ ಹಾಲಿನಂತೆ ಸುಲಭವೂ ರುಚಿಯುಳ್ಳದ್ದೂ ಆಗಿದೆ .

ಮೋಕ್ಷವನ್ನು ಗಳಿಸಿಕೊಳ್ಳಲು ಈ ಭಾಷೆಯೇ ಸಾಕು ಸಂಸ್ಕೃತದಲ್ಲೆನಿದೆ ? ಎಂದು ಪ್ರಶ್ನಿಸಿದ ಸಂದರ್ಭದಲ್ಲಿ ಕವಿ ಮಹಲಿಂಗರಂಗರವರು ಈ ಮಾತನ್ನು ಹೇಳಿದ್ದಾರೆ .

ಸ್ವಾರಸ್ಯ : ಕನ್ನಡ ಭಾಷೆಯನ್ನು ಕಲಿಯಲು ಸರಳವೂ , ಸುಂದರವೂ ಆದ ಭಾಷೆಯಾಗಿದೆ ಕನ್ನಡವನ್ನು ಬೇಗ ಕಲಿತು ಮೋಕ್ಷ ಸಂಪಾದನೆ ಮಾಡಬಹುದು ಎಂಬ ಕವಿ ಕನ್ನಡಾಭಿಮಾನದ ಮಾತು ಸ್ವಾರಸ್ಯಕರವಾಗಿದೆ .

5. ದಾಳಿಂಬವಲ್ಲದೊಪುವ ಚೆಂದೆಂ

ಆಯ್ಕೆ : ಈ ವಾಕ್ಯವನ್ನು ಕನ್ನಡ ಸಾಹಿತ್ಯ ಪರಿಷತ್ತು ಬಿ.ಎಂ.ಶ್ರೀ . ಅವರ ಸಂಪಾದಕತ್ವದಲ್ಲಿ ಪ್ರಕಟಿಸಿರುವ ‘ ಕನ್ನಡ ಬಾವುಟ ‘ ಕೃತಿಯಿಂದ ಆಯ್ದ ‘ ಕನ್ನಡ ನಾಡು – ನುಡಿ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಕನ್ನಡ ನಾಡು ಮಲ್ಲಿಗೆ , ಸಂಪಿಗೆಯ ಪರಿಮಳವಿದೆ ದಾಳಿಂಬೆ , ತೆಂಗು , ಮಾವು , ಬಾಳೆ ಹೀಗೆ ಹಲವಾರು ಗಿಡಮರಗಳಿಂದ ತುಂಬಿದ್ದು ಪ್ರಾಕೃತಿಕವಾಗಿ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ . ಎಂದು ಕವಿ ಹೇಳುವ ಸಂದರ್ಭದಲ್ಲಿ ಈ ಮಾತು ಬಂದಿದೆ .

ಸ್ವಾರಸ್ಯ : ಆಂಡಯ್ಯ ಕವಿಗೆ ಕನ್ನಡ ನಾಡು , ಕನ್ನಡ ಭಾಷೆಯ ಬಗ್ಗೆ ಇರುವ ಅಭಿಮಾನ ಸ್ವಾರಸ್ಯಕರವಾಗಿದೆ .

ಕೊಟ್ಟಿರುವ ಪದ್ಯಭಾಗಗಳನ್ನು ಪೂರ್ಣಗೊಳಿಸಿ ಕಂಠಪಾಠ ಮಾಡಿರಿ .

ಪದನರದು ನುಡಿಯಲುಂ ನುಡಿ ‌

ದುದನಟಿದಾರಯಲುಮಾರ್ಪರಾ ನಾಡವರ್ಗಳ್|

ಚದುರರ್ ನಿಜದಿಂ ಕುಚಿತೋ‌

ದದೆಯಂ ಕಾವ್ಯ ಪ್ರಯೋಗ ಪರಿಣಿತ ಮತಿಗಳ್|

ಮಲ್ಲಿಗೆಯಲ್ಲದೆ ಸಂಪಗೆ|

ಯಲ್ಲದೆ ದಾಳಿಂಬವಲ್ಲದೊಡ್ಡುವ ಚೆಂದೆಂ||

ಗಲ್ಲದೆ ಮಾವಲ್ಲದೆ ಕೌಂ|

ಗಲ್ಲದೆ ಗಿಡುಮರಗಳೆಂಬುವಿಲ್ಲಾ ನಾಡೊಳ್||                      -ಆಂಡಯ್ಯ

FAQ :

1. ಪದನರಿದು ನುಡಿಯುವವರು ಯಾರು ಎಂದು ಕವಿ ಹೇಳಿದ್ದಾನೆ ?

ಉತ್ತರ : ಪದನರಿದು ನುಡಿಯುವವರು ಕನ್ನಡ ನಾಡಿನ ಜನ

2. ತುಪ್ಪದೊಡನೆ ಯಾವುದನ್ನು ಬೆರೆಸಬಾರದು ?

ಉತ್ತರ : ತುಪ್ಪದೊಡನೆ ತೈಲವನ್ನು ಬೆರೆಸಬಾರದು .

3. ಮಹಲಿಂಗರಂಗನ ಪ್ರಕಾರ ಸುಲಿದ ಬಾಳೆಯ ಹಣ್ಣಿನಂತೆ ಇರುವ ಭಾಷೆ ಯಾವುದು ?

ಉತ್ತರ : ಮಹಲಿಂಗರಂಗರವರ ಪ್ರಕಾರ ಸುಲಿದ ಬಾಳೆಯ ಹಣ್ಣನಂತೆ ಇರುವ ಭಾಷೆ ಕನ್ನಡ ,

ಇತರೆ ವಿಷಯಗಳು:

9th Standard All Subject Notes

9th Standard Kannada Textbook karnataka Pdf 

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Subjects Notes

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

9ನೇ ತರಗತಿ ಎಲ್ಲಾ ಪಾಠ ಮತ್ತು ಪದ್ಯದ ನೋಟ್ಸ್ ಪಿಡಿಎಫ್ ಬುಕ್ಸ್ ಗಳನ್ನೂ ಟೆಲಿಗ್ರಾಮ್ ಗೆ ಜಾಯಿನ್ ಆಗಿ ಅಲ್ಲಿಂದ  ಎಲ್ಲಿ ಡೌನ್ಲೋಡ್ ಮಾಡಬಹುದು

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ 9ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *